Webdunia - Bharat's app for daily news and videos

Install App

RCB: ಆರ್ ಸಿಬಿ ತಂಡದ ಮೆರವಣಿಗೆ ಇರುತ್ತೆ ಎಂದುಕೊಂಡವರಿಗೆ ಗೃಹಸಚಿವರಿಂದ ಶಾಕ್

Krishnaveni K
ಬುಧವಾರ, 4 ಜೂನ್ 2025 (13:26 IST)
ಬೆಂಗಳೂರು: ಐಪಿಎಲ್ ಚಾಂಪಿಯನ್ ಆಗಿರುವ ಆರ್ ಸಿಬಿ ತಂಡ ಇಂದು ಸಂಜೆ ವಿಧಾನಸೌಧದಿಂದ ಚಿನ್ನಸ್ವಾಮಿ ಮೈದಾನದವರೆಗೆ ಮೆರವಣಿಗೆಯಿರುತ್ತದೆ ಎಂದು ಅಭಿಮಾನಿಗಳು ಕಾದು ನಿಂತಿದ್ದಾರೆ. ಆದರೆ ಗೃಹಸಚಿವ ಪರಮೇಶ್ವರ್ ಅವರಿಗೆ ಶಾಕ್ ನೀಡಿದ್ದಾರೆ.

ಐಪಿಎಲ್ ನಲ್ಲಿ 2025 ರಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸಿ ಇದೇ ಮೊದಲ ಬಾರಿಗೆ ಆರ್ ಸಿಬಿ ಕಪ್ ಗೆದ್ದಿದೆ. ಸಹಜವಾಗಿಯೇ ಅಭಿಮಾನಿಗಳು ತಮ್ಮ ನೆಚ್ಚಿನ ತಂಡವನ್ನು ಎದಿರುಗೊಳ್ಳಲು ಕಾದು ನಿಂತಿದ್ದಾರೆ. ಈಗಾಗಲೇ ಆರ್ ಸಿಬಿ ಇಂದು ಓಪನ್ ಮೆರವಣಿಗೆ ಇರುತ್ತದೆ ಎಂದು ಪ್ರಕಟಿಸಿತ್ತು.

ಆದರೆ ಇದೀಗ ಗೃಹಸಚಿವರು ಅಭಿಮಾನಿಗಳಿಗೆ ನಿರಾಸೆ ಮಾಡಿದ್ದಾರೆ. ಭದ್ರತಾ ದೃಷ್ಟಿಯಿಂದ ಓಪನ್ ಮೆರವಣಿಗೆ ಇರಲ್ಲ. ಬದಲಾಗಿ ವಿಧಾನಸೌಧದ ಮುಂಭಾಗ ಇಂದು ಸಿಎಂ ಸಿದ್ದರಾಮಯ್ಯ ಆರ್ ಸಿಬಿ ಆಟಗಾರರಿಗೆ ಸನ್ಮಾನ ಮಾಡಲಿದ್ದಾರೆ. ಎಲ್ಲಾ ಆಟಗಾರರು ಬಸ್ ನಲ್ಲಿ ಬರಲಿದ್ದಾರೆ. ಬಳಿಕ ಒಂದಿಬ್ಬರು ಆಟಗಾರರು ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಬಹುದು. ಇದಾದ ಬಳಿಕ ಎಲ್ಲಾ ಆಟಗಾರರೂ ಸ್ಟೇಡಿಯಂಗೆ ತೆರಳಲಿದ್ದಾರೆ. ಅಲ್ಲಿ ಅಭಿಮಾನಿಗಳಿಗಾಗಿ ಕೆಎಸ್ ಸಿಎ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ ಎಂದು ಗೃಹಸಚಿವರು ಹೇಳಿದ್ದಾರೆ. ಮೈದಾನಕ್ಕೆ ಹೋಗಿ ಆಟಗಾರರ ಸಂಭ್ರಮಾಚರಣೆ ನೋಡಬೇಕು ಎಂದರೆ ಟಿಕೆಟ್ ಕೊಡಬೇಕು. ಮೆರವಣಿಗೆ ಎಂದರೆ ಆಟಗಾರರ ಜೊತೆ ಯಾವುದೇ ಕಟ್ಟಪಾಡು ಇಲ್ಲದೇ ಸಂಭ್ರಮಿಸಬಹುದಿತ್ತು ಎಂದು ಅಭಿಮಾನಿಗಳು ಅಂದುಕೊಂಡಿದ್ದರು. ಆದರೆ ಅದೆಲ್ಲಾ ಈಗ ಸುಳ್ಳಾಗಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IPL 2025 Final: ಆರ್ ಸಿಬಿ ಜೊತೆಗೆ ಈ ಸಾಲೂ ಫೇಮಸ್... ವಿಶ್ವದಾದ್ಯಂತ ಈಗ ಕನ್ನಡದ್ದೇ ಹವಾ

Virat Kohli: ಬೆಂಗಳೂರಿನಲ್ಲಿ ಹೇಗಿರುತ್ತೋ ಕಾಯ್ತಿದ್ದೀನಿ.. ವಿರಾಟ್ ಕೊಹ್ಲಿ ವಿಡಿಯೋ ವೈರಲ್

IPL 2025 Final: RCB ಟೀಂ ಇಂದು ಬೆಂಗಳೂರಿನಲ್ಲಿ ಸೆಲೆಬ್ರೇಷನ್: ಇಂದು ಎಲ್ಲೆಲ್ಲಿ ಮೆರವಣಿಗೆ ಇಲ್ಲಿದೆ ವಿವರ

IPL 2025: ಅಣ್ಣ ಎಲ್ಲವ್ನೋ.. ಅಂಬಟಿ ರಾಯುಡುಗಾಗಿ ಆರ್ ಸಿಬಿ ಫ್ಯಾನ್ಸ್ ಸರ್ಚಿಂಗ್

RCB Champions: ವಿರಾಟ್ ಕೊಹ್ಲಿ ಎರಡು ಮಕ್ಕಳ ತಂದೆ ಎಂದರೆ ನಂಬಬಹುದೇ, ಇಲ್ಲಿದೆ ಫನ್ನಿ ವಿಡಿಯೋ

ಮುಂದಿನ ಸುದ್ದಿ
Show comments