Select Your Language

Notifications

webdunia
webdunia
webdunia
webdunia

ಶ್ರೀಲಂಕಾದಲ್ಲಿ ಟೀಂ ಇಂಡಿಯಾಗೆ ಸಿಗಲಿಲ್ಲ ಹಾರ ತುರಾಯಿ ಸ್ವಾಗತ

ಶ್ರೀಲಂಕಾದಲ್ಲಿ ಟೀಂ ಇಂಡಿಯಾಗೆ ಸಿಗಲಿಲ್ಲ ಹಾರ ತುರಾಯಿ ಸ್ವಾಗತ
ಕೊಲೊಂಬೋ , ಬುಧವಾರ, 30 ಜೂನ್ 2021 (11:06 IST)
ಕೊಲೊಂಬೋ: ಶ್ರೀಲಂಕಾ ವಿರುದ್ಧ ಸೀಮಿತ ಓವರ್ ಗಳ ಸರಣಿ ಆಡಲು ಬಂದಿಳಿದ ಶಿಖರ್ ಧವನ್ ನೇತೃತ್ವದ ಟೀಂ ಇಂಡಿಯಾಗೆ ಎಂದಿನಂತೆ ಅದ್ಧೂರಿ ಸ್ವಾಗತ ಸಿಕ್ಕಿಲ್ಲ.


ರಾಹುಲ್ ದ್ರಾವಿಡ್-ಶಿಖರ್ ಧವನ್ ನೇತೃತ್ವದ ತಂಡ ಕೊಲೊಂಬೋದ ತಾಜ್ ಸಮುದ್ರ ಹೋಟೆಲ್ ನಲ್ಲಿ ಉಳಿದುಕೊಂಡಿದೆ. ಇಲ್ಲಿ ಮೂರು ದಿನಗಳ ಕ್ವಾರಂಟೈನ್ ಗೊಳಗಾಗಲಿದೆ.

ಸಾಮಾನ್ಯವಾಗಿ ಲಂಕಾದಲ್ಲಿ ಟೀಂ ಇಂಡಿಯಾಗೆ ಹಾರ ಹಾಕಿ ಸಾಂಪ್ರದಾಯಿಕ ಸ್ವಾಗತ ಸಿಗುತ್ತದೆ. ಆದರೆ ಈ ಬಾರಿ ಕೊರೋನಾ ಕಾರಣದಿಂದಾಗಿ ಯಾವುದೇ ಅದ್ಧೂರಿ ಸ್ವಾಗತವಿರಲಿಲ್ಲ. ಕೇವಲ ಭದ್ರತಾ ಸಿಬ್ಬಂದಿಗಳು, ಮ್ಯಾನೇಜರ್ ಬಿಟ್ಟರೆ ಬೇರೆ ಯಾರೂ ಕ್ರಿಕೆಟಿಗರ ಹತ್ತಿರ ಸುಳಿಯಲೂ ಅವಕಾಶವಿಲ್ಲ. ಹೀಗಿರುವಾಗ ಅದ್ಧೂರಿ ಸ್ವಾಗತ ಕನಸಿನ ಮಾತು.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ ಗೆ ಹೊಸ ತಂಡ ಸೇರ್ಪಡೆ ಸದ್ಯಕ್ಕೆ ಅನುಮಾನ