ಬಿಸಿಸಿಐ ಹುದ್ದೆಯಿಂದ ಸಚಿನ್, ಗಂಗೂಲಿ, ಲಕ್ಷ್ಮಣ್ ಗೆ ಕೊಕ್?!

Webdunia
ಬುಧವಾರ, 15 ಆಗಸ್ಟ್ 2018 (08:51 IST)
ಮುಂಬೈ: ಭಾರತ ಕ್ರಿಕೆಟ್ ತಂಡದ ಕೋಚ್ ಆಯ್ಕೆ ಮತ್ತು ಬಿಸಿಸಿಐ ಸಲಹಾ ಸಮಿತಿ ಸದಸ್ಯರಾಗಿರುವ ಮಾಜಿ ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡುಲ್ಕರ್, ವಿವಿಎಸ್ ಲಕ್ಷ್ಮಣ್ ಮತ್ತು ಸೌರವ್ ಗಂಗೂಲಿ ಸ್ಥಾನಕ್ಕೆ ಇದೀಗ ಕುತ್ತು ಬಂದಿದೆ.

ಈ ಮೂವರನ್ನೂ ಬಿಸಿಸಿಐ ಸಲಹಾ ಸಮಿತಿಯಿಂದ ವಜಾಗೊಳಿಸಲು ಚಿಂತನೆ ನಡೆದಿದೆ ಎಂದು ಆಂಗ್ಲ ವಾಹಿನಿಯೊಂದು ವರದಿ ಮಾಡಿದೆ.

ಇದಕ್ಕೆ ಕಾರಣ, ಮೂವರೂ ಬಿಸಿಸಿಐ ಸಲಹಾ ಸಮಿತಿ ಅಲ್ಲದೆ, ಬೇರೆ ಲಾಭದಾಯಕ ಹುದ್ದೆಯಲ್ಲಿದ್ದಾರೆ ಎನ್ನುವುದಾಗಿದೆ. ಗಂಗೂಲಿ ಕೋಲ್ಕೊತ್ತಾ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರಾಗಿದ್ದರೆ, ಲಕ್ಷ್ಮಣ್ ಹಲವು ಮಾಧ್ಯಮ ಮತ್ತು ಐಪಿಎಲ್ ನಲ್ಲಿ ಹುದ್ದೆ ಹೊಂದಿದ್ದಾರೆ. ಇನ್ನು, ಸಚಿನ್ ತೆಂಡುಲ್ಕರ್ ಗೆ ಪುತ್ರ ಅರ್ಜುನ್ ತೆಂಡುಲ್ಕರ್ ಅಂಡರ್ 19 ತಂಡದಲ್ಲಿರುವುದೇ ಮುಳುವಾಗಿದೆ.

ಇದೇ ಕಾರಣಕ್ಕೆ ಈ ಮೂವರೂ ನಿಯಮಾವಳಿಗಳ ಅನುಸಾರ ಕ್ರಿಕೆಟ್ ಸಲಹಾ ಸಮಿತಿ ಸದಸ್ಯರಾಗಲು ಅನರ್ಹರಾಗುತ್ತಾರೆ. ಇದೇ ಕಾರಣಕ್ಕೆ ಮೂರೂ ಕ್ರಿಕೆಟ್ ದಿಗ್ಗಜರೂ ತಮ್ಮ ಹುದ್ದೆ ಕಳೆದುಕೊಳ್ಳುವ ಸಾಧ್ಯತೆಯಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Rohit Sharma: ಅಯ್ಯೋ.. ನಾನೇ ಕಟ್ಟಿದ ಕೋಟೆ ನನ್ನೆದುರಲ್ಲೇ ಒಡೆದೇ ಹೋಯ್ತಲ್ಲಾ

INDW vs NZW: ಒಂದೇ ದಿನ ಕಿಂಗ್ ಕೊಹ್ಲಿ ಶೂನ್ಯ, ಕ್ವೀನ್ ಸ್ಮೃತಿ ಮಂಧಾನ ಸೆಂಚುರಿ

ಮತ್ತೇ ಕೈಕೊಟ್ಟ ವಿರಾಟ್ ಕೊಹ್ಲಿ, ಕಾಂಗರೂ ನೆಲದಲ್ಲಿ ಟೀಂ ಇಂಡಿಯಾಗೆ ಸೋಲು

Viral Video: ರೋಹಿತ್, ಧೋನಿ ನೆನಪಿಸುವಂತೆ ಬ್ಯಾಟಿಂಗ್ ಮಾಡುತ್ತಾನೆ ಈ ಪುಟ್ಟ ಬಾಲಕ

ICC ಮಹಿಳಾ ಕ್ರಿಕೆಟ್ ವಿಶ್ವಕಪ್: ನಿರ್ಣಾಯಕ ಪಂದ್ಯಾದಲ್ಲಿ ಟಾಸ್ ಸೋತ ಭಾರತ

ಮುಂದಿನ ಸುದ್ದಿ
Show comments