Webdunia - Bharat's app for daily news and videos

Install App

ಐಸಿಸಿ ಟೀಂ ಇಂಡಿಯಾಗೆ ಅನುಕೂಲ ಮಾಡ್ತಿದೆ ಎಂಬ ಅಫ್ರಿದಿ ಆರೋಪಕ್ಕೆ ರೋಜರ್ ಬಿನ್ನಿ ತಿರುಗೇಟು

Webdunia
ಶನಿವಾರ, 5 ನವೆಂಬರ್ 2022 (09:00 IST)
ಮುಂಬೈ: ಟಿ20 ವಿಶ್ವಕಪ್ ನಲ್ಲಿ ಟೀಂ ಇಂಡಿಯಾವನ್ನು ಸೆಮಿಫೈನಲ್ ವರೆಗೆ ತಲುಪಿಸಲು ಐಸಿಸಿಯೇ ಅನುಕೂಲ ಮಾಡಿಕೊಡ್ತಿದೆ ಎಂಬ ಪಾಕ್ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಆರೋಪಕ್ಕೆ ಬಿಸಿಸಿಐ ನೂತನ ಅಧ್ಯಕ್ಷ ರೋಜರ್ ಬಿನ್ನಿ ತಿರುಗೇಟು ನೀಡಿದ್ದಾರೆ.

‘ಖಾಸಗಿ ವಾಹಿನಿಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಅಫ್ರಿದಿ ‘ಶಕೀಬ್ ಅಲ್ ಹಸನ್ ಕೂಡಾ ಇದನ್ನೇ ಹೇಳಿದ್ದರು. ಮಳೆ ಬಂದ ಮೇಲೆ ಮೈದಾನ ಒದ್ದೆಯಾಗಿತ್ತು. ಆದರೆ ಐಸಿಸಿಗೆ ಹೇಗಾದರೂ ಟೀಂ ಇಂಡಿಯಾವನ್ನು ಸೆಮಿಫೈನಲ್ ವರೆಗೆ ತಲುಪಿಸಬೇಕಿತ್ತು. ಹಾಗಾಗಿ ತಕ್ಷಣವೇ ಪಂದ್ಯ ಆರಂಭಿಸಲಾಯಿತು. ಐಸಿಸಿ ಟೀಂ ಇಂಡಿಯಾಗೆ ಅನುಕೂಲ ಮಾಡಿಕೊಡುವುದಕ್ಕೆ ಹಲವು ಕಾರಣಗಳಿವೆ’ ಎಂದು ಅಫ್ರಿದಿ ಆರೋಪಿಸಿದ್ದರು.

ಇದಕ್ಕೆ ತಿರುಗೇಟು ನೀಡಿರುವ ಬಿಸಿಸಿಐ ಅಧ‍್ಯಕ್ಷ ರೋಜರ್ ಬಿನ್ನಿ, ‘ನಾವು ಕ್ರಿಕೆಟ್ ಜಗತ್ತಿನ ಪ್ರಬಲರಾಗಿರಬಹುದು. ಆದರೆ ಐಸಿಸಿ ಕೂಟಗಳಲ್ಲಿ ಎಲ್ಲಾ ತಂಡಗಳನ್ನೂ ಒಂದೇ ರೀತಿ ನೋಡಲಾಗುತ್ತದೆ.  ನಾವು ಹೇಗೆ ಇತರ ತಂಡಗಳಿಂದ ಭಿನ್ನರಾಗುತ್ತೇವೆ? ಇಂತಹ ಹೇಳಿಕೆ ಸರಿಯಲ್ಲ’ ಎಂದು ಬಿನ್ನಿ ಹೇಳಿದ್ದಾರೆ.


-Edited by Rajesh Patil

ಸಂಬಂಧಿಸಿದ ಸುದ್ದಿ

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments