ಧೋನಿಯ ಒಂದು ಸಲಹೆ ರಿಂಕು ಸಿಂಗ್ ಇಮೇಜ್ ಬದಲಾಯಿಸಿತ್ತು!

Webdunia
ಶನಿವಾರ, 25 ನವೆಂಬರ್ 2023 (08:20 IST)
ಮುಂಬೈ: ಆಸ್ಟ್ರೇಲಿಯಾ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಒತ್ತಡದಲ್ಲಿದ್ದಾಗ ಕೂಲ್ ಆಗಿ ಆಡಿ ಯಶಸ್ವಿಯಾಗಿ ಪಂದ್ಯ ಮುಗಿಸಿದ ಯುವ ಬ್ಯಾಟಿಗ ರಿಂಕು ಸಿಂಗ್ ಬಗ್ಗೆ ಈಗ ಎಲ್ಲೆಡೆ ಹೊಗಳಿಕೆ ಕೇಳಿಬರುತ್ತಿದೆ.

ರಿಂಕು ಸಿಂಗ್ ಈ ರೀತಿ ಫಿನಿಶರ್ ಪಾತ್ರ ಮಾಡುತ್ತಿರುವುದು ಇದೇ ಮೊದಲಲ್ಲ. ಕೋಲ್ಕೊತ್ತಾ ನೈಟ್ ರೈಡರ್ಸ್ ಪರ ಐಪಿಎಲ್ ಆಡುವ ರಿಂಕು ಸಿಂಗ್, ಎರಡು ಬಾರಿ ಅಸಾಧ್ಯವೆನಿಸುವ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿ ತಾವು ಒಬ್ಬ ಉತ್ತಮ ಫಿನಿಶರ್ ಎಂದು ಸಾಬೀತಪಡಿಸಿದ್ದರು.

ಇದೀಗ ಆಸ್ಟ್ರೇಲಿಯಾ ವಿರುದ್ಧ ಟಿ20 ಪಂದ್ಯದ ಬಳಿಕ ಅವರನ್ನು ಧೋನಿಯಂತೆ ಕೂಲ್ ಆಗಿ ಫಿನಿಶ್ ಮಾಡಿದ್ದಾಗಿ ಎಲ್ಲರೂ ಹೊಗಳುತ್ತಿದ್ದಾರೆ. ಆದರೆ ರಿಂಕು ತಮಗೆ ಧೋನಿ ನೀಡಿದ ಸಲಹೆ ಈ ರೀತಿ ಪಂದ್ಯ ಮುಗಿಸಲು ಹೇಗೆ ಸಹಾಯ ಮಾಡಿತು ಎಂದು ಬಯಲು ಮಾಡಿದ್ದಾರೆ.

‘ನಾನು ಒಮ್ಮೆ ಮಹಿ ಭಾಯಿ (ಧೋನಿ) ಬಳಿ ಕೊನೆಯ ಓವರ್ ನಲ್ಲಿ ಕೂಲ್ ಆಗಿ ಪಂದ್ಯ ಮುಗಿಸುವಾಗ ನಿಮ್ಮ ಯೋಚನೆ ಹೇಗಿರುತ್ತದೆ ಎಂದು ಕೇಳಿದ್ದೆ. ಅದಕ್ಕೆ ಅವರು ಮನಸ್ಸು ಶಾಂತವಾಗಿರಬೇಕು ಮತ್ತು ಎಷ್ಟು ಸಾಧ‍್ಯವೋ ಅಷ್ಟು ನೇರ ಹೊಡೆತ ಹೊಡೆಯಬೇಕು ಎಂದಿದ್ದರು. ಅವರ ಸಲಹೆಯಂತೆ ನಾನು ಕೂಲ್ ಆಗಿರಲು ಪ್ರಯತ್ನಿಸುತ್ತೇನೆ. ಯಾವುದೇ ಭಾವನೆ ವ್ಯಕ್ತಪಡಿಸುವುದಿಲ್ಲ. ಇದು ನನಗೆ ಸಹಾಯ ಮಾಡಿತು’ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಕೋಚ್ ಆಗಿ ಬಂದಾಗ ರಾಹುಲ್ ದ್ರಾವಿಡ್ ಹೇಳಿದ್ದ ಈ ಮಾತು ಗಂಭೀರ್ ಗೂ ಪಾಠವಾಗಬೇಕು

ಸಂಜು ಸ್ಯಾಮ್ಸನ್‌ ಅವರನ್ನು ಬಿಟ್ಟುಕೊಟ್ಟ ಬೆನ್ನಲ್ಲೇ ರಾಜಸ್ಥಾನ ರಾಯಲ್ಸ್‌ ಮತ್ತೊಂದು ಕಠಿಣ ನಿರ್ಧಾರ

ಕಾಲು ಮುರಿದಿದ್ರೂ ಆಡಿದ್ದ ರಿಷಭ್ ಪಂತ್ ನೋಡಿ ಕಲಿಯಿರಿ: ಪಿಚ್ ನೋಡಿ ಡವ್ ಮಾಡಿದ್ರಾ ಶುಭಮನ್ ಗಿಲ್

ಟೀಂ ಇಂಡಿಯಾ ಸೋಲಿನ ಬಳಿಕ ಕೋಲ್ಕತ್ತಾ ಪಿಚ್ ಬಗ್ಗೆ ಗಂಗೂಲಿ ಹೇಳಿಕೆ ವೈರಲ್

ರಾಹುಲ್ ದ್ರಾವಿಡ್, ರೋಹಿತ್ ಕಟ್ಟಿದ ತಂಡವನ್ನು ಕೆಡವಿದ ಗೌತಮ್ ಗಂಭೀರ್: ನೆಟ್ಟಿಗರ ಛೀಮಾರಿ

ಮುಂದಿನ ಸುದ್ದಿ
Show comments