Publish Date: Wed, 28 Nov 2018 (09:08 IST)
Updated Date: Wed, 28 Nov 2018 (09:10 IST)
ಸಿಡ್ನಿ: ಟಿ20 ಸರಣಿಯಲ್ಲಿ ಟೀಂ ಇಂಡಿಯಾವನ್ನು ಕಾಡಿ ಸರಣಿ ಕಳೆದುಕೊಳ್ಳುವಂತೆ ಮಾಡಿದ ವರುಣ ಮತ್ತೆ ಟೆಸ್ಟ್ ಸರಣಿಗೆ ಮುನ್ನ ಇಂದಿನಿಂದ ಆರಂಭವಾಗಿರುವ ಅಭ್ಯಾಸ ಪಂದ್ಯಕ್ಕೂ ಅಡ್ಡಿ ಮಾಡಿದ್ದಾನೆ.
ಭಾರತ ಮತ್ತು ಆಸ್ಟ್ರೇಲಿಯಾ ಇಲೆವೆನ್ ನಡುವೆ ಇಂದಿನಿಂದ ಆರಂಭವಾಗಬೇಕಿದ್ದ ಅಭ್ಯಾಸ ಪಂದ್ಯ ಮಳೆಯ ಕಾರಣದಿಂದ ಸ್ಥಗಿತಗೊಂಡಿದೆ. ಇದುವರೆಗೆ ಟಾಸ್ ಕೂಡಾ ಹಾಕಲಾಗಿಲ್ಲ.
ಭಾರತೀಯ ಕಾಲಮಾನ ಪ್ರಕಾರ ಬೆಳಿಗ್ಗೆ 5 ಗಂಟೆಗೆ ಪಂದ್ಯ ಆರಂಭವಾಗಬೇಕಿತ್ತು. ಆದರೆ ಭಾರೀ ಮಳೆಯಿಂದಾಗಿ ಆಟ ಸಾಧ್ಯವಾಗುತ್ತಿಲ್ಲ. ಇದಕ್ಕೂ ಮೊದಲೇ ಹವಾಮಾನ ಇಲಾಖೆ ಇಲ್ಲಿ ಮಳೆಯಾಗುವ ಸೂಚನೆ ನೀಡಿತ್ತು. ಇದರಿಂದಾಗಿ ಟೆಸ್ಟ್ ಸರಣಿಗೂ ಮುನ್ನ ಭಾರತಕ್ಕೆ ಅಭ್ಯಾಸ ಸಿಗದಂತಾಗಿದೆ. ನಾಲ್ಕು ದಿನಗಳ ಅಭ್ಯಾಸ ಪಂದ್ಯ ಇದಾಗಿತ್ತು. ಇನ್ನು, ಮಳೆ ಬಿಟ್ಟರೂ ಭಾರತೀಯ ಆಟಗಾರರಿಗೆ ಪೂರ್ಣ ಪ್ರಮಾಣದ ಅಭ್ಯಾಸ ಸಿಗುವುದು ಅನುಮಾನ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.