Select Your Language

Notifications

webdunia
webdunia
webdunia
webdunia

ಆಟಗಾರರಿಗೆ ಯಾವತ್ತೂ ಇದೊಂದೇ ಚಿಂತೆ: ರವಿಶಾಸ್ತ್ರಿ

ಆಟಗಾರರಿಗೆ ಯಾವತ್ತೂ ಇದೊಂದೇ ಚಿಂತೆ: ರವಿಶಾಸ್ತ್ರಿ
ಅಹಮ್ಮದಾಬಾದ್ , ಭಾನುವಾರ, 7 ಮಾರ್ಚ್ 2021 (08:51 IST)
ಅಹಮ್ಮದಾಬಾದ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯನ್ನು 3-1 ರಿಂದ ಗೆದ್ದು ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಗೆ ಅರ್ಹತೆ ಗಿಟ್ಟಿಸಿದ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ತಮ್ಮ ಆಟಗಾರರ ಬಗ್ಗೆ ಮಾತನಾಡಿದ್ದಾರೆ.

 

ಕೊರೋನಾ ಕಾರಣದಿಂದ ಬಯೋಬಬಲ್ ನಲ್ಲಿ ಆಟಗಾರರು ಕಾಲ ಕಳೆಯುತ್ತಿದ್ದಾರೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ತಂಡದ ಆಟಗಾರರ ಮನಸ್ಥಿತಿ ಹೇಗಿದೆ ಎಂದು ರವಿಶಾಸ್ತ್ರಿಗೆ ಕೇಳಿದಾಗ ಅವರು ಆಟಗಾರರಿಗೆ ಯಾವತ್ತೂ ಇದೇ ಚಿಂತೆಯಾಗಿದೆ ಎಂದಿದ್ದಾರೆ.

‘ಬೆಳಿಗ್ಗೆ ಏಳುವಾಗಲೇ ಬಬಲ್... ಬಬಲ್ ಎನ್ನುತ್ತಲೇ ದಿನ ಆರಂಭಿಸುತ್ತಾರೆ. ರಾತ್ರಿ ಮಲಗುವಾಗಲೂ ಇದೇ ಯೋಚನೆ. ಇಂತಹ ಸಂದರ್ಭದಲ್ಲೂ ಪರಿಸ್ಥಿತಿಗೆ ಹೊಂದಿಕೊಂಡು ಪ್ರತೀ ಪಂದ್ಯವನ್ನು ಎದುರಿಸಿದ ಬಗೆ ಅಭಿನಂದನೀಯ’ ಎಂದು ರವಿಶಾಸ್ತ್ರಿ ಹೇಳಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ಇಂಗ್ಲೆಂಡ್ ಟೆಸ್ಟ್: ಟೀಂ ಇಂಡಿಯಾಗೆ ರೋಹಿತ್ ಶರ್ಮಾ ಆಸರೆ