Select Your Language

Notifications

webdunia
webdunia
webdunia
webdunia

ವಿರಾಟ್ ನಾಯಕತ್ವ ಬಿಡದಂತೆ ಸೂಚಿಸಿದ್ದೆವು: ಮುಖ್ಯ ಆಯ್ಕೆಗಾರ!

ವಿರಾಟ್ ನಾಯಕತ್ವ ಬಿಡದಂತೆ ಸೂಚಿಸಿದ್ದೆವು: ಮುಖ್ಯ ಆಯ್ಕೆಗಾರ!
ಮುಂಬೈ , ಶನಿವಾರ, 1 ಜನವರಿ 2022 (10:54 IST)
ಮುಂಬೈ: ಟೀಂ ಇಂಡಿಯಾ ಟಿ20 ನಾಯಕತ್ವ ಬಿಡದಂತೆ ವಿರಾಟ್ ಕೊಹ್ಲಿಗೆ ಮನವಿ ಮಾಡಿದ್ದೆವು ಎಂದು ಈ ಮೊದಲು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ ಮಾತನ್ನೇ ಈಗ ಮುಖ್ಯ ಆಯ್ಕೆಗಾರ ಚೇತನ್ ಶರ್ಮಾ ಪುನರುಚ್ಚರಿಸಿದ್ದಾರೆ.

ಗಂಗೂಲಿ ಹೇಳಿಕೆ ಬೆನ್ನಲ್ಲೇ ಕೊಹ್ಲಿ ನನಗೆ ಯಾರೂ ನಾಯಕತ್ವ ಬಿಡದಂತೆ ಸೂಚಿಸಿರಲಿಲ್ಲ. ಸೀಮಿತ ಓವರ್ ಗಳ ನಾಯಕತ್ವದಿಂದ ಕೆಳಗಿಳಿಸುತ್ತಿರುವುದಾಗಿ ಕೇವಲ 90 ನಿಮಿಷಗಳ ಮೊದಲು ಹೇಳಿದ್ದರು ಎಂದು ವಿವಾದ ಸೃಷ್ಟಿಸಿದ್ದರು.

ಆದರೆ ಈಗ ಮುಖ್ಯ ಆಯ್ಕೆಗಾರರೂ ಗಂಗೂಲಿ ಹೇಳಿಕೆಯನ್ನೇ ಪುನರುಚ್ಚರಿಸುತ್ತಿದ್ದಾರೆ. ಟಿ20 ನಾಯಕತ್ವ ಬಿಡದಂತೆ ಸೂಚಿಸಿದ್ದೆವು. ಆದರೆ ಅವರು ಬಿಟ್ಟಾಗ ಅನಿವಾರ್ಯವಾಗಿ ಏಕದಿನ ನಾಯಕತ್ವದಿಂದಲೂ ಕಿತ್ತು ಹಾಕಲಾಯಿತು. ಈ ಬಗ್ಗೆ ಖುದ್ದು ನಾನೇ 90 ನಿಮಿಷಗಳ ಮೊದಲು ಕೊಹ್ಲಿಗೆ ಕರೆ ಮಾಡಿ ಮಾತನಾಡಿದ್ದೆ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸೆಂಚೂರಿಯನ್ ನಲ್ಲಿ ಹೊಸ ವರ್ಷಾಚರಣೆ ಮಾಡಿದ ಟೀಂ ಇಂಡಿಯಾ