Webdunia - Bharat's app for daily news and videos

Install App

ಗಾಯದ ಹೊರತಾಗಿಯೂ ಐಪಿಎಲ್ ತಂಡ ಸೇರಲು ಶ್ರೇಯಸ್ ಅಯ್ಯರ್ ರೆಡಿ

Krishnaveni K
ಶುಕ್ರವಾರ, 15 ಮಾರ್ಚ್ 2024 (10:50 IST)
Photo Courtesy: Twitter
ಕೋಲ್ಕೊತ್ತಾ: ಟೀಂ ಇಂಡಿಯಾ ಕ್ರಿಕೆಟಿಗ ಶ್ರೇಯಸ್ ಅಯ್ಯರ್ ಗಾಯದ ಸಮಸ್ಯೆಗೊಳಗಾಗಿದ್ದು ಐಪಿಎಲ್ ನಲ್ಲಿ ಆರಂಭಿಕ ಪಂದ್ಯಗಳಿಗೆ ಕೋಲ್ಕೊತ್ತಾ ನೈಟ್ ರೈಡರ್ಸ್ ನಾಯಕ ಅಲಭ್ಯರಾಗಲಿದ್ದಾರೆ ಎಂಬ ಸುದ್ದಿಗಳಿತ್ತು.

ಆದರೆ ಈಗ ಶ್ರೇಯಸ್ ಗಾಯದ ಹೊರತಾಗಿಯೂ ಐಪಿಎಲ್ ನಲ್ಲಿ ತಮ್ಮ ತಂಡವನ್ನು ಸೇರಿಕೊಳ್ಳುತ್ತಿದ್ದಾರೆ. ಗಾಯವಾಗಿರುವುದು ನಿಜ. ಆದರೆ ಗಂಭೀರವಲ್ಲ ಹೀಗಾಗಿ ಶ್ರೇಯಸ್ ಕೆಕೆಆರ್ ಕ್ಯಾಂಪ್ ಗೆ ಎರಡೇ ದಿನಗಳಲ್ಲಿ ಬರಲಿದ್ದಾರೆ ಎಂದು ಕೆಕೆಆರ್ ತಂಡದ ಮೂಲಗಳು ಹೇಳಿವೆ.

ಟೀಂ ಇಂಡಿಯಾ-ಇಂಗ್ಲೆಂಡ್ ಸರಣಿ ವೇಳೆ ಶ್ರೇಯಸ್ ಬೆನ್ನು ನೋವಿನ ಕಾರಣದಿಂದ ಸರಣಿಯಿಂದ ಹೊರನಡೆದಿದ್ದರು. ಬಳಿಕ ಅವರು ಗಾಯದ ನೆಪ ಹೇಳಿ ರಣಜಿ ಆಡುವುದನ್ನು ತಪ್ಪಿಸಿಕೊಳ್ಳಲು ಯತ್ನಿಸಿದ್ದರು ಎಂದು ಆರೋಪವಾಗಿತ್ತು. ಇದೇ ಕಾರಣಕ್ಕೆ ಬಿಸಿಸಿಐ ಅವರನ್ನು ಕೇಂದ್ರೀಯ ಗುತ್ತಿಗೆಯಿಂದ ಹೊರಹಾಕಿತ್ತು.

ಇದರ ಬೆನ್ನಲ್ಲೇ ಶ್ರೇಯಸ್ ರಣಜಿ ಟ್ರೋಫಿ ಫೈನಲ್ ಆಡಿದ್ದರು. ಆದರೆ ಮತ್ತೆ ಅವರು ಬೆನ್ನು ನೋವಿಗೊಳಗಾಗಿದ್ದರು. ಹೀಗಾಗಿ ಅವರು ಐಪಿಎಲ್ ನ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಈಗ ಶ್ರೇಯಸ್ ಕೆಕೆಆರ್ ತಂಡಕ್ಕೆ ಬರುತ್ತಿರುವುದು ತಂಡಕ್ಕೆ ಸಮಾಧಾನಕರ ವಿಷಯವಾಗಿದೆ.

ಕೆಕೆಆರ್ ತಂಡಕ್ಕೆ ಇದುವರೆಗೆ ಶ್ರೇಯಸ್ ಅಯ್ಯರ್ ಗಾಯದ ಬಗ್ಗೆ ಮಾಹಿತಿಯಿಲ್ಲ. ಆದರೆ ಮುಂಬೈ ಪರ ರಣಜಿ ಆಡುವಾಗ ಕೊನೆಯ ಎರಡು ದಿನ ಬೆನ್ನು ನೋವಿನಿಂದಾಗಿ ಎರಡು ಬಾರಿ ಫಿಸಿಯೋ ಸಹಾಯ ಪಡೆದಿದ್ದರು ಎಂದು ತಿಳಿದುಬಂದಿದೆ. ಆದರೆ ಐಪಿಎಲ್ ನಲ್ಲಿ ಆಡಲು ಯಾವುದೇ ತೊಂದರೆಯಾಗದು ಎನ್ನಲಾಗಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments