Publish Date: Thu, 11 May 2023 (08:53 IST)
Updated Date: Thu, 11 May 2023 (08:55 IST)
Photo Courtesy: Instagram
ಬೆಂಗಳೂರು: ಲಕ್ನೋ ಸೂಪರ್ ಜೈಂಟ್ಸ್ ಆಟಗಾರ ನವೀನ್ ಉಲ್ ಹಕ್ ಜೊತೆಗಿನ ಆನ್ ಫೀಲ್ಡ್ ಸಂಘರ್ಷದ ಬಗ್ಗೆ ಆರ್ ಸಿಬಿ ಆಟಗಾರ ವಿರಾಟ್ ಕೊಹ್ಲಿ ಪರೋಕ್ಷವಾಗಿ ಸಂದೇಶ ಕೊಟ್ಟಿದ್ದಾರೆ.
ಆನ್ ಫೀಲ್ಡ್ ಘರ್ಷಣೆ ಬಳಿಕ ನವೀನ್ ಉಲ್ ಹಕ್ ಮತ್ತೆ ಸೋಷಿಯಲ್ ಮೀಡಿಯಾ ಮೂಲಕ ಸ್ವೀಟ್ ಮ್ಯಾಂಗೋಸ್ ಎಂದು ಕೊಹ್ಲಿ ಔಟಾಗಿದ್ದನ್ನು ಸಂಭ್ರಮಿಸಿ ಕೆಣಕಿದ್ದರು.
ಇದರ ಬೆನ್ನಲ್ಲೇ ಪರೋಕ್ಷ ಸಂದೇಶ ಕೊಟ್ಟಿದ್ದು, ನನಗೆ ಧ್ವೇಷಿಸಲು ಸಮಯವಿಲ್ಲ ಎಂದಿದ್ದಾರೆ. ನಿಮಗೆ ಎಷ್ಟೇ ನೋವಾಗಿದ್ದರೂ ಅದನ್ನು ಅರಗಿಸಿಕೊಂಡು ಮುಂದೆ ಹೋಗದೇ ಇದ್ದರೆ ನಿಮ್ಮ ಸಮಯ ವ್ಯರ್ಥವಾದೀತು. ಹಾಗಾಗಿ ಧ್ವೇಷ, ಕೋಪ, ಋಣಾತ್ಮಕತೆಗೆ ನನಗೆ ಸಮಯವಿಲ್ಲ ಎಂದಿದ್ದಾರೆ.