Select Your Language

Notifications

webdunia
webdunia
webdunia
webdunia

ಅಪಘಾತಕ್ಕೀಡಾದ ರಿಷಬ್ ಪಂತ್ ರನ್ನು ದೆಹಲಿಯಿಂದ ಮುಂಬೈಗೆ ಏರ್ ಲಿಫ್ಟ್

ಅಪಘಾತಕ್ಕೀಡಾದ ರಿಷಬ್ ಪಂತ್ ರನ್ನು ದೆಹಲಿಯಿಂದ ಮುಂಬೈಗೆ ಏರ್ ಲಿಫ್ಟ್
ನವದೆಹಲಿ , ಬುಧವಾರ, 4 ಜನವರಿ 2023 (16:00 IST)
ನವದೆಹಲಿ: ಇತ್ತೀಚೆಗೆ ರಸ್ತೆ ಅಪಘಾತಕ್ಕೀಡಾಗಿ ದೆಹಲಿಯ ಆಸ್ಪತ್ರೆಗೆ ದಾಖಲಾಗಿದ್ದ ಟೀಂ ಇಂಡಿಯಾ ಕ್ರಿಕೆಟಿಗ ರಿಷಬ್ ಪಂತ್ ರನ್ನು ಮುಂಬೈಗೆ ಏರ್ ಲಿಫ್ಟ್ ಮಾಡಲಾಗಿದೆ.

ಅಪಘಾತದಲ್ಲಿ ರಿಷಬ್ ಮಂಡಿರಜ್ಜು, ಹಣೆಗೆ ಗಾಯವಾಗಿತ್ತು. ಕಾಲು ಮುರಿತಕ್ಕೊಳಗಾಗಿರುವುದರಿಂದ ರಿಷಬ್ ಗೆ ಹೆಚ್ಚಿನ ಚಿಕಿತ್ಸೆ ನೀಡಲು ಮುಂಬೈನ ಕೋಕಿಲಾ ಬೆನ್ ಆಸ್ಪತ್ರೆಗೆ ರವಾನಿಸಲಾಗಿದೆ.

ಅವರ ಚಿಕಿತ್ಸೆಯ ಸಂಪೂರ್ಣ ಹೊಣೆಯನ್ನು ಬಿಸಿಸಿಐ ವಹಿಸಿಕೊಂಡಿದೆ. ಬಿಸಿಸಿಐ ವೈದ್ಯಕೀಯ ತಂಡವೂ ರಿಷಬ್ ಮೇಲೆ ನಿಗಾ ಇಡಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ಲಂಕಾ ಏಕದಿನ ಸರಣಿಗೆ ತಂಡಕ್ಕೆ ವಾಪಸ್ ಆದ ಜಸ್ಪ್ರೀತ್ ಬುಮ್ರಾ