Select Your Language

Notifications

webdunia
webdunia
webdunia
webdunia

ಏಷ್ಯಾಕಪ್ ನಿಂದ ಹೊರಬಿದ್ದ ರವೀಂದ್ರ ಜಡೇಜಾ, ಅಕ್ಸರ್ ಪಟೇಲ್ ಗೆ ಬುಲಾವ್

ಏಷ್ಯಾಕಪ್ ನಿಂದ ಹೊರಬಿದ್ದ ರವೀಂದ್ರ ಜಡೇಜಾ, ಅಕ್ಸರ್ ಪಟೇಲ್ ಗೆ ಬುಲಾವ್
ದುಬೈ , ಶನಿವಾರ, 3 ಸೆಪ್ಟಂಬರ್ 2022 (09:19 IST)
ದುಬೈ: ಟೀಂ ಇಂಡಿಯಾ ಆಲ್ ರೌಂಡರ್ ರವೀಂದ್ರ ಜಡೇಜಾ ಗಾಯಗೊಂಡಿದ್ದು ಪ್ರಸಕ್ತ ನಡೆಯುತ್ತಿರುವ ಏಷ್ಯಾ ಕಪ್ ನಿಂದ ಹೊರಬಿದ್ದಿದ್ದಾರೆ.

ಜಡೇಜಾ ಬದಲಿಗೆ ಮೀಸಲು ಆಟಗಾರನಾಗಿದ್ದ ಅಕ್ಸರ್ ಪಟೇಲ್ ತಂಡವನ್ನು ಕೂಡಿಕೊಳ್ಳಲಿದ್ದಾರೆ. ಮೊದಲ ಎರಡು ಲೀಗ್ ಪಂದ್ಯಗಳಲ್ಲಿ ಜಡೇಜಾ ಆಡಿದ್ದರು. ಪಾಕ್ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಜೊತೆಗೆ ಉತ್ತಮ ಜೊತೆಯಾಟ ನಿಭಾಯಿಸಿ ಗೆಲುವಿಗೆ ಕಾರಣರಾಗಿದ್ದರು.

ಬಲ ಮೊಣಕಾಲಿಗೆ ಗಾಯ ಮಾಡಿಕೊಂಡಿರುವ ಜಡೇಜಾ ಮೇಲೆ ಬಿಸಿಸಿಐ ವೈದ್ಯಕೀಯ ತಂಡ ನಿಗಾ ವಹಿಸಿದೆ. ಅವರ ಅನುಪಸ್ಥಿತಿ ಭಾರತಕ್ಕೆ ಕಾಡಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೆಎಲ್ ರಾಹುಲ್ ಗೆ ಪೈಪೋಟಿ ಒಡ್ಡಲಿದ್ದಾರೆ ಶುಬ್ನಂ ಗಿಲ್