Webdunia - Bharat's app for daily news and videos

Install App

ಸರ್ಫರಾಜ್ ತಂದೆಗೆ ಕೊಟ್ಟ ಮಾತು ಉಳಿಸಿದ ರೋಹಿತ್ ಶರ್ಮಾ

Krishnaveni K
ಸೋಮವಾರ, 26 ಫೆಬ್ರವರಿ 2024 (09:03 IST)
ರಾಂಚಿ: ರಾಜ್ ಕೋಟ್ ನಲ್ಲಿ ಟೀಂ ಇಂಡಿಯಾ ಪರ ಸರ್ಫರಾಜ್ ಖಾನ್ ಮೊದಲ ಬಾರಿಗೆ ಭಾರತದ ಪರ ಆಡುವ ಅವಕಾಶ ಸಿಕ್ಕಾಗ ಅವರ ತಂದೆ ಕಣ್ಣಿರಿಟ್ಟಿದ್ದರು.

ಮಗನನ್ನು ಮೊದಲ ಬಾರಿಗೆ ಭಾರತೀಯ ಜೆರ್ಸಿ ತೊಟ್ಟು ಮೈದಾನದಲ್ಲಿ ನೋಡಿ ತಂದೆ ಖುಷಿಯಿಂದ ಕಣ್ಣೀರು ಹಾಕಿದ್ದರು. ಅಷ್ಟೇ ಅಲ್ಲದೇ, ಕ್ಯಾಪ್ಟನ್ ರೋಹಿತ್ ಶರ್ಮಾ ಕೈಕುಲುಕಲು ಬಂದಾಗ ನನ್ನ ಮಗನನ್ನು ಚೆನ್ನಾಗಿ ನೋಡಿಕೊಳ್ಳಿ, ಅವನ ಬಗ್ಗೆ ಗಮನಹರಿಸಿ ಎಂದಿದ್ದರು. ಅದಕ್ಕೆ ರೋಹಿತ್ ಕೂಡಾ ‘ಅರೇ ಸರ್.. ಖಂಡಿತಾ ಮಾಡ್ತೀನಿ’ ಎಂದು ಕೈ ಕುಲುಕಿ ಪ್ರಾಮಿಸ್ ಮಾಡಿದ್ದರು. ಆ ಭರವಸೆಯನ್ನು ರೋಹಿತ್ ಉಳಿಸಿಕೊಂಡಿದ್ದಾರೆ.

ರಾಂಚಿ ಟೆಸ್ಟ್ ಪಂದ್ಯದ ಮೂರನೇ ದಿನ ಇಂಗ್ಲೆಂಡ್ ದ್ವಿತೀಯ ಇನಿಂಗ್ಸ್ ವೇಳೆ ರೋಹಿತ್ ಹೆಚ್ಚು ಕಡಿಮೆ ಸರ್ಫರಾಜ್ ಗೆ ತಂದೆಯಂತೆ ಕಿವಿ ಹಿಂಡಿ ಬುದ್ಧಿ ಹೇಳಿದ್ದಾರೆ. ಕುಲದೀಪ್ ಯಾದವ್ ಬೌಲಿಂಗ್ ಮಾಡುತ್ತಿದ್ದಾಗ ರೋಹಿತ್ ಬೌಂಡರಿ ಗೆರೆ ಬಳಿ ನಿಂತಿದ್ದ ಸರ್ಫರಾಜ್ ರನ್ನು ಕ್ರೀಸ್ ಪಕ್ಕ ಫೀಲ್ಡಿಂಗ್ ಮಾಡಲು ಸೂಚಿಸಿದರು. ತಕ್ಷಣವೇ ದೂರದಿಂದ ಓಡಿ ಬಂದ ಸರ್ಫರಾಜ್ ನಾಯಕನ ಅಪ್ಪಣೆ ಪಾಲಿಸಿದರು.

ಆದರೆ ಸಮಯ ವ್ಯರ್ಥವಾಗುತ್ತದೆಂದು ಹೆಲ್ಮೆಟ್ ಧರಿಸದೇ ಫೀಲ್ಡ್ ಮಾಡಲು ಹೊರಟಿದ್ದರು. ಆಗ ತಕ್ಷಣವೇ ಸರ್ಫರಾಜ್ ಪಕ್ಕ ಬಂದ ರೋಹಿತ್ ಹೆಲ್ಮೆಟ್ ಹಾಕು, ಇಲ್ಲದಿದ್ದರೆ ಅಪಾಯವಾಗಬಹುದು. ‘ಓಯ್ ಹೀರೋ ಆಗಲು ಹೋಗಬೇಡ’ ಎಂದು ಬುದ್ಧಿವಾದ ಹೇಳಿದರು. ಅದಕ್ಕೆ ಅಂಪಾಯರ್ ಕೂಡಾ ಸಾಥ್ ನೀಡಿದರು. ಹೆಲ್ಮೆಟ್ ಇಲ್ಲದೇ ಆ ಜಾಗದಲ್ಲಿ ಫೀಲ್ಡಿಂಗ್ ಮಾಡುವುದು ಅಪಾಯ ಎಂದು ಬುದ್ಧಿ ಹೇಳಿದರು. ಕೊನೆಗೆ ಸರ್ಫರಾಜ್ ತಮ್ಮ ನಾಯಕನ ಮಾತು ಕೇಳಬೇಕಾಯಿತು. ಸುರಕ್ಷತೆಯಿಲ್ಲದೇ ಅಪಾಯಕಾರಿ ಸ್ಥಳದಲ್ಲಿ ಫೀಲ್ಡಿಂಗ್ ಮಾಡಲು ಹೊರಟ ಸರ್ಫರಾಜ್ ಗೆ ರೋಹಿತ್ ತಂದೆಯ ಸ್ಥಾನದಲ್ಲಿ ನಿಂತು ಬುದ್ಧಿ ಹೇಳಿದರು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs ENG: ದ್ವಿತೀಯ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಗ್ಯಾರಂಟಿ

ಹಲವು ಮಹಿಳೆಯರೊಂದಿಗೆ ಆಫೇರ್‌, ಆರ್‌ಸಿಬಿ ಆಟಗಾರನ ವಿರುದ್ಧ ಮಹಿಳೆ ದೂರು

ರಿಷಭ್ ಪಂತ್ ಸೋಮರ್ ಸಾಲ್ಟ್ ಸೆಲೆಬ್ರೇಷನ್ ಅಪಾಯಕಾರಿಯಾ: ವೈದ್ಯರ ಶಾಕಿಂಗ್ ಪ್ರತಿಕ್ರಿಯೆ

ಏಷ್ಯನ್ ಕಪ್‌ 2025, ಪಹಲ್ಗಾಮ್ ದಾಳಿ ಬಳಿಕ ಭಾರತ, ಪಾಕಿಸ್ತಾನ ಮುಖಾಮುಖಿ ಸಾಧ್ಯತೆ

ಗಿಲ್ ನಾಯಕತ್ವಕ್ಕೆ ಫುಲ್ ಮಾರ್ಕ್ಸ್‌ ನೀಡಿದ ಕನ್ನಡಿಗ ಪ್ರಸಿದ್ಧ್‌ ಕೃಷ್ಣ

ಮುಂದಿನ ಸುದ್ದಿ
Show comments