Select Your Language

Notifications

webdunia
webdunia
webdunia
webdunia

ಈಗಿನ ಕಲಾವಿದರು ಸೀತೆ-ರಾಮನ ಪಾತ್ರ ಮಾಡಲು ಲಾಯಕ್ಕಲ್ಲ: ಸೀತೆ ಖ್ಯಾತಿಯ ನಟಿ ದೀಪಿಕಾ

ಈಗಿನ ಕಲಾವಿದರು ಸೀತೆ-ರಾಮನ ಪಾತ್ರ ಮಾಡಲು ಲಾಯಕ್ಕಲ್ಲ: ಸೀತೆ ಖ್ಯಾತಿಯ ನಟಿ ದೀಪಿಕಾ
ಮುಂಬೈ , ಶನಿವಾರ, 10 ಜೂನ್ 2023 (08:30 IST)
ಮುಂಬೈ: ಆದಿಪುರುಷ್ ಸಿನಿಮಾ ನಿರ್ದೇಶಕ ಓಂ ರಾವತ್ ನಟಿ ಕೃತಿ ಸನನ್ ಗೆ ತಿರುಪತಿ ದೇವಾಲಯದ ಆವರಣದಲ್ಲಿ ಕೆನ್ನೆಗೆ ಮುತ್ತು ಕೊಟ್ಟ ದೃಶ್ಯ ವೈರಲ್ ಆಗುತ್ತಿದ್ದಂತೇ ಹಲವರು ಆಕ್ರೋಶ ವ್ಯಕ್ತಪಡಿಸಿದ್ದರು.

ಈ ಬಗ್ಗೆ ಇದೀಗ ದೂರದರ್ಶನ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ರಾಮಾಯಣ ಧಾರವಾಹಿಯ ಸೀತಾ ಪಾತ್ರಧಾರಿ ದೀಪಿಕಾ ಕೂಡಾ ಪ್ರತಿಕ್ರಿಯಿಸಿದ್ದಾರೆ. ಇಂದಿನ ಕಲಾವಿದರು ಸೀತೆ, ರಾಮನಂತಹ ಪುಣ್ಯ ವ್ಯಕ್ತಿಗಳ ಪಾತ್ರ ಮಾಡಲು ಲಾಯಕ್ಕಿಲ್ಲ ಎಂದು ಕಿಡಿ ಕಾರಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು ‘ಇಂದಿನ ನಟ-ನಟಿಯರ ಸಮಸ್ಯೆಯೇ ಇದು. ಅವರು ಆ ಪಾತ್ರದಲ್ಲಿ ಜೀವಿಸುವುದಿಲ್ಲ, ಆ ಪಾತ್ರದೊಳಗೆ ತೊಡಗಿಸಿಕೊಳ್ಳಲ್ಲ. ಅದರ ಭಾವನೆಯೂ ಅವರಲ್ಲಿ ಬರಲ್ಲ. ರಾಮಾಯಣ ಎನ್ನುವುದು ಅವರ ಪಾಲಿಗೆ ಕೇವಲ ಒಂದು ಸಿನಿಮಾವಾಗಿರಬಹುದೇ ಹೊರತು ಭಕ್ತಿ ಇರುವುದಿಲ್ಲ. ಕೃತಿ ಈಗಿನ ಕಾಲದ ನಟಿ. ಆಕೆಗೆ ತಬ್ಬಿಕೊಳ್ಳುವುದು, ಮುತ್ತುಕೊಡುವುದು ಒಂದು ಆತ್ಮೀಯತೆಯ ನಡೆ ಎನಿಸಬಹುದು. ಆದರೆ ಅವರು ಮನಸ್ಸಿನಿಂದ ತಾನು ಸೀತೆಯ ಪಾತ್ರ ಮಾಡಿದ್ದೇನೆ ಎಂಬುದನ್ನು ತಿಳಿದುಕೊಂಡಿರುವುದಿಲ್ಲ. ಪಾತ್ರ ಮುಗಿದ ಮೇಲೆ ಅವರು ಆ ಭಾವನೆಯಿಂದಲೇ ಹೊರಬಂದಿರುತ್ತಾರೆ. ಆದರೆ ನಾನು ಸೀತೆಯ ಪಾತ್ರ ಮಾಡಿದ್ದಾಗ ಆ ಪಾತ್ರವೇ ಆಗಿದ್ದೆ, ಅದರಲ್ಲಿ ಜೀವಿಸಿದ್ದೆ’ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಫಾಲೋ ಆನ್ ನಿಂದ ಪಾರು, ಸೋಲು ತಪ್ಪಿಸಿಕೊಳ್ಳಲು ಟೀಂ ಇಂಡಿಯಾಗೆ ಇದೊಂದೇ ದಾರಿ!