Select Your Language

Notifications

webdunia
webdunia
webdunia
webdunia

ಚಾಂಪಿಯನ್ಸ್ ಟ್ರೋಫಿ ಗೆಲ್ಲಲು ರೋಹಿತ್ ಶರ್ಮಾಗೆ ಸಿಕ್ತು ಗಣೇಶನ ಆಶೀರ್ವಾದ

Rohit Sharma

Krishnaveni K

ಮುಂಬೈ , ಶನಿವಾರ, 6 ಜುಲೈ 2024 (10:38 IST)
ಮುಂಬೈ: ಟೀಂ ಇಂಡಿಯಾಗೆ 17 ವರ್ಷಗಳ ಬಳಿಕ ಟಿ20 ವಿಶ್ವಕಪ್ ಗೆದ್ದುಕೊಟ್ಟ ನಾಯಕ ರೋಹಿತ್ ಶರ್ಮಾಗೆ ಈಗ ಎಲ್ಲೆಡೆಯಿಂದ ಪ್ರಶಂಸೆಗಳ ಸುರಿಮಳೆಯಾಗುತ್ತಿದೆ. ರೋಹಿತ್ ಮುಂದಿನ ಟಾರ್ಗೆಟ್ ಚಾಂಪಿಯನ್ಸ್ ಟ್ರೋಫಿ ಆಗಿದ್ದು ಅದನ್ನು ಗೆಲ್ಲಲು ಈಗ ಗಣೇಶನ ಆಶೀರ್ವಾದ ಸಿಕ್ಕಿದೆ.

ಮೊನ್ನೆಯಷ್ಟೇ ಟೀಂ ಇಂಡಿಯಾ ಟಿ20 ವಿಶ್ವಕಪ್ ಗೆಲುವಿನ ಬಳಿಕ ವಿಶೇಷ ವಿಮಾನದಲ್ಲಿ ಬಾರ್ಬಡೋಸ್ ನಿಂದ ಭಾರತಕ್ಕೆ ಬಂದಿಳಿದಿತ್ತು. ದೆಹಲಿಯಲ್ಲಿ ಪ್ರಧಾನಿ ಮೋದಿ ಭೇಟಿ ಬಳಿಕ ಸಂಜೆ ಮುಂಬೈನಲ್ಲಿ ರೋಡ್ ಶೋ ಮೂಲಕ ಸಂಭ್ರಮಾಚರಣೆ ನಡೆದಿತ್ತು.

ಇದೆಲ್ಲಾ ಗೌಜಿ ಗದ್ದಲ ಬಳಿಕ ಮನೆಗೆ ಮರಳಿದ ರೋಹಿತ್ ಗೆ ಅಲ್ಲಿಯೂ ಗೆಳೆಯರಿಂದ ಭರ್ಜರಿ ಸ್ವಾಗತ ದೊರೆತಿತ್ತು. ಭಾರತಕ್ಕೆ ವಿಶ್ವಕಪ್ ಗೆಲ್ಲಿಸಿಕೊಟ್ಟ ರೋಹಿತ್ ಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಕೂಡಾ ಗೌರವ ಸಲ್ಲಿಸಿದ್ದಾರೆ. ಗಣೇಶನ ಮೂರ್ತಿಯೊಂದನ್ನು ನೀಡಿ ರೋಹಿತ್ ಗೆ ಶಾಲು ಹೊದೆಸಿ ಏಕನಾಥ ಶಿಂಧೆ ಸನ್ಮಾನಿಸಿದ್ದಾರೆ.

ಇದನ್ನು ನೋಡಿದ ನೆಟ್ಟಿಗರು ರೋಹಿತ್ ಗೆ ಗಣಪತಿ ಬಪ್ಪಾ ಆಶೀರ್ವಾದ ಸಿಕ್ಕಾಯ್ತು. ಮುಂದಿನ ಟಾರ್ಗೆಟ್ ಚಾಂಪಿಯನ್ಸ್ ಟ್ರೋಫಿ ಎಂದಿದ್ದಾರೆ. ಪಾಕಿಸ್ತಾನದಲ್ಲಿ ಮುಂದಿನ ವರ್ಷ ಆರಂಭದಲ್ಲಿ ಚಾಂಪಿಯನ್ಸ್ ಟ್ರೋಫಿ ನಡೆಯಲಿದ್ದು, ಈ ಟೂರ್ನಿಯನ್ನು ಗೆಲ್ಲುವುದು ಭಾರತದ ಮುಂದಿನ ಗುರಿಯಾಗಿರಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಟಿ20 ವಿಶ್ವಕಪ್ ಮುಗಿದ ಬೆನ್ನಲ್ಲೇ ಟೀಂ ಇಂಡಿಯಾ ಕಿರಿಯರಿಗೆ ಜಿಂಬಾಬ್ವೆ ಪರೀಕ್ಷೆ ಇಂದಿನಿಂದ ಶುರು