ನಾನಾಗಿದ್ದರೆ ರೋಹಿತ್ ಶರ್ಮಾಗೆ ಇನ್ನೊಂದು ಚಾನ್ಸ್ ಕೊಡುತ್ತಿದ್ದೆ: ಯುವರಾಜ್ ಸಿಂಗ್

Krishnaveni K
ಗುರುವಾರ, 14 ಮಾರ್ಚ್ 2024 (16:14 IST)
Photo Courtesy: Twitter
ಮುಂಬೈ: ಈ ಬಾರಿ ಐಪಿಎಲ್ ನಲ್ಲಿ ಯಶಸ್ವೀ ನಾಯಕ ರೋಹಿತ್ ಶರ್ಮಾರನ್ನು ಕಿತ್ತು ಹಾಕಿ ಹಾರ್ದಿಕ್ ಪಾಂಡ್ಯಗೆ ನಾಯಕತ್ವ ನೀಡಿದ ಮುಂಬೈ ಇಂಡಿಯನ್ಸ್ ನಿರ್ಧಾರವನ್ನು ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಪ್ರಶ್ನಿಸಿದ್ದಾರೆ.

ನಾನಾಗಿದ್ದರೆ ರೋಹಿತ್ ಶರ್ಮಾಗೆ ಇನ್ನೊಂದು ಆವೃತ್ತಿಗೆ ನಾಯಕನಾಗಿ ತಂಡ ಮುನ್ನಡೆಸಲು ಅವಕಾಶ ಕೊಡುತ್ತಿದ್ದೆ. ಹಾರ್ದಿಕ್ ಪಾಂಡ್ಯರನ್ನು ಉಪನಾಯಕನಾಗಿ ನೇಮಿಸುತ್ತಿದ್ದೆ ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಅವರು ರೋಹಿತ್ ಶರ್ಮಾ ಐಪಿಎಲ್ ನ ಯಶಸ್ವೀ ನಾಯಕ ಎಂದಿದ್ದಾರೆ.

‘5 ಬಾರಿ ಐಪಿಎಲ್ ಗೆದ್ದಿರುವ ರೋಹಿತ್ ಶರ್ಮಾ ಐಪಿಎಲ್ ನ ಯಶಸ್ವೀ ನಾಯಕ. ಅವರನ್ನು ಕಿತ್ತು ಹಾಕಿದ್ದು ನಿಜಕ್ಕೂ ದೊಡ್ಡ ನಿರ್ಧಾರ. ನಾನಾಗಿದ್ದರೆ ಹಾರ್ದಿಕ್ ರನ್ನು ಕರೆತಂದಂತೆ ಯಾರನ್ನೇ ತಂಡಕ್ಕೆ ಕರೆತಂದಿದ್ದರೂ ರೋಹಿತ್ ಗೆ ಇನ್ನೊಂದು ಆವೃತ್ತಿಯಲ್ಲಿ ನಾಯಕನಾಗಿ ಮುಂದುವರಿಯಲು ಅವಕಾಶ ನೀಡುತ್ತಿದ್ದೆ. ಹಾರ್ದಿಕ್ ಗೆ ಉಪನಾಯಕನ ನೀಡುತ್ತಿದ್ದೆ. ಆಗ ತಂಡ ಹೇಗೆ ಸಕ್ಸಸ್ ಪಡೆಯುತ್ತದೆ ನೋಡಬಹುದಿತ್ತು’ ಎಂದಿದ್ದಾರೆ.

ಅವರ ಈ ಹೇಳಿಕೆ ರೋಹಿತ್ ಅಭಿಮಾನಿಗಳಿಗೆ ಭಾರೀ ಮೆಚ್ಚುಗೆಯಾಗಿದೆ. ಯುವರಾಜ್ ಸಿಂಗ್ ಮೊದಲಿನಿಂದಲೂ ರೋಹಿತ್ ರನ್ನು ಬೆಂಬಲಿಸುತ್ತಲೇ ಇದ್ದಾರೆ. ರೋಹಿತ್ ಕೂಡಾ ಯುವಿ ಮೇಲೆ ಸ್ವಲ್ಪ ಹೆಚ್ಚೇ ಗೌರವ ಹೊಂದಿದ್ದಾರೆ. ಇದೀಗ ಮತ್ತೊಮ್ಮೆ ರೋಹಿತ್ ರನ್ನು ಬೆಂಬಲಿಸಿ ಯುವಿ ಮಾತನಾಡಿರುವುದು ಅಭಿಮಾನಿಗಳಿಗೆ ಇಷ್ಟವಾಗಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Video: ಪಂದ್ಯ ಮುಗಿದರೂ ಇಳಿಯದ ಗಂಭೀರ್ ಸಿಟ್ಟು: ದ್ರಾವಿಡ್ ಹೀಗರ್ಲಿಲ್ಲ ಎಂದ ಫ್ಯಾನ್ಸ್

ಒಂದೇ ಓವರ್ ನಲ್ಲಿ 7 ವೈಡ್ ಎಸೆದ ಅರ್ಷ್ ದೀಪ್ ಸಿಂಗ್: ಗಂಭೀರ್ ಹೊಡೆಯೋದೊಂದೇ ಬಾಕಿ video

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾಗೆ ಶಾಕ್ ಕೊಡಲು ಮುಂದಾದ ಬಿಸಿಸಿಐ

ಟೀಂ ಇಂಡಿಯಾ ಎಲ್ಲಾ ಕ್ರಿಕೆಟಿಗರಿಗೂ ಬೇಡದ ಅಭ್ಯಾಸಗಳೆಲ್ಲಾ ಇದೆ: ವಿವಾದಕ್ಕೆ ಕಾರಣವಾದ ರವೀಂದ್ರ ಜಡೇಜಾ ಪತ್ನಿ

ಮದುವೆ ಮುರಿದಿದ್ದಕ್ಕೆ ಕುಗ್ಗಿದ್ದಾರಾ ಸ್ಮೃತಿ ಮಂಧಾನ: ಒಂದೇ ಸಾಲಿನಲ್ಲಿ ಕೊಟ್ರು ಉತ್ತರ

ಮುಂದಿನ ಸುದ್ದಿ
Show comments