Webdunia - Bharat's app for daily news and videos

Install App

ಕ್ಯಾಚ್ ಬಿಟ್ಟಿದ್ದಕ್ಕೆ ಪಶ್ಚಾತ್ತಾಪ: ಅಕ್ಸರ್ ಪಟೇಲ್ ಗಾಗಿ ದೊಡ್ಡ ನಿರ್ಧಾರ ಮಾಡಿದ ರೋಹಿತ್ ಶರ್ಮಾ

Krishnaveni K
ಶುಕ್ರವಾರ, 21 ಫೆಬ್ರವರಿ 2025 (13:09 IST)
ದುಬೈ: ಬಾಂಗ್ಲಾದೇಶ ವಿರುದ್ಧ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಅಕ್ಸರ್ ಪಟೇಲ್ ಗೆ ತನ್ನಿಂದಾಗಿ ಹ್ಯಾಟ್ರಿಕ್ ಚಾನ್ಸ್ ಮಿಸ್ ಆಯ್ತು ಎಂಬ ಕಾರಣಕ್ಕೆ ನಾಯಕ ರೋಹಿತ್ ಶರ್ಮಾ ದೊಡ್ಡ ನಿರ್ಧಾರ ತೆಗೆದುಕೊಂಡಿದ್ದಾರೆ.

ನಿನ್ನೆಯ ಪಂದ್ಯದಲ್ಲಿ ತಾವೆಸೆದ ಮೊದಲ ಓವರ್ ನಲ್ಲೇ ಅಕ್ಸರ್ ಸತತ ಎರಡು ವಿಕೆಟ್ ಪಡೆದು ಹ್ಯಾಟ್ರಿಕ್ ವಿಕೆಟ್ ಪಡೆಯುವ ಅವಕಾಶ ಹೊಂದಿದ್ದರು. ಐಸಿಸಿ ಕೂಟದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಅಪರೂಪದ ದಾಖಲೆ ಅವರು ಮಾಡಲಿದ್ದರು.

ಆದರೆ ಮೂರನೇ ಎಸೆತದಲ್ಲಿ ತಮ್ಮ ಕೈಗೆ ಬಂದ ಕ್ಯಾಚ್ ಕೈ ಚೆಲ್ಲಿ ರೋಹಿತ್ ಆ ಅವಕಾಶವನ್ನು ಹಾಳು ಮಾಡಿದರು. ಇದು ರೋಹಿತ್ ಗೂ ತೀವ್ರ ಬೇಸರ ತಂದಿದೆ. ಮೈದಾನದಲ್ಲೇ ಅಕ್ಸರ್ ಗೆ ಕೈ ಮುಗಿದು ಕ್ಷಮೆ ಕೇಳಿದ್ದರು. ಇದು ಇಷ್ಟಕ್ಕೇ ನಿಂತಿಲ್ಲ.

ಇದೀಗ ತಮ್ಮಿಂದಾಗಿ ಅಕ್ಸರ್ ಗೆ ಬಹುದೊಡ್ಡ ಅವಕಾಶ ಮಿಸ್ ಆಗಿದ್ದಕ್ಕೆ ರೋಹಿತ್ ಒಂದು ನಿರ್ಧಾರಕ್ಕೆ ಬಂದಿದ್ದಾರೆ. ಪಂದ್ಯದ ಬಳಿಕ ಮಾತನಾಡಿದ್ದ ರೋಹಿತ್ ‘ನಾನು ಅಕ್ಸರ್ ರನ್ನು ಡಿನ್ನರ್ ಗೆ ಕರೆದುಕೊಂಡು ಹೋಗುತ್ತೇನೆ. ಅದು ಸುಲಭ ಕ್ಯಾಚ್ ಆಗಿತ್ತು. ಅದನ್ನು ನಾನು ಹಿಡಿಯಬೇಕಾಗಿತ್ತು’ ಎಂದು ರೋಹಿತ್ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IPL 2025 DC vs GT: ನಿಂದು ಎಷ್ಟಿದೆಯೋ ನೋಡ್ಕೋ ಯುವ ಕ್ರಿಕೆಟಿಗನಿಗೆ ಮೈದಾನದಲ್ಲೇ ಝಾಡಿಸಿದ ಇಶಾಂತ್ ಶರ್ಮಾ video

ಬಟ್ಲರ್‌ ಅಬ್ಬರಕ್ಕೆ ತತ್ತರಿಸಿದ ಡೆಲ್ಲಿ ಕ್ಯಾಪಿಟಲ್ಸ್‌, ಅಗ್ರಸ್ಥಾನದಿಂದ ಕೆಳಗಿಳಿಸಿದ ಗುಜರಾತ್ ಟೈಟಾನ್ಸ್‌

GT vs DC Match:ಅಹಮಾದಾಬಾದ್‌ ಬಿಸಿಲ ತಾಪಕ್ಕೆ ಗ್ರೌಂಡ್‌ನಲ್ಲೇ ಸುಸ್ತಾದ ಇಶಾಂತ್ ಶರ್ಮಾ, ಅವಸ್ಥೆ ನೋಡಿ ಗಾಳಿ ಬೀಸಿದ ಸಹ ಆಟಗಾರರು

DCvsGT Match:ಯಾರ್ಕರ್‌ನೊಂದಿಗೆ ಕೆಎಲ್ ರಾಹುಲ್‌ ವಿಕೆಟ್ ಕಿತ್ತ ಕನ್ನಡಿಗ ಪ್ರಸಿದ್ಧ್‌ ಕೃಷ್ಣ

IPL 2025 RCB vs PBKS: ಬೆಂಗಳೂರು ನಿಮ್ಗೆ ಬಿಟ್ಟುಕೊಟ್ವಿ, ಪಂಜಾಬ್ ನಲ್ಲಿ ಬಿಡೋ ಮಾತೇ ಇಲ್ಲ

ಮುಂದಿನ ಸುದ್ದಿ
Show comments