Select Your Language

Notifications

webdunia
webdunia
webdunia
webdunia

ಟೀಂ ಇಂಡಿಯಾ ಕ್ರಿಕೆಟಿಗರಿಗೆ ಬಯೋ ಬಬಲ್ ನಿಂದ ಬಚಾವ್ ಆದ ಖುಷಿ

ಟೀಂ ಇಂಡಿಯಾ ಕ್ರಿಕೆಟಿಗರಿಗೆ ಬಯೋ ಬಬಲ್ ನಿಂದ ಬಚಾವ್ ಆದ ಖುಷಿ
ನವದೆಹಲಿ , ಬುಧವಾರ, 8 ಜೂನ್ 2022 (10:09 IST)
ನವದೆಹಲಿ: ಕೊರೋನಾ ಬಂದಾಗಿನಿಂದ ಕ್ರಿಕೆಟ್ ಸರಣಿಗಳಲ್ಲಿ ಬಯೋ ಬಬಲ್ ವಾತಾವರಣದಿಂದ ಹೈರಾಣಾಗಿದ್ದ ಟೀಂ ಇಂಡಿಯಾ ಕ್ರಿಕೆಟಿಗರು ಈಗ ನಿಟ್ಟುಸಿರು ಬಿಡುವಂತಾಗಿದೆ.

ದ.ಆಫ್ರಿಕಾ ವಿರುದ್ಧದ ಟಿ20 ಸರಣಿಯಿಂದ ಟೀಂ ಇಂಡಿಯಾ ಕ್ರಿಕೆಟಿಗರಿಗೆ ಬಯೋ ಬಬಲ್ ವಾತಾವರಣದಿಂದ ಮುಕ್ತಿ ನೀಡಲಾಗಿದೆ. ಇನ್ನು ಮುಂದಿನ ಸರಣಿಗಳಲ್ಲಿ ಕ್ರಿಕೆಟಿಗರು ಎಂದಿನಂತೆ ಮಾಮೂಲಾಗಿ ಓಡಾಡಿಕೊಂಡಿರಬಹುದು.

ಇದುವರೆಗೆ ಹೋಟೆಲ್ ನಲ್ಲಿ ವಾಸ್ತವ್ಯವಿರುವಾಗ, ಹೊರಗೆ ಓಡಾಡಲು ಎಲ್ಲದಕ್ಕೂ ಕಟ್ಟುನಿಟ್ಟು ಇತ್ತು. ಇದರಿಂದ ಮಾನಸಿಕವಾಗಿ ಕ್ರಿಕೆಟಿಗರು ಕುಗ್ಗಿ ಹೋಗುತ್ತಿದ್ದರು. ಆದರೆ ಇನ್ನೀಗ ಆ ಭಯವಿಲ್ಲ. ಇದೇ ವಿಚಾರವಾಗಿ ವಿಕೆಟ್ ಕೀಪರ್ ಬ್ಯಾಟಿಗ ರಿಷಬ್ ಪಂತ್ ಸಂತಸ ವ್ಯಕ್ತಪಡಿಸಿದ್ದಾರೆ. ಬಯೋ ಬಬಲ್ ಹೋಗಿರುವುದೇ ನಮಗೆ ಅತ್ಯಂತ ಸಮಾಧಾನದ ವಿಚಾರ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ದ.ಆಫ್ರಿಕಾ ಟಿ20 ಮೊದಲ ಪಂದ್ಯದ ಟಿಕೆಟ್ ಸೋಲ್ಡ್ ಔಟ್