Select Your Language

Notifications

webdunia
webdunia
webdunia
webdunia

ಬಿಸಿಸಿಐ-ಐಸಿಸಿ ತಿಕ್ಕಾಟಕ್ಕೆ ಟೀಂ ಇಂಡಿಯಾ ಬಲಿ

ಬಿಸಿಸಿಐ-ಐಸಿಸಿ ತಿಕ್ಕಾಟಕ್ಕೆ ಟೀಂ ಇಂಡಿಯಾ ಬಲಿ
Mumbai , ಬುಧವಾರ, 26 ಏಪ್ರಿಲ್ 2017 (07:06 IST)
ಮುಂಬೈ: ಹಣಕಾಸಿನ ವಿಚಾರಕ್ಕೆ ಸಂಬಂದಿಸಿದಂತೆ ಬಿಸಿಸಿಐ ಮತ್ತು ಐಸಿಸಿ ನಡುವೆ ನಡೆಯುತ್ತಿರುವ ತಿಕ್ಕಾಟಕ್ಕೆ ಟೀಂ ಇಂಡಿಯಾ ಮತ್ತು ಭಾರತ ಕ್ರಿಕೆಟ್ ಅಭಿಮಾನಿಗಳು ಬಲಿಯಾಗುತ್ತಿದ್ದಾರೆ.

 
ಹಣಕಾಸಿನ ಪಾಲುದಾರಿಕೆಯಲ್ಲಿ ಹೆಚ್ಚು ಲಾಭ ತಂದುಕೊಡುತ್ತಿರುವ ಸಂಸ್ಥೆಗಳಿಗೆ ಹೆಚ್ಚು ಪಾಲು ಕೊಡಬೇಕೆಂಬ ಬಿಸಿಸಿಐ ವಾದವನ್ನು ಐಸಿಸಿ ಒಪ್ಪುತ್ತಿಲ್ಲ. ಐಸಿಸಿ ಒಪ್ಪದ ಹೊರತು ತಾನು ಚಾಂಪಿಯನ್ಸ್ ಟ್ರೋಫಿಯಿಂದ ಹಿಂದೆ ಸರಿಯುವುದಕ್ಕೂ ಹಿಂದೆ ಮುಂದೆ ನೋಡುವುದಿಲ್ಲ ಎಂದು ಬಿಸಿಸಿಐ ಎಚ್ಚರಿಕೆ ನೀಡಿದೆ.

ಎಲ್ಲವೂ ಸರಿಯಾಗಿದ್ದರೆ ಇಂದು ಭಾರತ ಕ್ರಿಕೆಟ್ ತಂಡದ ಆಯ್ಕೆ ನಡೆಯಬೇಕಿತ್ತು. ಆದರೆ ಬಿಸಿಸಿಐ ಬಿಗು ನಿಲುವಿನಿಂದಾಗಿ ಟೀಂ ಇಂಡಿಯಾ ಆಯ್ಕೆಯನ್ನು ಕಾದಿರಿಸಲಾಗಿದೆ. ಈ ನಡುವೆ ಐಸಿಸಿ ಹೆಚ್ಚುವರಿ 100 ಮಿಲಿಯನ್ ಡಾಲರ್ ನೀಡುವುದಾಗಿ ಹೇಳಿದರೂ ಅದಕ್ಕೆ ಬಿಸಿಸಿಐ ಒಪ್ಪಿಲ್ಲ.

ಬಿಸಿಸಿಐಗೆ ಪ್ರಸಕ್ತ 579 ಮಿಲಿಯನ್ ಅಮೆರಿಕನ್ ಡಾಲರ್ ಸಿಗುತ್ತಿದೆ. ಹೊಸ ಆರ್ಥಿಕ ನೀತಿ ಜಾರಿಗೆ ಬಂದರೆ ವಾರ್ಷಿಕ 290 ಮಿಲಿಯನ್ ಡಾಲರ್ ನಷ್ಟು ಮಾತ್ರ ಲಾಭಾಂಶ ಸಿಗುವುದು. ಆದರೆ ಐಸಿಸಿಯ ವರಸೆಗೆ ಬಿಸಿಸಿಐ ಒಪ್ಪುತ್ತಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ದಾಡಿ ತೆಗೆಯಬೇಡವೆಂದು ವಿರಾಟ್ ಕೊಹ್ಲಿಗೆ ಅನುಷ್ಕಾ ತಾಕೀತು