Webdunia - Bharat's app for daily news and videos

Install App

ಡೀಪ್ ಫೇಕ್ ತಂತ್ರಜ್ಞಾನಕ್ಕೆ ಬಲಿಯಾದ ವಿರಾಟ್ ಕೊಹ್ಲಿ

Krishnaveni K
ಮಂಗಳವಾರ, 20 ಫೆಬ್ರವರಿ 2024 (13:34 IST)
ಮುಂಬೈ: ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ  ವಿರಾಟ್ ಕೊಹ್ಲಿ ಕುರಿತಾದ ನಕಲಿ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಫ್ಯಾನ್ಸ್ ಹುಷಾರಾಗಿರುವುದು ಉತ್ತಮ.

ಇತ್ತೀಚೆಗಿನ ದಿನಗಳಲ್ಲಿ ಡೀಪ್ ಫೇಕ್ ನಕಲಿ ವಿಡಿಯೋ ತಂತ್ರಜ್ಞಾನಕ್ಕೆ ಎಷ್ಟೋ ಸೆಲೆಬ್ರಿಟಿಗಳು ಬಲಿಯಾಗುತ್ತಿದ್ದಾರೆ. ರಶ‍್ಮಿಕಾ ಮಂದಣ್ಣ ಮೊದಲ ವಿಕ್ಟಿಮ್ ಆಗಿದ್ದರು. ಅದಾದ ಬಳಿಕ ಪ್ರಧಾನಿ ಮೋದಿಯನ್ನೂ ಡೀಪ್ ಫೇಕ್ ಸಂಕಷ್ಟ ಬಿಟ್ಟಿರಲಿಲ್ಲ. ಇಂದು ಇನ್ನಷ್ಟು ಸೆಲೆಬ್ರಿಟಿಗಳ ನಕಲಿ ವಿಡಿಯೋ ಹರಿಯಬಿಡಲಾಗಿದೆ.

ಅವರಲ್ಲಿ ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಕೂಡಾ ಒಬ್ಬರು. ಬೆಟ್ಟಿಂಗ್ ಆಪ್ ಒಂದರ ಪ್ರಮೋಷನ್ ಮಾಡುತ್ತಿರುವಂತೆ ಕೊಹ್ಲಿಯ ನಕಲಿ ವಿಡಿಯೋವೊಂದು ಹರಿದಾಡುತ್ತಿದೆ. ಕೊಹ್ಲಿಗೆ ಸಾಕಷ್ಟು ಫ್ಯಾನ್ಸ್ ಫಾಲೋವರ್ಸ್ ಇದ್ದಾರೆ. ಹೀಗಾಗಿ ಅವರು ಇಂತಹ ಬೆಟ್ಟಿಂಗ್ ಆಪ್ ಬಗ್ಗೆ ಪ್ರಚಾರ ಮಾಡುತ್ತಿದ್ದಾರೆ ಎಂದರೆ ಅದನ್ನು ಕಣ್ಣು ಮುಚ್ಚಿ ನಂಬುವವರು ಇರುತ್ತಾರೆ. ಹೀಗಾಗಿ ಯಾರೋ ಬೇಕೆಂದೇ ಕಿಡಿಗೇಡಿಗಳು ಈ ರೀತಿ ನಕಲಿ ವಿಡಿಯೋ ಹರಿಯಬಿಟ್ಟಿದ್ದಾರೆ. ಕೊಹ್ಲಿ ವಿಡಿಯೋ ನೈಜವಾಗಿರಲಿ ಎಂಬ ಕಾರಣಕ್ಕೆ ಕಿಡಿಗೇಡಿಗಳು ಖ್ಯಾತ ಪತ್ರಕರ್ತರೊಬ್ಬರ ವಿಡಿಯೋವನ್ನೂ ಸೇರಿಸಿದ್ದಾರೆ. ಈ ನಕಲಿ ವಿಡಿಯೋದಲ್ಲಿ ಕೊಹ್ಲಿ ಕೇವಲ ಮೂರು ದಿನದಲ್ಲಿ 1 ಸಾವಿರ ರೂ. ಬಂಡವಾಳ ಹಾಕಿ 81 ಸಾವಿರ ರೂ. ಪಡೆದಿರುವುದಾಗಿ ಹೇಳುತ್ತಾರೆ. ಇದನ್ನು ನೋಡಿ ಎಷ್ಟೋ ಜನ ಮೋಸ ಹೋಗುವ ಅಪಾಯವೂ ಇದೆ.

ಕೇವಲ ಕೊಹ್ಲಿಯ ವಿಡಿಯೋ ಮಾತ್ರವಲ್ಲ, ಇಂದು ಬಾಲಿವುಡ್ ನಟರಾದ ಶಾರುಖ್ ಖಾನ್, ಅಕ್ಷಯ್ ಕುಮಾರ್, ರಣಬೀರ್ ಕಪೂರ್ ಅವರಂತಹ ಘಟಾನುಘಟಿ ಕಲಾವಿದರ ನಕಲಿ ವಿಡಿಯೋ ಕೂಡಾ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಡೀಪ್ ಫೇಕ್ ವಿಡಿಯೋ ಕಡಿವಾಣಕ್ಕೆ ಸರ್ಕಾರ, ಕಾನೂನು ಎಷ್ಟೇ ಪ್ರಯತ್ನ ಪಟ್ಟರೂ ಇಂತಹ ವಿಡಿಯೋಗಳು ಮತ್ತೆ ಮತ್ತೆ ಹುಟ್ಟಿಕೊಳ್ಳುತ್ತಿರುವುದು ವಿಪರ್ಯಾಸ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Virat Kohli: ಚಿನ್ನಸ್ವಾಮಿ ಕಾಲ್ತುಳಿತದ ಬಗ್ಗೆ ಕೊಹ್ಲಿ ಏನೂ ಹೇಳಿಲ್ವಾ, ಇಲ್ಲಿದೆ ಅಪ್ ಡೇಟ್

Chinnaswamy stampede: ನಮ್ಮಲ್ಲಿ ಹೀಗಾಗಿರ್ಲಿಲ್ಲಪ್ಪ, ನೋವಿನಲ್ಲೂ ಬೆಂಗಳೂರಿಗೆ ತಿವಿದ ಮುಂಬೈ ಫ್ಯಾನ್ಸ್

Chinnaswamy stampede: ಚಿನ್ನಸ್ವಾಮಿ ಕಾಲ್ತುಳಿತಕ್ಕೆ ಪೊಲೀಸರಲ್ಲ ಇದೇ ಎರಡು ಕಾರಣ ಇದುವೇ

Chinnaswamy stampede: ಓಪನ್ ಬಸ್ ನಲ್ಲಿ ಮೆರವಣಿಗೆ ಮಾಡಲು ಬಯಸಿದ್ದ ಆರ್ ಸಿಬಿ, ಹಾಗೇನಾದ್ರೂ ಇದ್ರೆ ಏನಾಗ್ತಿತ್ತು

Chinnaswamy Stampede: ಚಿನ್ನಸ್ವಾಮಿ ಭೀಕರ ಕಾಲ್ತುಳಿತಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ

ಮುಂದಿನ ಸುದ್ದಿ
Show comments