Webdunia - Bharat's app for daily news and videos

Install App

ರಣಜಿ ಟ್ರೋಫಿ ಫೈನಲ್: ಮೊದಲು ಟ್ರೋಫಿ ಎತ್ತಿಕೊಳ್ಳಲು ಟೀಂ ಇಂಡಿಯಾ ಈ ಇಬ್ಬರು ಆಟಗಾರರ ನಡುವೆ ಫೈಟ್!

Webdunia
ಭಾನುವಾರ, 3 ಫೆಬ್ರವರಿ 2019 (09:20 IST)
ನಾಗ್ಪುರ: ರಣಜಿ ಟ್ರೋಫಿ ಫೈನಲ್ ಪಂದ್ಯ  ಇಂದಿನಿಂದ ಆರಂಭವಾಗುತ್ತಿದ್ದು, ಸೌರಾಷ್ಟ್ರ ಮತ್ತು ವಿದರ್ಭ ತಂಡಗಳು ಪರಸ್ಪರ ಸೆಣಸಾಡಲಿವೆ.


ಜಯದೇವ್ ಉನಾದ್ಕಟ್ ನಾಯಕರಾಗಿರುವ ಸೌರಾಷ್ಟ್ರದಲ್ಲಿ ಟೀಂ ಇಂಡಿಯಾ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರ ಕೇಂದ್ರ ಬಿಂದು. ಅತ್ತ ವಿದರ್ಭ ತಂಡಕ್ಕೆ ಟೀಂ ಇಂಡಿಯಾ ವೇಗಿ ಉಮೇಶ್ ಯಾದವ್  ಪ್ರಮುಖ ಆಟಗಾರ.

ವಿಶೇಷವೆಂದರೆ ಇಬ್ಬರೂ ಇದುವರೆಗೆ ಹಲವು ರಣಜಿ ಪಂದ್ಯಗಳಾಡಿದ್ದರೂ ಫೈನಲ್ ನಲ್ಲಿ ಗೆದ್ದು ರಣಜಿ ಟ್ರೋಫಿ ಎತ್ತಿಕೊಂಡಿಲ್ಲ. ಇದೇ ಮೊದಲ ಬಾರಿಗೆ ಇಬ್ಬರೂ ಆಟಗಾರರು ರಣಜಿ ಟ್ರೋಫಿ ಎತ್ತಿಕೊಳ್ಳಲು ಪೈಪೋಟಿ ನಡೆಸುತ್ತಿದ್ದಾರೆ. ಮೇಲ್ನೋಟಕ್ಕೆ ಸೌರಾಷ್ಟ್ರವೇ ಬಲಿಷ್ಠವೆನಿಸಿದರೂ ವಿದರ್ಭ ಕೂಡಾ ಅಚ್ಚರಿ ನೀಡಲು ಸಮರ್ಥವಾಗಿದೆ. ಹಾಲಿ ಚಾಂಪಿಯನ್ ಆಗಿರುವ ವಿದರ್ಭ ಮತ್ತೆ ಚಾಂಪಿಯನ್ ಆದರೆ ಪ್ರಥಮ ಬಾರಿಗೆ ರಣಜಿ ಟ್ರೋಫಿ ಚಾಂಪಿಯನ್ ತಂಡದ ಭಾಗವಾಗುವ ಅವಕಾಶ ಉಮೇಶ್ ಯಾದವ್ ಪಾಲಾಗಲಿದೆ. ಇನ್ನು, ಸೌರಾಷ್ಟ್ರ ಗೆದ್ದರೆ ಆ ಸಾಧನೆ ಪೂಜಾರ ಪಾಲಾಗಲಿದೆ. ಯಾರ ಕೈ ಮೇಲಾಗುತ್ತದೆ ಕಾದು ನೋಡಬೇಕಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

KL Rahul: ಹ್ಯಾಪೀ ಬರ್ತ್ ಡೇ ಕೆಎಲ್ ರಾಹುಲ್ ಎಂದ ಆರ್ ಸಿಬಿ: ವಿಶ್ ಮಾಡಕ್ಕಾಗುತ್ತೆ, ಟೀಂಗೆ ತಗೊಳ್ಳಕ್ಕೆ ಆಗಲ್ವಾ ಎನ್ನೋದಾ..

Viral video: ಎಂಥಾ ಕ್ಯಾರೆಕ್ಟರ್ ಗುರೂ.. ಅಭಿಮಾನಿಗಳ ಜೊತೆ ರೋಹಿತ್ ಶರ್ಮಾ ಫನ್

Rahul Dravid: ರಾಹುಲ್ ದ್ರಾವಿಡ್ ಮೇಲೆ ಸಂಜು ಸ್ಯಾಮ್ಸನ್ ಮುನಿಸು: ವಿಡಿಯೋ ವೈರಲ್

IPL 2025 RCB vs PBKS: ಯಾಕಾದ್ರೂ ಚಿನ್ನಸ್ವಾಮಿಯಲ್ಲಿ ಆರ್ ಸಿಬಿ ಮ್ಯಾಚ್ ಇರುತ್ತೋ

IPL 2025: ತವರಿನಲ್ಲಿ ಗೆದ್ದು ಬೀಗಿದ ಮುಂಬೈ ಇಂಡಿಯನ್ಸ್‌: ಸನ್‌ರೈಸರ್ಸ್‌ಗೆ ಮುಖಭಂಗ

ಮುಂದಿನ ಸುದ್ದಿ
Show comments