Select Your Language

Notifications

webdunia
webdunia
webdunia
webdunia

ತಾಳ್ಮೆ ಕಳೆದುಕೊಂಡ ಯುವರಾಜ್ ಸಿಂಗ್, ವಿರಾಟ್ ನಾಯಕತ್ವದ ಬಗ್ಗೆ ಹೇಳಿದ್ದೇನು ಗೊತ್ತಾ?

ತಾಳ್ಮೆ ಕಳೆದುಕೊಂಡ ಯುವರಾಜ್ ಸಿಂಗ್, ವಿರಾಟ್ ನಾಯಕತ್ವದ ಬಗ್ಗೆ ಹೇಳಿದ್ದೇನು ಗೊತ್ತಾ?
ನವದೆಹಲಿ , ಸೋಮವಾರ, 6 ಜೂನ್ 2016 (14:17 IST)
ವಿರಾಟ್ ಕೊಹ್ಲಿ ಸಂಪೂರ್ಣವಾಗಿ ಭಾರತ ತಂಡದ ನಾಯಕರಾಗುವ ಬಗ್ಗೆ ನಿಮ್ಮ ಅಭಿಪ್ರಾಯವೇನು? ಎನ್ನುವ ಸುದ್ದಿಗಾರರ ಪ್ರಶ್ನೆಗೆ ತಾಳ್ಮೆ ಕಳೆದುಕೊಂಡು, ನಾನು ಇಲ್ಲಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದಿದ್ದೇನೆಯೇ ಹೊರತು ಕ್ರಿಕೆಟ್ ಹೇಳಿಕೆ ನೀಡಲು ಅಲ್ಲ ಎಂದು ಗುಡುಗಿದ ಘಟನೆ ವರದಿಯಾಗಿದೆ. 
 
ಸ್ಮೈಲ್ ಫೌಂಡೇಶನ್ ಅನಾಥ ಮಕ್ಕಳ ಏಳಿಗೆಗಾಗಿ ಹಣ ದಾನವಾಗಿ ಪಡೆಯಲು ಆಯೋಜಿಸಿದ ಕಾರ್ಯಕ್ರಮಕ್ಕೆ ಭಾರತದ ಟೆಸ್ಟ್ ಕ್ರಿಕೆಟ್ ತಂಡದ ನಾಯಕರಾದ ವಿರಾಟ್ ಕೊಹ್ಲಿ ಧರ್ಮಾರ್ಥ ಭೋಜನಕೂಟ ಏರ್ಪಡಿಸಿದ್ದರು.  
 
ಖ್ಯಾತ ಕ್ರಿಕೆಟಿಗರು, ಬಾಲಿವುಡ್ ಸೆಲೆಬ್ರಿಟಿಗಳು ಮತ್ತು ಖ್ಯಾತ ಉದ್ಯಮಿದಾರರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಮ್ಮ ಉದಾರತೆಯನ್ನು ಮೆರೆದರು.
 
ಕಾರ್ಯಕ್ರಮ ಆರಂಭವಾಗುವ ಮುನ್ನ ನಡೆದ ಘಟನೆಯೊಂದನ್ನು ಯುವರಾಜ್ ಸಿಂಗ್ ಗಮನಿಸಲಿಲ್ಲ ಎನ್ನಲಾಗಿದೆ. 
 
ಟೀಂ ಇಂಡಿಯಾ ತಂಡದ ಸಂಪೂರ್ಣ ನಾಯಕತ್ವವನ್ನು ವಿರಾಟ್ ಕೊಹ್ಲಿಗೆ ವಹಿಸಿದಲ್ಲಿ ದೇಶದ ಕ್ರಿಕೆಟ್ ಭವಿಷ್ಯ ಉಜ್ವಲವಾಗಲಿದೆಯೇ ಎನ್ನುವ ಪ್ರಶ್ನೆಯಿಂದ ಸಿಡಿಮಿಡಿಗೊಂಡ ಯುವರಾಜ್ ಸಿಂಗ್, ನಾನು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದಿದ್ದೇನೆಯೇ ಹೊರತು ಕ್ರಿಕೆಟ್ ಬಗ್ಗೆ ಮಾತನಾಡಲು ಅಲ್ಲ ಎಂದು ಸುದ್ದಿಗಾರರ ಮತ್ತೊಂದು ಪ್ರಶ್ನೆಗೆ ಕಾಯದೆ ಬಿರುಗಾಳಿಯಂತೆ ಹೊರನಡೆದಿರುವುದು ಉಭಯ ಆಟಗಾರರಲ್ಲಿ ವೈಮನಸ್ಸು ಹೆಚ್ಚಾಗಿದೆಯೇ ಎನ್ನುವ ಅನುಮಾನ ಅಭಿಮಾನಿಗಳಲ್ಲಿ ಕಾಡುತ್ತಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯ ಸರಕಾರ ಭೂಮಿ ನೀಡಿದಲ್ಲಿ ಎನ್‌‍ಸಿಎ ಸ್ಥಳಾಂತರವಿಲ್ಲ: ನಿರಂಜನ್ ಶಾಹ್