ಐಸಿಸಿ ಟೀಂ ಇಂಡಿಯಾಗೆ ಅನುಕೂಲ ಮಾಡ್ತಿದೆ ಎಂಬ ಅಫ್ರಿದಿ ಆರೋಪಕ್ಕೆ ರೋಜರ್ ಬಿನ್ನಿ ತಿರುಗೇಟು

Webdunia
ಶನಿವಾರ, 5 ನವೆಂಬರ್ 2022 (09:00 IST)
ಮುಂಬೈ: ಟಿ20 ವಿಶ್ವಕಪ್ ನಲ್ಲಿ ಟೀಂ ಇಂಡಿಯಾವನ್ನು ಸೆಮಿಫೈನಲ್ ವರೆಗೆ ತಲುಪಿಸಲು ಐಸಿಸಿಯೇ ಅನುಕೂಲ ಮಾಡಿಕೊಡ್ತಿದೆ ಎಂಬ ಪಾಕ್ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಆರೋಪಕ್ಕೆ ಬಿಸಿಸಿಐ ನೂತನ ಅಧ್ಯಕ್ಷ ರೋಜರ್ ಬಿನ್ನಿ ತಿರುಗೇಟು ನೀಡಿದ್ದಾರೆ.

‘ಖಾಸಗಿ ವಾಹಿನಿಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಅಫ್ರಿದಿ ‘ಶಕೀಬ್ ಅಲ್ ಹಸನ್ ಕೂಡಾ ಇದನ್ನೇ ಹೇಳಿದ್ದರು. ಮಳೆ ಬಂದ ಮೇಲೆ ಮೈದಾನ ಒದ್ದೆಯಾಗಿತ್ತು. ಆದರೆ ಐಸಿಸಿಗೆ ಹೇಗಾದರೂ ಟೀಂ ಇಂಡಿಯಾವನ್ನು ಸೆಮಿಫೈನಲ್ ವರೆಗೆ ತಲುಪಿಸಬೇಕಿತ್ತು. ಹಾಗಾಗಿ ತಕ್ಷಣವೇ ಪಂದ್ಯ ಆರಂಭಿಸಲಾಯಿತು. ಐಸಿಸಿ ಟೀಂ ಇಂಡಿಯಾಗೆ ಅನುಕೂಲ ಮಾಡಿಕೊಡುವುದಕ್ಕೆ ಹಲವು ಕಾರಣಗಳಿವೆ’ ಎಂದು ಅಫ್ರಿದಿ ಆರೋಪಿಸಿದ್ದರು.

ಇದಕ್ಕೆ ತಿರುಗೇಟು ನೀಡಿರುವ ಬಿಸಿಸಿಐ ಅಧ‍್ಯಕ್ಷ ರೋಜರ್ ಬಿನ್ನಿ, ‘ನಾವು ಕ್ರಿಕೆಟ್ ಜಗತ್ತಿನ ಪ್ರಬಲರಾಗಿರಬಹುದು. ಆದರೆ ಐಸಿಸಿ ಕೂಟಗಳಲ್ಲಿ ಎಲ್ಲಾ ತಂಡಗಳನ್ನೂ ಒಂದೇ ರೀತಿ ನೋಡಲಾಗುತ್ತದೆ.  ನಾವು ಹೇಗೆ ಇತರ ತಂಡಗಳಿಂದ ಭಿನ್ನರಾಗುತ್ತೇವೆ? ಇಂತಹ ಹೇಳಿಕೆ ಸರಿಯಲ್ಲ’ ಎಂದು ಬಿನ್ನಿ ಹೇಳಿದ್ದಾರೆ.


-Edited by Rajesh Patil

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಶ್ರೇಯಸ್ ಅಯ್ಯರ್‌ ತಂದೆಯಿಂದಲೇ ಬಂತು ಅಭಿಮಾನಿಗಳಿಗೆ ಸಂದೇಶ, ಇಲ್ಲಿದೆ ಮಾಹಿತಿ

ರೋಹಿತ್, ವಿರಾಟ್ ಕೊಹ್ಲಿ ಟೀಕಕಾರರಿಗೆ ಚಾಟಿ ಬೀಸಿದ ಎಬಿ ಡಿಲಿವಿಯರ್ಸ್‌

ಗಾಯಗೊಂಡ ಪ್ರತೀಕಾ ರಾವಲ್ ಜಾಗಕ್ಕೆ ಸ್ಥಾನ ಗಿಟ್ಟಿಸಿಕೊಂಡ ಶಫಾಲಿ ವರ್ಮಾ

ಶ್ರೇಯಸ್ ಅಯ್ಯರ್ ಪೋಷಕರ ಆಗಮನಕ್ಕಾಗಿ ಕಾಯುತ್ತಿರುವ ಬಿಸಿಸಿಐ, ಯಾಕೆ ಗೊತ್ತಾ

ಶ್ರೇಯಸ್ ಅಯ್ಯರ್ ಹೇಗಿದ್ದಾರೆ ಎಂದಿದ್ದಕ್ಕೆ ಸೂರ್ಯಕುಮಾರ್ ಯಾದವ್ ಹೇಳಿದ್ದೇನು

ಮುಂದಿನ ಸುದ್ದಿ
Show comments