Webdunia - Bharat's app for daily news and videos

Install App

ಪಾಕಿಸ್ತಾನದ ಬ್ಯಾಟಿಂಗ್ ದೌರ್ಬಲ್ಯ ಬಟಾಬಯಲು : ಯೂನಿಸ್

Webdunia
ಮಂಗಳವಾರ, 26 ಜುಲೈ 2016 (12:56 IST)
ಇಂಗ್ಲೆಂಡ್ ವಿರುದ್ಧ ಎರಡನೇ ಟೆಸ್ಟ್ ಪಂದ್ಯದಲ್ಲಿ ಪಾಕ್ ತಂಡದ ನೀರಸ ಪ್ರದರ್ಶನವನ್ನು ಪಾಕಿಸ್ತಾನದ ಮಾಜಿ ಕ್ರಿಕೆಟರ್‌ಗಳಾದ ವಾಖರ್ ಯೂನಿಸ್ ಮತ್ತು ಶೋಯಬ್ ಅಕ್ತರ್ ಟೀಕಿಸಿದ್ದಾರೆ. ತಂಡದ ಬ್ಯಾಟಿಂಗ್ ಶಕ್ತಿ ಸಂಪೂರ್ಣ ಬಟಾಬಯಲಾಗಿದೆ ಎಂದು ತಿಳಿಸಿದ್ದಾರೆ. ಇಂಗ್ಲೆಂಡ್ ಪಾಕಿಸ್ತಾನ ತಂಡವನ್ನು 330 ಭಾರೀ ಮೊತ್ತಗಳ ಅಂತರದಿಂದ ಸೋಲಿಸಿತ್ತು.
 
ಬ್ಯಾಟಿಂಗ್ ನುಚ್ಚುನೂರಾಗಿದ್ದಕ್ಕೆ ಯಾವುದೇ ಕ್ಷಮೆಯಿಲ್ಲ ಎಂದು ಹೇಳಿದ ಪಾಕಿಸ್ತಾನ್ ಮಾಜಿ ಕೋಚ್ ಯೂನಿಸ್ , ಬ್ಯಾಟಿಂಗ್ ಶಕ್ತಿಗೆ ಬೆನ್ನುಮೂಳೆಯಿಲ್ಲ ಎಂದು ಹೇಳುವ ಮಟ್ಟಕ್ಕೂ ತಲುಪಿದರು. ನಾವು ಈ ಟೆಸ್ಟ್ ಗೆಲ್ಲಬಹುದೆಂದು ಹೇಳುತ್ತಿಲ್ಲ. ಆದರೆ ಈ ರೀತಿ ಹೀನಾಯ ಸೋಲನ್ನು ಸೋಲಬಾರದು. ಬೆನ್ನುಮೂಳೆಯಿಲ್ಲದ ಬ್ಯಾಟಿಂಗ್‌ನಿಂದ ಇಂಗ್ಲೆಂಡ್ ಬೌಲರುಗಳಲ್ಲಿ ಆತ್ಮವಿಶ್ವಾಸ ಹೆಚ್ಚಿದೆ ಎಂದರು. 
 
ವಿದೇಶಿ ತಂಡಗಳು ಪಾಕಿಸ್ತಾನಕ್ಕೆ ಪ್ರವಾಸ ಮಾಡದ ವಿಷಯವನ್ನು ಯುದ್ಧೋಪಾದಿಯಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ತೆಗೆದುಕೊಳ್ಳಬೇಕಾದ ಅಗತ್ಯವಿದೆ ಎಂದು ವಾಖರ್ ಹೇಳಿದರು.
 
ಯೋಜನೆಯ ಕೊರತೆ
ಇಡೀ ಪಂದ್ಯದಲ್ಲಿ ಯೋಜನೆಯ ಕೊರತೆ ಕಂಡುಬಂದಿದ್ದು, ನಿರೀಕ್ಷೆಯಂತೆ ನಮ್ಮ ಬ್ಯಾಟಿಂಗ್ ದೌರ್ಬಲ್ಯವನ್ನು ಇಂಗ್ಲೆಂಡ್ ಬೌಲರುಗಳು ಬಟಾಬಯಲು ಮಾಡಿದರು ಎಂದು ಅಕ್ತರ್ ತಿಳಿಸಿದರು. 
 
 ಬೌನ್ಸ್ ಆಗುವ ಪಿಚ್‌ನಲ್ಲಿ ನಮ್ಮ ಬ್ಯಾಟಿಂಗ್ ಬಣ್ಣ ಬಯಲಾಗಿದ್ದು, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದಲ್ಲಿ ಬೌನ್ಸ್ ಪಿಚ್‌ಗಳಲ್ಲಿ ನಮ್ಮ ಬ್ಯಾಟಿಂಗ್ ಸದಾ ತಿಣುಕಾಡುತ್ತದೆ ಎಂದು ಅಕ್ತರ್ ಹೇಳಿದರು.
 
 ಬೌಲರುಗಳ ಪ್ರದರ್ಶನ ಕೂಡ ತೀರಾ ನಿರಾಶಾದಾಯಕವಾಗಿತ್ತು. ಓಲ್ಡ್ ಟ್ರಾಫರ್ಡ್ ಪಿಚ್‌ನಲ್ಲಿ ಹೇಗೆ ಬೌಲ್ ಮಾಡಬೇಕು ಎಂಬ ಬಗ್ಗೆ ಯಾವುದೇ ಕಾರ್ಯಯೋಜನೆ ಇರಲಿಲ್ಲ ಎಂದು ಅಕ್ತರ್ ಹೇಳಿದರು.
 
ಈ ಸೋಲು ಪಾಕಿಸ್ತಾನ ಕ್ರಿಕೆಟ್ ಸಂಕಷ್ಟದ ಮುಂದುವರಿಕೆ ಎಂದು ಮಾಜಿ ಟೆಸ್ಟ್ ನಾಯಕ ರಮೀಜ್ ರಾಜಾ ಹೇಳಿದರು. ವಿವಿಧ ಪರಿಸ್ಥಿತಿಗಳಿಗೆ ನಮ್ಮ ಆಟಗಾರರು ತಕ್ಷಣವೇ ಹೊಂದಿಕೊಳ್ಳುವುದಿಲ್ಲ ಎಂದು ರಮೀಜ್ ರಾಜಾ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಚಿನ್ನಸ್ವಾಮಿ ಕಾಲ್ತುಳಿತಕ್ಕೆ ನಿಜ ಕಾರಣ ಬಯಲು: ಎಲ್ಲದಕ್ಕೂ ಮೂಲ ಕಾರಣ ಕೊಹ್ಲಿನಾ

ಆರ್​ಸಿಬಿಯ ಎಡಗೈ ವೇಗಿಗೆ ಸಂಕಷ್ಟ: ಲೈಂಗಿಕ ದೌರ್ಜನ್ಯ ಆರೋಪದಡಿ ಯಶ್‌ ದಯಾಳ್‌ಗೆ ಬಂಧನ ಭೀತಿ

IND vs ENG: ಬೇಜ್ ಬಾಲ್ ಕೈ ಬಿಟ್ಟು ಹಳೇ ಸ್ಟೈಲ್ ಗೆ ಮರಳಲಿದೆ ಇಂಗ್ಲೆಂಡ್

IND vs ENG: ಲಾರ್ಡ್ಸ್ ಮೈದಾನದಲ್ಲಿ ಟೀಂ ಇಂಡಿಯಾಗಿಲ್ಲ ಅದೃಷ್ಟ

ಐಸಿಸಿ ಹೊಸ ಸಿಇಓ ಆಗಿ ಭಾರತೀಯ ಸಂಜೋಗ್ ಗುಪ್ತಾ, ಇವರ ಸಾಧನೆ ಇಲ್ಲಿದೆ

ಮುಂದಿನ ಸುದ್ದಿ
Show comments