Webdunia - Bharat's app for daily news and videos

Install App

Virat Kohli: ಬೆಂಗಳೂರಿನಲ್ಲಿ ಹೇಗಿರುತ್ತೋ ಕಾಯ್ತಿದ್ದೀನಿ.. ವಿರಾಟ್ ಕೊಹ್ಲಿ ವಿಡಿಯೋ ವೈರಲ್

Krishnaveni K
ಬುಧವಾರ, 4 ಜೂನ್ 2025 (10:33 IST)
ಬೆಂಗಳೂರು: ಐಪಿಎಲ್ 2025 ರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದ ಆರ್ ಸಿಬಿ ಚಾಂಪಿಯನ್ ಆದ ಬಳಿಕ ವಿರಾಟ್ ಕೊಹ್ಲಿ ಡ್ರೆಸ್ಸಿಂಗ್ ರೂಂನಲ್ಲಿ ಭಾಷಣ ಮಾಡಿದ್ದಾರೆ. ಈ ವೇಳೆ ಬೆಂಗಳೂರಿನಲ್ಲಿ ಹೇಗಿರುತ್ತೋ ನೋಡಕ್ಕೆ ಕಾಯ್ತಿದ್ದೀನಿ ಎಂದು ಹೇಳಿಕೊಂಡಿದ್ದಾರೆ.

ಆರ್ ಸಿಬಿ ಕಪ್ ಗೆದ್ದು ಮೈದಾನದಲ್ಲಿ ಸೆಲೆಬ್ರೇಷನ್ ನಡೆದ ಬಳಿಕ ಎಬಿಡಿ ವಿಲಿಯರ್ಸ್ ಜೊತೆ ಕೊಹ್ಲಿ ಡ್ರೆಸ್ಸಿಂಗ್ ರೂಂಗೆ ಬಂದರು. ಬಂದವರೇ ಆಟಗಾರರನ್ನುದ್ದೇಶಿಸಿ ಮಾತನಾಡಿದರು. ಈ ವೇಳೆ ರಜತ್ ಪಾಟೀದಾರ್ ಕ್ಯಾಪ್ಟನ್ಸಿ ಬಗ್ಗೆ ಹೊಗಳಿದರು.

ಬಳಿಕ ನಮಗೆ ನಿಜವಾಗಿಯೂ ವಾತಾವರಣ ಹೇಗಿದೆ ಎಂದು ಗೊತ್ತಾಗುವುದು ಬೆಂಗಳೂರಿಗೆ ಬಂದ ಮೇಲೆ. ಅಲ್ಲಿ ಜನ ಹೇಗೆ ಸ್ವೀಕರಿಸುತ್ತಾರೋ ಎಂದು ನೋಡಲು ಕಾತುರನಾಗಿದ್ದೇನೆ. ಯಾಕೆಂದರೆ ಅವರೂ ನಮ್ಮ ಜೊತೆ ಕಪ್ ಗಾಗಿ ಕಾಯುತ್ತಿದ್ದರು. ನಾವು ಈ ಸಲ ಕಪ್ ಗೆಲ್ಲಲು ಈ ಬೆಂಗಳೂರು ಹುಡುಗನೂ ಕಾರಣ (ಮಯಾಂಕ್ ಅಗರ್ವಾಲ್). ಒಬ್ಬ ಬೆಂಗಳೂರು ಹುಡುಗ (ದೇವದತ್ತ ಪಡಿಕ್ಕಲ್) ಹೋದಾಗ ಇನ್ನೊಬ್ಬ ಬಂದು ನಮ್ಮನ್ನು ಕಾಪಾಡಿದ ಎಂದು ಕೊಹ್ಲಿ ಹೊಗಳಿದ್ದಾರೆ.

ಈ ವೇಳೆ ಮಧ್ಯಪ್ರವೇಶಿಸಿದ ಮಯಾಂಕ್ ಅಗರ್ವಾಲ್, ನನಗಿಂತ ಹೆಚ್ಚು ನಿಮ್ಮನ್ನು ಬೆಂಗಳೂರು ಜನ ಬೆಂಗಳೂರು ಹುಡುಗ ಎಂದುಕೊಂಡಿದ್ದಾರೆ. ನೀವು ಅಲ್ಲಿಯ ಜನರ ಪ್ರೀತಿ ಗಳಿಸಿದ್ದೀರಿ ಎಂದು ಹೊಗಳಿದ್ದಾರೆ. ಇದಕ್ಕೆ ಕೊಹ್ಲಿ ಕೂಡಾ ಖುಷಿಯಾಗಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಮಹಿಳಾ ಚೆಸ್ ವಿಶ್ವಕಪ್ ಫೈನಲ್‌ಗೆ ದಿವ್ಯಾ ದೇಶಮುಖ್‌, ಕೋನೇರು ಹಂಪಿ: ಯಾರೇ ಗೆದ್ದರೂ ಭಾರತಕ್ಕೆ ಕಿರೀಟ

RCB ವೇಗಿ ಯಶ್ ದಯಾಳ್ ವಿರುದ್ಧ ಬಾಲಕಿ ಮೇಲೆ ರೇಪ್ ಆರೋಪ: ಎಫ್ಐಆರ್ ದಾಖಲು

Rishabh Pant: ಅನಿಲ್ ಕುಂಬ್ಳೆಯನ್ನು ನೆನಪಿಸಿದ ರಿಷಭ್ ಪಂತ್

END vs IND Match, ಗ್ರೌಂಡ್‌ಗೆ ಕೈಮುಗಿದು ಕುಟುಂತ್ತಲೇ ಬ್ಯಾಟಿಂಗ್‌ಗೆ ಬಂದ ರಿಷಬ್ ಪಂತ್‌, Video

ಚಿನ್ನಸ್ವಾಮಿ ಕಾಲ್ತುಳಿತದಲ್ಲಿ ಸಾವನ್ನಪ್ಪಿದ ದಿವ್ಯಾಂಶಿ ತಾಯಿಯಿಂದ ಗಂಭೀರ ಆರೋಪ

ಮುಂದಿನ ಸುದ್ದಿ
Show comments