ಗಂಭೀರ್ ಮೇಲೆ ಶ್ರೀಶಾಂತ್ ಈ ಪರಿ ಕೋಪಗೊಳ್ಳಲು ಆ ಕಾರಣ ಆ ಒಂದು ಮಾತು

Webdunia
ಶುಕ್ರವಾರ, 8 ಡಿಸೆಂಬರ್ 2023 (08:59 IST)
Photo Courtesy: Twitter
ನವದೆಹಲಿ: ಲೆಜೆಂಡ್ಸ್ ಕ್ರಿಕೆಟ್ ಲೀಗ್ ನಲ್ಲಿ ಗೌತಮ್ ಗಂಭೀರ್ ಮತ್ತು ಶ್ರೀಶಾಂತ್ ನಡುವೆ ಮಾತಿನ ಚಕಮಕಿಯ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

ಪಂದ್ಯದ ಬಳಿಕ ಶ್ರೀಶಾಂತ್ ಈ ಸಂದರ್ಭದಲ್ಲಿ ಗಂಭೀರ್ ವರ್ತನೆ ಸರಿ ಇರಲಿಲ್ಲ ಎಂದು ವಿಡಿಯೋ ಮೂಲಕ ಕಿಡಿ ಕಾರಿದ್ದರು. ಅವರ ಈ ವಿಡಿಯೋ ವೈರಲ್ ಆಗಿತ್ತು. ಗಂಭೀರ್ ಹೇಳಿದ ಮಾತು ಅಕ್ಷಮ್ಯವಾಗಿತ್ತು ಎಂದು ಶ್ರೀಶಾಂತ್ ಸಿಟ್ಟು ಹೊರಹಾಕಿದ್ದರು.

ತನ್ನ ಬೌಲಿಂಗ್ ನಲ್ಲಿ ಗಂಭೀರ್ ಒಂದು ಸಿಕ್ಸರ್ ಮತ್ತು ಬೌಂಡರಿ ಹೊಡೆದು ಮರು ಎಸೆತದಲ್ಲಿ ರನ್ ಬರದೇ ಇದ್ದಾಗ ಶ್ರೀಶಾಂತ್ ಬ್ಯಾಟಿಂಗ್ ಮಾಡುತ್ತಿದ್ದ ಗಂಭೀರ್ ಕಡೆಗೆ ದಿಟ್ಟಿಸಿ ನೋಡಿದ್ದರು. ಇದರಿಂದ ಕೆರಳಿದ ಗಂಭೀರ್ ಏನು ಎಂಬಂತೆ ಕೈ ಸನ್ನೆ ಮಾಡಿದ್ದಲ್ಲದೆ, ನಾನು ನಿನ್ನಂತೆ ಫಿಕ್ಸರ್ ಅಲ್ಲ ಎಂದಿದ್ದರು.

ಈ ಒಂದು ವಾಕ್ಯವೇ ಶ್ರೀಶಾಂತ್ ಆಕ್ರೋಶಗೊಳ್ಳಲು ಕಾರಣವಾಗಿದೆ. ಇದೇ ಕಾರಣಕ್ಕೆ ಅವರು ಪಂದ್ಯದ ಬಳಿಕವೂ ವಿಡಿಯೋ ಮಾಡಿ ಗಂಭೀರ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಆದರೆ ತಾನು ಹೀಗೆ ಹೇಳಲು ಕಾರಣ ಕೂಡಾ ಶ್ರೀಶಾಂತ್ ತನಗೆ ಅಭದ್ರತೆಯ ನಾಯಿ ಎಂದಿದ್ದು ಎಂದು ಬಳಿಕ ಗಂಭೀರ್ ಸ್ಪಷ್ಟನೆ ನೀಡಿದ್ದರು.

ಶ್ರೀಶಾಂತ್ ಮ್ಯಾಚ್ ಫಿಕ್ಸಿಂಗ್ ಕಳಂಕದಿಂದಾಗಿಯೇ ಕ್ರಿಕೆಟ್ ನಿಂದ ಕೆಲವು ವರ್ಷ ನಿಷೇಧಕ್ಕೊಳಗಾಗಿದ್ದರು. ಬಳಿಕ ಕೋರ್ಟ್ ನಲ್ಲಿ ವಿಚಾರಣೆ ನಡೆದು ಕಳಂಕದಿಂದ ಮುಕ್ತರಾಗಿದ್ದರು. ಹಾಗಿದ್ದರೂ ಅವರಿಗೆ ಐಪಿಎಲ್ ಆಗಲೀ ರಾಷ್ಟ್ರೀಯ ತಂಡದಲ್ಲಾಗಲೀ ಅವಕಾಶ ಸಿಗಲೇ ಇಲ್ಲ. ಇದೇ ವಿಚಾರವನ್ನಿಟ್ಟುಕೊಂಡು ಗಂಭೀರ್ ವ್ಯಂಗ್ಯ ಮಾಡಿದ್ದು ಶ್ರೀಶಾಂತ್ ಕೋಪ ಹೆಚ್ಚಿಸಿತು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

WPL 2026 Final: ಎರಡನೇ ಸಲ ಕಪ್ ನಮ್ದೇ, ಆರ್ ಸಿಬಿ ಡಬ್ಲ್ಯುಪಿಎಲ್ 2026 ಚಾಂಪಿಯನ್ಸ್

WPL 2026 Final: ಆರ್ ಸಿಬಿಗೆ ಗೆಲ್ಲಲು 204 ರನ್ ಗಳ ಗುರಿ ನೀಡಿದ ಡೆಲ್ಲಿ ಕ್ಯಾಪಿಟಲ್ಸ್

WPL FInal: ಫೈನಲ್‌ನಲ್ಲೂ ಟಾಸ್‌ ಗೆದ್ದು ಫಿಲ್ಡಿಂಗ್‌ ಆಯ್ದುಕೊಂಡ ಆರ್‌ಸಿಬಿ: ಎರಡನೇ ಕಪ್‌ ಪಕ್ಕಾನಾ

ಟಿ20 ವಿಶ್ವಕಪ್‌ಗೆ ಮುನ್ನಾ ಪವರ್‌ಫುಲ್ ದೇವರ ಮೊರೆ ಹೋದ ಗೌತಮ್ ಗಂಭೀರ್‌

ಒಪ್ಪಿಗೆಯಿಲ್ಲದೇ ವಿಡಿಯೋ ಮಾಡಿದ ಅರ್ಷ್ ದೀಪ್ ಸಿಂಗ್ ಮೇಲೆ ಸಿಟ್ಟಾದ ತಿಲಕ್ ವರ್ಮಾ Video

ಮುಂದಿನ ಸುದ್ದಿ
Show comments