ರೇಪ್ ಆರೋಪಗಳ ಮೇಲೆ ಭಾರತೀಯ ಕ್ರಿಕೆಟ್ ಆಟಗಾರನನ್ನು ಬಂಧಿಸಲಾಗಿದೆ ಎಂದು ಜಿಂಬಾಬ್ವೆ ಮಾಧ್ಯಮ ವರದಿಗಳನ್ನು ಪ್ರಕಟಿಸಿದ ಬಳಿಕ ಭಾರೀ ವಿವಾದ ಸ್ಫೋಟಿಸಿತ್ತು. ಆ ಸುದ್ದಿ ವರದಿಯಾದ ಕ್ಷಣದಲ್ಲಿ ಭಯ ಆವರಿಸಿದರೂ, ಆರೋಪಿ ಕ್ರಿಕೆಟರ್ ಅಥವಾ ತಂಡದ ಅಧಿಕಾರಿಯಲ್ಲ, ಆದರೆ ಸರಣಿಯ ಪ್ರಾಯೋಜನೆಗೆ ಸಂಬಂಧಿಸಿದ ವ್ಯಕ್ತಿಯಾಗಿದ್ದ ಎಂಬ ವಿಷಯ ಬಹಿರಂಗವಾಯಿತು.
ಆದಾಗ್ಯೂ ಇನ್ನೊಂದು ಪತ್ರಿಕೆಯಲ್ಲಿ ಈ ಅಪರಾಧಕ್ಕೆ ಸಂಬಂಧಿಸಿದಂತೆ ಇಬ್ಬರು ವ್ಯಕ್ತಿಗಳನ್ನು ಹರಾರೆ ಪೊಲೀಸರು ಬಂಧಿಸಿದ್ದಾರೆಂದು ವರದಿಯಾಯಿತು.
ಆದರೆ ಬಂಧಿತರಾದ ವ್ಯಕ್ತಿಗಳನ್ನು ಐಟಿಡಬ್ಲ್ಯು ಸ್ಫೋರ್ಟ್ಸ್ಗೆ ಸಂಬಂಧಿಸಿದ ಕೃಷ್ಣ ಸತ್ಯನಾರಾಯಣ್ ಮತ್ತು ಜಾಂಬಿಯಾ ಮೂಲದ ಉದ್ಯಮಿ ರಾಜಕುಮಾರ್ ಕೃಷ್ಣನ್ ಎಂದು ಗುರುತಿಸಲಾಗಿದೆ.
ಇವರಿಬ್ಬರನ್ನು ರೇಪ್ ಆರೋಪಗಳ ಮೇಲೆ ಬಂಧಿಸಲಾಗಿದೆ. ಯುವತಿ ದಕ್ಷಿಣ ಆಫ್ರಿಕಾ ಮೂಲದವಳಾಗಿದ್ದು ಅಂತ್ಯಕ್ರಿಯೆ ಸಲುವಾಗಿ ಇಲ್ಲಿಗೆ ಆಗಮಿಸಿ ಅವರಿಬ್ಬರು ಆರೋಪಿಗಳು ತಂಗಿದ್ದ ಹೊಟೆಲ್ನಲ್ಲೇ ತಂಗಿದ್ದಾಗ ಅತ್ಯಾಚಾರಕ್ಕೆ ಒಳಗಾಗಿದ್ದಳು.
ಇಬ್ಬರನ್ನು ಕೋರ್ಟ್ಗೆ ಒಯ್ಯಲಾಗಿದ್ದು ನಿನ್ನೆ ಕಸ್ಟಡಿಗೆ ಒಪ್ಪಿಸಲಾಗಿದೆ.
ಸೋಮವಾರ ಅವರು ಹೈಕೋರ್ಟ್ನಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಲಿದ್ದಾರೆ ಎಂದು ಜಿಂಬಾಬ್ವೆ ರಿಪಬ್ಲಿಕ್ ಪೊಲೀಸ್ ಹಿರಿಯ ಸಹಾಯಕ ಕಮೀಷನರ್ ತಿಳಿಸಿದರು. ಇವರಿಬ್ಬರು ಮೇಕ್ಲೇಸ್ ಹೊಟೆಲ್ನಲ್ಲಿ ತಂಗಿದ್ದಾಗ ಯುವತಿ ಮೇಲೆ ರೇಪ್ ಮಾಡಿದ್ದರು. ಅದೇ ಕಟ್ಟಡದಲ್ಲಿ ಭಾರತೀಯ ಆಟಗಾರರು ಕೂಡ ತಂಗಿದ್ದರಿಂದ ಗೊಂದಲ ಉಂಟಾಗಿತ್ತು.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.