Select Your Language

Notifications

webdunia
webdunia
webdunia
webdunia

ಟೀಂ ಇಂಡಿಯಾ ವಿರುದ್ಧ ಸರಣಿ ಆರಂಭಕ್ಕೂ ಮೊದಲೇ ಬಿಳಿ ಬಾವುಟ ಹಾರಿಸಿದ ಆಸೀಸ್ ನಾಯಕ!

ಟೀಂ ಇಂಡಿಯಾ ವಿರುದ್ಧ ಸರಣಿ ಆರಂಭಕ್ಕೂ ಮೊದಲೇ ಬಿಳಿ ಬಾವುಟ ಹಾರಿಸಿದ ಆಸೀಸ್ ನಾಯಕ!
ಮುಂಬೈ , ಸೋಮವಾರ, 11 ಸೆಪ್ಟಂಬರ್ 2017 (08:21 IST)
ಮುಂಬೈ: ಇದುವರೆಗೆ ಭಾರತ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್ ಸರಣಿ ನಡೆದಾಗಲೆಲ್ಲಾ ಪರಸ್ಪರ ಕಿತ್ತಾಟಗಳು ಸಾಮಾನ್ಯವಾಗಿತ್ತು. ಆದರೆ ಈ ಬಾರಿ ಉತ್ತಮ ಕ್ರೀಡಾ ಸ್ಪೂರ್ತಿಯಿಂದ ಆಡುತ್ತೇವೆ ಎಂದು ಆಸೀಸ್ ನಾಯಕ ಸ್ಟೀವ್ ಸ್ಮಿತ್ ಹೇಳಿಕೊಂಡಿದ್ದಾರೆ.


 
ಭಾರತದ ವಿರುದ್ಧ ಐದು ಏಕದಿನ ಮತ್ತು ಮೂರು ಟಿ29 ಸರಣಿ ಆಡಲಿರುವ ಆಸೀಸ್ ಕ್ರಿಕೆಟ್ ಬಗ್ಗೆ ಹೆಚ್ಚಿನ ಗಮನವಿರಲಿದೆ. ಭಾರತ ಕಠಿಣ ಎದುರಾಳಿ. ಅದು ನಮಗೆ ದೊಡ್ಡ ಸವಾಲಾಗಲಿದೆ ಎಂದಿದ್ದಾರೆ.

‘ಅವರ ಬಳಿ ಸಾಕಷ್ಟು ಬೌಲಿಂಗ್ ಆಯ್ಕೆಗಳಿವೆ. ನಾವೂ ಸೀಮಿತ ಓವರ್ ಗಳ ಪಂದ್ಯದಲ್ಲಿ ಪಳಗಿದ್ದೇವೆ. ಇದು ಟೆಸ್ಟ್ ಪಂದ್ಯಕ್ಕಿಂತ ವಿಭಿನ್ನವಾಗಿದೆ. ಹಾಗಾಗಿ ಉತ್ತಮ ಪೈಪೋಟಿ ನಿರೀಕ್ಷಿಸಬಹುದು. ಇತರ ರಗಳೆಗಳ ಬಗ್ಗೆ ನಾವು ಗಮನಕೊಡಲ್ಲ’ ಎಂದು ಸ್ಟೀವ್ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ.. ಯುವರಾಜ್ ಸಿಂಗ್ ಗೆ ನಿರ್ಗಮನದ ಹಾದಿ ತೋರಿತೇ ಬಿಸಿಸಿಐ?
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಯುವರಾಜ್ ಸಿಂಗ್ ಗೆ ನಿರ್ಗಮನದ ಹಾದಿ ತೋರಿತೇ ಬಿಸಿಸಿಐ?