Select Your Language

Notifications

webdunia
webdunia
webdunia
webdunia

ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್: ಕರ್ನಾಟಕದ ಮೇಲೆ ಸಂಕಟದ ಮೋಡ

ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್: ಕರ್ನಾಟಕದ ಮೇಲೆ ಸಂಕಟದ ಮೋಡ
ಜಮ್ಮು ಕಾಶ್ಮೀರ , ಗುರುವಾರ, 20 ಫೆಬ್ರವರಿ 2020 (16:31 IST)
ಜಮ್ಮು ಕಾಶ್ಮೀರ: ಇಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜಮ್ಮು ವಿರುದ್ಧ ಕರ್ನಾಟಕ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದು, 2 ವಿಕೆಟ್ ಕಳೆದುಕೊಂಡು 14 ರನ್ ಗಳಿಸಿದೆ.


ಮಂದ ಬೆಳಕಿನಿಂದಾಗಿ ತಡವಾಗಿ ಆರಂಭವಾದ ಪಂದ್ಯ ಇಂದಿನ ದಿನಕ್ಕೆ ಕೇವಲ 6 ಓವರ್ ಗೇ ಮುಕ್ತಯವಾಗಿದೆ. ಮಂದ ಬೆಳಕಿನಿಂದಾಗಿ ದಿನದಾಟ ಬೇಗನೇ ಮುಕ್ತಾಯವಾದಾಗ ಕರ್ನಾಟಕ ತಂಡದ ಮೇಲೂ ಸಂಕಟದ ಛಾಯೆ ಆವರಿಸಿತ್ತು.

ಆರಂಭಿಕರಾದ ದೇವದತ್ತ ಪಡಿಕ್ಕಲ್ 2 ಮತ್ತು ರವಿಕಾಂತ್ ಸಮರ್ಥ್ 5 ರನ್ ಗಳಿಗೆ ವಿಕೆಟ್ ಒಪ್ಪಿಸಿ ಕರ್ನಾಟಕಕ್ಕೆ ಆರಂಭಿಕ ಆಘಾತ ನೀಡಿದ್ದಾರೆ. ಇದೀಗ ನಾಯಕ ಕರುಣ್ ನಾಯರ್ 4 ಮತ್ತು ಕೃಷ್ಣಮೂರ್ತಿ ಸಿದ್ಧಾರ್ಥ್ ಖಾತೆ ತೆರೆಯದೇ ಕ್ರೀಸ್ ನಲ್ಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಂದ ಬೆಳಕಿನಿಂದಾಗಿ ತಡವಾದ ಕರ್ನಾಟಕ-ಜಮ್ಮು ರಣಜಿ ಕ್ವಾರ್ಟರ್ ಫೈನಲ್