Webdunia - Bharat's app for daily news and videos

Install App

ವಿನೋದ್ ಕಾಂಬ್ಳಿ ಹಿಡಿತದಿಂದ ತಪ್ಪಿಸಿಕೊಳ್ಳಲು ಒದ್ದಾಡಿದ ಸಚಿನ್ ತೆಂಡುಲ್ಕರ್: ವಿಡಿಯೋ

Krishnaveni K
ಬುಧವಾರ, 4 ಡಿಸೆಂಬರ್ 2024 (11:26 IST)
ಮುಂಬೈ: ತಮ್ಮ ಕ್ರಿಕೆಟ್ ಗುರು ರಮಾಕಾಂತ್ ಅಚ್ರೇಕರ್ ಸ್ಮರಣಾರ್ಥ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಒಂದು ಕಾಲದ ಕುಚಿಕು ಗೆಳಯರಾದ ವಿನೋದ್ ಕಾಂಬ್ಳಿಯವರನ್ನು ಸಚಿನ್ ತೆಂಡುಲ್ಕರ್ ಭೇಟಿಯಾಗಿದ್ದಾರೆ.
 
ಗುರುಗಳ ಸ್ಮರಣಾರ್ಥ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ವಿನೋದ್ ಕಾಂಬ್ಳಿ ಮೊದಲೇ ವೇದಿಕೆಯಲ್ಲಿ ಕೂತಿದ್ದರು. ಎಲ್ಲರಿಗೂ ಗೊತ್ತಿರುವ ಹಾಗೆ ವಿನೋದ್ ಕಾಂಬ್ಳಿ ಇತ್ತೀಚೆಗೆ ಎದ್ದು ಓಡಾಡಲೂ ಆಗದಷ್ಟು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಕುಡಿತದಿಂದಾಗಿಯೇ ಅವರು ತಮ್ಮ ವೃತ್ತಿ ಜೀವನವನ್ನೂ ಹಾಳುಮಾಡಿಕೊಂಡಿದ್ದರು.
 
ವೇದಿಕೆಗೆ ನಂತರ ಬಂದ ಸಚಿನ್, ವಿನೋದ್ ಕೂತಿರುವುದನ್ನು ನೋಡಿ ತಾವೇ ಬಳಿ ಹೋಗಿ ಮಾತನಾಡಿಸಿದ್ದಾರೆ. ವಿನೋದ್ ಕಾಂಬ್ಳಿ ಎಷ್ಟು ಅನಾರೋಗ್ಯಕ್ಕೀಡಾಗಿದ್ದಾರೆ ಎಂದರೆ ಅವರಿಗೆ ಮೊದಲು ಸಚಿನ್ ರನ್ನು ಗುರುತಿಸಲೂ ಕಷ್ಟವಾದಂತೆ ಕಾಣುತ್ತಿದೆ. ನಂತರ ಸಚಿನ್ ರನ್ನು ನೋಡಿ ಕೈ ಹಿಡಿದು ಎಳೆದಾಡಿದ್ದಾರೆ.
 
ಸಚಿನ್ ಗೆ ಅತ್ತ ಹೋಗದೇ ತನ್ನ ಪಕ್ಕವೇ ಕುಳಿತುಕೊಳ್ಳುವಂತೆ ಎಳೆದಾಡಿದ್ದಾರೆ. ಗೆಳೆಯ ಎಳೆದಾಡುತ್ತಿರುವಾಗ ಸಚಿನ್ ಕೊಂಚ ಗಲಿಬಿಲಿಯಾಗಿದ್ದಾರೆ. ಬಳಿಕ ಪಕ್ಕದಲ್ಲಿದ್ದವರು ಸಚಿನ್ ನೆರವಿಗೆ ಬಂದಿದ್ದಾರೆ. ಬಳಿಕ ಸಚಿನ್ ವೇದಿಕೆಯಲ್ಲಿ ಇನ್ನೊಂದು ಕುರ್ಚಿಯಲ್ಲಿ ಹೋಗಿ ಕುಳಿತುಕೊಂಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಸಾಕಷ್ಟು ಫನ್ನಿ ಕಾಮೆಂಟ್ ಗಳು ಬಂದಿವೆ.
 

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

KL Rahul: ಕೆಎಲ್ ರಾಹುಲ್ ವೃತ್ತ ಎಳೆದ ಮೇಲೆಯೇ ಡೆಲ್ಲಿ ಕ್ಯಾಪಿಟಲ್ಸ್ ಗೆ ಈ ಗತಿಯಾಗಿದ್ದು

IPL 2025: ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಬಗ್ಗುಬಡಿದು ಪ್ಲೇ ಆಫ್‌ಗೆ ಮುಂಬೈ ಇಂಡಿಯನ್ಸ್‌ ಎಂಟ್ರಿ

IPL 2025: ನಿರ್ಣಾಯಕ ಪಂದ್ಯದಲ್ಲಿ ಟಾಸ್‌ ಗೆದ್ದ ಡೆಲ್ಲಿ ಫೀಲ್ಡಿಂಗ್‌ ಆಯ್ಕೆ: ಯಾರಿಗೆ ಸಿಗುತ್ತೆ ಪ್ಲೇ ಆಫ್‌ ಟಿಕೆಟ್‌

IPL 2025: 7 ಪಂದ್ಯ, 252 ರನ್, 24 ಭರ್ಜರಿ ಸಿಕ್ಸರ್‌: ಇದು 14ರ ಪೋರ ಸೂರ್ಯವಂಶಿ ಸಾಧನೆ

ಮುಂದಿನ ಸುದ್ದಿ
Show comments