Publish Date: Sun, 01 Mar 2020 (17:33 IST)
Updated Date: Sun, 01 Mar 2020 (17:36 IST)
ಕೋಲ್ಕೊತ್ತಾ: ರಣಜಿ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಬಂಗಳಾ ಭರ್ಜರಿ ಮುನ್ನಡೆಯತ್ತ ಸಾಗಿದ್ದು ಕರ್ನಾಟಕ ತನ್ನ ತಪ್ಪಿಗೆ ತಾನೇ ಹಳಿದುಕೊಳ್ಳುವಂತಾಗಿದೆ.
ಮೊದಲ ದಿನ ಪಂದ್ಯವನ್ನು ತನ್ನ ಹಿಡಿತದಲ್ಲೇ ಇಟ್ಟುಕೊಂಡಿದ್ದ ಕರ್ನಾಟಕ ಬಂಗಳಾವನ್ನು ಮೊದಲ ಇನಿಂಗ್ಸ್ ನಲ್ಲಿ 312 ರನ್ ಗಳಿಗೆ ಆಲೌಟ್ ಮಾಡಿತ್ತು. ಆದರೆ ಕರ್ನಾಟಕ ಬ್ಯಾಟಿಂಗ್ ನಲ್ಲಿ ಸಂಪೂರ್ಣ ಎಡವಿದ್ದು ಕೇವಲ 122 ರನ್ ಗಳಿಗೆ ಮೊದಲ ಇನಿಂಗ್ಸ್ ಕೊನೆಗೊಳಿಸಿತು. ಇದೀಗ ಬಂಗಳಾ ದ್ವಿತೀಯ ಇನಿಂಗ್ಸ್ ನಲ್ಲಿ ಇಂದಿನ ದಿನದಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 72 ರನ್ ಗಳಿಸಿದೆ.
ಇದರೊಂದಿಗೆ 262 ರನ್ ಗಳ ಮುನ್ನಡೆ ಗಳಿಸಿದೆ. ಇನ್ನೂ ಎರಡನೇ ದಿನದಾಟ ಮುಕ್ತಾಯವಾಗಿದೆಯಷ್ಟೇ. ಹೀಗಾಗಿ ಕರ್ನಾಟಕ ದ್ವಿತೀಯ ಇನಿಂಗ್ಸ್ ನಲ್ಲಿ ಬೃಹತ್ ಮೊತ್ತ ಚೇಸ್ ಮಾಡಬೇಕಾಗುತ್ತದೆ. ಹೀಗಾಗಿ ಗೆಲುವು ಅಥವಾ ಡ್ರಾ ತೀರಾ ಕಷ್ಟವಾಗಲಿದೆ.