ಅಡಿಲೇಡ್: ಭಾರತದ ವಿರುದ್ಧ ಪಂದ್ಯದಲ್ಲಿ ಅಂಪಾಯರ್ ತಮಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದ ಬಾಂಗ್ಲಾ ಮತ್ತು ಪಾಕಿಸ್ತಾನಿ ಆಟಗಾರರಿಗೆ ನಿನ್ನೆ ತಮ್ಮದೇ ಮಾತು ತಿರುಗುಬಾಣವಾಗಿದೆ.
ಪಾಕ್ ಮಾಜಿ ಕ್ರಿಕೆಟಿಗರ ಶಾಹಿದ್ ಅಫ್ರಿದಿಯಂತೂ ಐಸಿಸಿ ಟೀಂ ಇಂಡಿಯಾವನ್ನು ಸೆಮಿಫೈನಲ್ ಗೇರಿಸಲು ಶತಾಯ ಗತಾಯ ಪ್ರಯತ್ನಿಸುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದರು.
ವಿಶೇಷವೆಂದರೆ ಬಾಂಗ್ಲಾ-ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಬಾಂಗ್ಲಾ ನಾಯಕ ಶಕೀಬ್ ಅಲ್ ಹಸನ್ ಗೆ ಡಿಆರ್ ಎಸ್ ಎಡವಟ್ಟಿನಿಂದ ಬಾಲ್ ನೆಲಕ್ಕೆ ತಾಗಿದ್ದರೂ ಔಟ್ ತೀರ್ಪು ಸಿಕ್ಕಿತ್ತು. ಇದಾದ ಬಳಿಕ ಭಾರತೀಯ ಸಮರ್ಥಕರು ಸೋಷಿಯಲ್ ಮೀಡಿಯಾ ಮೂಲಕ ಪಾಕಿಸ್ತಾನಕ್ಕೆ ಟಾಂಗ್ ಕೊಟ್ಟಿದ್ದಾರೆ.
ಈಗ ಟೀಂ ಇಂಡಿಯಾವಂತೂ ಆಡಿಲ್ಲ. ಹಾಗಿದ್ದರೂ ತಪ್ಪಾದ ತೀರ್ಪು ಹೇಗೆ ಬಂತು? ಈಗ ನಿಮಗೆ ಮೋಸ ಮಾಡಿದವರು ಯಾರು ಎಂದು ಭಾರತೀಯರು ಉಭಯ ತಂಡಗಳಿಗೆ ತಿರುಗೇಟು ನೀಡಿದ್ದಾರೆ.