Webdunia - Bharat's app for daily news and videos

Install App

ಗೌತಮ್ ಗಂಭೀರ್ ಕೋಚ್ ಆಗಿರುವುದರಿಂದ ಆರ್ ಸಿಬಿಯ ಈ ಆಟಗಾರನಿಗೆ ಒಲಿಯಲಿದೆ ಅದೃಷ್ಟ

Krishnaveni K
ಗುರುವಾರ, 11 ಜುಲೈ 2024 (08:45 IST)
ಮುಂಬೈ: ಟೀಂ ಇಂಡಿಯಾ ನೂತನ ಕೋಚ್ ಆಗಿ ಗೌತಮ್ ಗಂಭೀರ್ ಆಯ್ಕೆಯಾಗಿದ್ದಾರೆ. ಗಂಭೀರ್ ಕೋಚ್ ಆದ ಮೇಲೆ ಕೆಲವು ಆಟಗಾರರು ತಮಗೆ ಟೀಂ ಇಂಡಿಯಾದಲ್ಲಿ ಅವಕಾಶದ ಬಾಗಿಲು ತೆರೆಯಬಹುದು ಎಂಬ ವಿಶ್ವಾಸದಲ್ಲಿದ್ದಾರೆ. ಅವರ ಪೈಕಿ ಆರ್ ಸಿಬಿಯ ಈ ಆಟಗಾರನೂ ಒಬ್ಬರು.

ಆರ್ ಸಿಬಿ ಪರ ಕಳೆದ ಐಪಿಎಲ್ ನಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದ ರಜತ್ ಪಾಟೀದಾರ್ ಮೇಲೆ ಗಂಭೀರ್ ಈ ಹಿಂದೆಯೇ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಪಾಟೀದಾರ್ ಅವರಂತಹವರಿಗೆ ರಾಷ್ಟ್ರೀಯ ತಂಡದಲ್ಲಿ ಹೆಚ್ಚಿನ ಅವಕಾಶ ಸಿಗಬೇಕು ಎಂದಿದ್ದರು. ಹೀಗಾಗಿ ಪಾಟೀದಾರ್ ಕಿರು ಮಾದರಿಯಲ್ಲೂ ಭಾರತ ತಂಡಕ್ಕೆ ಆಯ್ಕೆಯಾಗುವ ಕನಸಿನಲ್ಲಿದ್ದಾರೆ.

ಕಳೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ರಜತ್ ಪಾಟೀದಾರ್ ಗೆ ಅವಕಾಶ ಸಿಕ್ಕಿತ್ತು. ಸತತವಾಗಿ ಮೂರು ಪಂದ್ಯಗಳಲ್ಲಿ ಅವಕಾಶ ಸಿಕ್ಕಿಯೂ ಅವರ ಕೊಡುಗೆ ಶೂನ್ಯವಾಗಿತ್ತು. ಹೀಗಾಗಿ ತಂಡದಿಂದ ಕಿತ್ತು ಹಾಕಲಾಗಿತ್ತು. ಹೀಗಾಗಿ ತಂಡದಲ್ಲಿ ಅವಕಾಶದ ಬಾಗಿಲು ಬಂದ್ ಆಗಿದೆ ಎಂಬ ನಿರಾಸೆಯಲ್ಲಿರುವಾಗ ಗಂಭೀರ್ ಕೋಚ್ ಆಗಿರುವುದು ಅವರ ಪಾಲಿಗೆ ಭರವಸೆಯಾಗಿದೆ.

ಇವರಲ್ಲದೆ, ತಂಡದಿಂದ ಕಡೆಗಣಿಸಲ್ಪಟ್ಟಿರುವ ಶ್ರೇಯಸ್ ಅಯ್ಯರ್, ವರುಣ್ ಚಕ್ರವರ್ತಿ, ವೆಂಕಟೇಶ್ ಅಯ್ಯರ್, ರಿಂಕು ಸಿಂಗ್ ಮೊದಲಾದ ಆಟಗಾರರೊಂದಿಗೆ ಈಗಾಗಲೇ ಕೆಲಸ ಮಾಡಿರುವ ಗಂಭೀರ್ ಈ ಪ್ರತಿಭಾವಂತರನ್ನು ಮುಂದೆ ಭಾರತ ತಂಡದ ಖಾಯಂ ಸದಸ್ಯರಾಗಿ ಮಾಡಿದರೂ ಅಚ್ಚರಿಯಿಲ್ಲ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

KL Rahul: ಹ್ಯಾಪೀ ಬರ್ತ್ ಡೇ ಕೆಎಲ್ ರಾಹುಲ್ ಎಂದ ಆರ್ ಸಿಬಿ: ವಿಶ್ ಮಾಡಕ್ಕಾಗುತ್ತೆ, ಟೀಂಗೆ ತಗೊಳ್ಳಕ್ಕೆ ಆಗಲ್ವಾ ಎನ್ನೋದಾ..

Viral video: ಎಂಥಾ ಕ್ಯಾರೆಕ್ಟರ್ ಗುರೂ.. ಅಭಿಮಾನಿಗಳ ಜೊತೆ ರೋಹಿತ್ ಶರ್ಮಾ ಫನ್

Rahul Dravid: ರಾಹುಲ್ ದ್ರಾವಿಡ್ ಮೇಲೆ ಸಂಜು ಸ್ಯಾಮ್ಸನ್ ಮುನಿಸು: ವಿಡಿಯೋ ವೈರಲ್

IPL 2025 RCB vs PBKS: ಯಾಕಾದ್ರೂ ಚಿನ್ನಸ್ವಾಮಿಯಲ್ಲಿ ಆರ್ ಸಿಬಿ ಮ್ಯಾಚ್ ಇರುತ್ತೋ

IPL 2025: ತವರಿನಲ್ಲಿ ಗೆದ್ದು ಬೀಗಿದ ಮುಂಬೈ ಇಂಡಿಯನ್ಸ್‌: ಸನ್‌ರೈಸರ್ಸ್‌ಗೆ ಮುಖಭಂಗ

ಮುಂದಿನ ಸುದ್ದಿ
Show comments