T20 WC Final: 2023 ದುರಾದೃಷ್ಟ ಮರುಕಳಿಸುವುದು ಬೇಡವೆಂದು ಟೀಂ ಇಂಡಿಯಾದಿಂದ ಶಾಕಿಂಗ್ ನಿರ್ಧಾರ

Krishnaveni K
ಶನಿವಾರ, 7 ಮಾರ್ಚ್ 2026 (15:01 IST)
Photo Credit: BCCI
ಅಹ್ಮದಾಬಾದ್: 2023 ರ ಏಕದಿನ ವಿಶ್ವಕಪ್ ಫೈನಲ್ ದುರಾದೃಷ್ಟ ಮರುಕಳಿಸುವುದು ಬೇಡವೆಂದು ಟೀಂ ಇಂಡಿಯಾ ಕೈಗೊಂಡಿರುವ ನಿರ್ಧಾರ ಶಾಕಿಂಗ್ ಆಗಿದೆ.

2023 ರಲ್ಲಿ ಅಹ್ಮದಾಬಾದ್ ನಲ್ಲಿ ಏಕದಿನ ವಿಶ್ವಕಪ್ ಫೈನಲ್ ಪಂದ್ಯ ನಡೆದಿತ್ತು. ಆ ಕೂಟದಲ್ಲಿ ಅದುವರೆಗೂ ಗೆಲ್ಲುತ್ತಲೇ ಬಂದಿದ್ದ ಟೀಂ ಇಂಡಿಯಾ ಫೈನಲ್ ನಲ್ಲಿ ಎಡವಿತ್ತು. ಇದಾದ ಬಳಿಕ ಅಹ್ಮದಾಬಾದ್ ಮೈದಾನದಲ್ಲಿ ಮತ್ತೆ ಗೆಲ್ಲಬೇಕು ಎಂಬುದು ಟೀಂ ಇಂಡಿಯಾ ಕನಸಾಗಿದೆ.

ಈ ಹಿಂದೆ ಸೂರ್ಯಕುಮಾರ್ ಯಾದವ್ ಕೂಡಾ ಇದೇ ಮಾತು ಹೇಳಿದ್ದರು. ಅದೇ ಅಹ್ಮದಾಬಾದ್ ಮೈದಾನದಲ್ಲಿ ವಿಶ್ವಕಪ್ ಟ್ರೋಫಿ ಎತ್ತಿ ಹಿಡಿಯಬೇಕು ಎಂಬುದು ನಮ್ಮ ಗುರಿ ಎಂದಿದ್ದರು. ಇದೇ ಛಲ ಹೊತ್ತು ಈ ಬಾರಿ ನ್ಯೂಜಿಲೆಂಡ್ ವಿರುದ್ಧ ಫೈನಲ್ ಪಂದ್ಯವಾಡಲಿದೆ.

ಆದರೆ ಇದಕ್ಕಾಗಿ ಕಳೆದ ಬಾರಿ ಆದಂತೆ ಫಲಿತಾಂಶ ಬರಬಾರದು ಎಂದು ಟೀಂ ಇಂಡಿಯಾ ಸಾಕಷ್ಟು ಪ್ರಯತ್ನ ಮಾಡುತ್ತಿದೆ. ಇದರ ಅಂಗವಾಗಿ ಈ ಬಾರಿ ಕಳೆದ ಬಾರಿ ತಂಗಿದ್ದ ಹೋಟೆಲ್ ಬಿಟ್ಟು ಬೇರೆ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿದೆಯಂತೆ. ಕಳೆದ ಬಾರಿ ಟೀಂ ಇಂಡಿಯಾ ಐಟಿಸಿ ನರ್ಮದಾ ಹೋಟೆಲ್ ನಲ್ಲಿ ತಂಗಿತ್ತು. ಆದರೆ ಈ ಬಾರಿ ದುರಾದೃಷ್ಟವಾಗಬಾರದು ಎಂದು ತಾಜ್ ಸ್ಕೈಲೈನ್ ಗೆ ಶಿಫ್ಟ್ ಆಗಿದೆ. ಕ್ರಿಕೆಟಿಗರೂ ಕೆಲವೊಂದು ನಂಬಿಕೆಗಳನ್ನು ಫಾಲೋ ಮಾಡುತ್ತಾರೆ. ಅದರಂತೆ ಈ ಬಾರಿ ಹೋಟೆಲ್ ಬದಲಾಯಿಸಿ ಅದೃಷ್ಟ ಪರೀಕ್ಷೆ ಮಾಡಲಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

INDW vs ENGW: ಲಾರ್ಡ್ಸ್ ನಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ ಭಾರತ ಮಹಿಳಾ ಕ್ರಿಕೆಟ್ ತಂಡ

ಟೀಂ ಇಂಡಿಯಾ ಹುಡುಗರಿಗಿಂತ ಹುಡುಗಿಯರ ಟೀಂ ಬೆಸ್ಟ್ ಅಂತಿದ್ದಾರೆ ಫ್ಯಾನ್ಸ್

CSK: ಚೆನ್ನೈ ಸೂಪರ್ ಕಿಂಗ್ಸ್ ಮುಖ್ಯ ಕೋಚ್ ಸ್ಥಾನದಿಂದ ಸ್ಟೀಫನ್ ಫ್ಲೆಮಿಂಗ್ ಗೆ ಕೊಕ್

ENG VS IND Test: ಲಾರ್ಡ್ಸ್‌ನಲ್ಲಿ ಶತಕ ಬಾರಿಸಿ ಅಬ್ಬರಿಸಿದ ಯಾಸ್ತಿಕಾ ಭಾಟಿಯಾಳಿಂದ ಹೊಸ ರೆಕಾರ್ಡ್‌

ಬಿಸಿಸಿಐಗೆ ಈ ರೀತಿ ಕೌಂಟರ್ ಕೊಟ್ರಾ ಸೂರ್ಯಕುಮಾರ್ ಯಾದವ್ , ಏನಿದು ಟೀ ಶರ್ಟ್‌ ಸಂದೇಶ

ಮುಂದಿನ ಸುದ್ದಿ
Show comments