Select Your Language

Notifications

webdunia
webdunia
webdunia
webdunia

ಕುಲದೀಪ್ ಯಾದವ್ ಗೆ ಔಟಾಗೋ ಎಂದು ರಿಷಬ್ ಪಂತ್ ಆವಾಜ್ (video)

Rishab Pant-Kuldeep Yadav

Krishnaveni K

ಬೆಂಗಳೂರು , ಸೋಮವಾರ, 9 ಸೆಪ್ಟಂಬರ್ 2024 (09:00 IST)
Photo Credit: X
ಬೆಂಗಳೂರು: ಸ್ಟಂಪ್ ಹಿಂದುಗಡೆ ಎದುರಾಳಿ ಆಟಗಾರರನ್ನು ಕೆಣುಕುವುದರಲ್ಲಿ ರಿಷಬ್ ಪಂತ್ ನಂ.1. ಅವರು ಆಸ್ಟ್ರೇಲಿಯಾ ಆಟಗಾರರನ್ನೂ ಬಿಟ್ಟಿಲ್ಲ. ಇದೀಗ ದುಲೀಪ್ ಟ್ರೋಫಿ ಪಂದ್ಯಾವಳಿಯಲ್ಲಿ ಕುಲದೀಪ್ ಯಾದವ್ ರನ್ನು ಔಟಾಗು ಬೇಗ ಎಂದು ಕಿಚಾಯಿಸಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಭಾರತ ಎ ಮತ್ತು ಭಾರತ ಬಿ ತಂಡಗಳ ನಡುವಿನ ದುಲೀಪ್ ಟ್ರೋಫಿ ಪಂದ್ಯದಲ್ಲಿ ನಾಲ್ಕನೇ ದಿನದಾಟದಲ್ಲಿ ರಿಷಬ್ ಪಂತ್ ಮತ್ತು ಕುಲದೀಪ್ ನಡುವಿನ ತಮಾಷೆಯ ಮಾತುಕತೆ ಸ್ಟಂಪ್ ಮೈಕ್ ನಲ್ಲಿ ಸೆರೆಯಾಗಿದೆ. ಕುಲದೀಪ್ ಭಾರತ ಎ ತಂಡದ ಪರ ಆಡಿದರೆ ರಿಷಬ್ ಭಾರತ ಬಿ ತಂಡದ ಪರ ಆಡುತ್ತಿದ್ದರು.

ಭಾರತ ಎ ತಂಡ ಬ್ಯಾಟಿಂಗ್ ಮಾಡುತ್ತಿದ್ದಾಗ ಜಿಗುಟಿನ ಆಟವಾಡುತ್ತಿದ್ದ ಕುಲದೀಪ್ ಯಾದವ್ ರನ್ನು ರಿಷಬ್ ಕೆಣಕಿದ್ದಾರೆ. ವಿಕೆಟ್ ಕೀಪರ್ ಆಗಿ ವಿಕೆಟ್ ಹಿಂದುಗಡೆ ನಿಂತು ಕುಲದೀಪ್ ಗೆ ಕೇಳುವಂತೆ ತಮ್ಮ ಸಹ ಆಟಗಾರನಿಗೆ ‘ಇವನಿಗೆ ಸಿಂಗಲ್ಸ್ ತೆಗೆಯಲು ಬಿಡು. ಇವನಿಗಾಗಿ ನಾನು ಜಬರ್ದಸ್ತ್ ಪ್ಲ್ಯಾನ್ ಮಾಡಿದ್ದೇನೆ’ ಎಂದು ಕಿಚಾಯಿಸಿದ್ದಾರೆ.

ರಿಷಬ್ ಮಾತು ಕೇಳಿ ಕುಲದೀಪ್ ಕೂಡಾ ಸುಮ್ಮನೆ ಕೂರಲಿಲ್ಲ. ‘ಆಯ್ತು ಮಾರಾಯ. ನೀನು ಸ್ವಲ್ಪ ಹೊತ್ತು ಸುಮ್ಮನಿರು’ ಎಂದಿದ್ದಾರೆ. ಇದಕ್ಕೆ ರಿಷಬ್ ‘ಹಾಗಿದ್ದರೆ ಬೇಗ ಔಟಾಗು’ ಎಂದಿದ್ದಾರೆ. ಇನ್ನೊಮ್ಮೆ ‘ಎಲ್ಲರೂ ಹತ್ತಿರ ಬನ್ನಿ, ಇವನು ಸಿಂಗಲ್ಸ್ ತೆಗೆದುಕೊಳ್ಳುತ್ತಾನೆ’ ಎಂದು ರಿಷಬ್ ಹೇಳಿದ್ದಕ್ಕೆ ‘ನಾನು ತೆಗೆದುಕೊಳ್ಳಲ್ಲ’ ಎಂದಿದ್ದಾರೆ ಕುಲದೀಪ್. ಆಗ ‘ಹಾಗಿದ್ದರೆ ಅಮ್ಮನ ಮೇಲೆ ಆಣೆ ಮಾಡು’ ಎಂದಿದ್ದಾರೆ. ಇದೇ ರೀತಿ ಕುಲದೀಪ್ ಕ್ರೀಸ್ ನಲ್ಲಿದ್ದಷ್ಟು ಹೊತ್ತು ಇಬ್ಬರ ನಡುವೆ ತಮಾಷೆ ನಡೆಯುತ್ತಲೇ ಇತ್ತು.



Share this Story:

Follow Webdunia kannada

ಮುಂದಿನ ಸುದ್ದಿ

ದುಲೀಪ್ ಟ್ರೋಫಿಯಲ್ಲಿ ರಿಷಬ್ ಪಂತ್ ಬ್ಯಾಟಿಂಗ್ ಕೆಎಲ್ ರಾಹುಲ್ ಗೆ ಶುರುವಾಯ್ತು ಆತಂಕ