Select Your Language

Notifications

webdunia
webdunia
webdunia
webdunia

ಗೆದ್ದ ಪಂದ್ಯವನ್ನು ಕೇರಳದ ಪ್ರವಾಹ ಸಂತ್ರಸ್ತರಿಗೆ ಅರ್ಪಿಸಿದ ಕೊಹ್ಲಿ ಬಳಗ..

ಗೆದ್ದ ಪಂದ್ಯವನ್ನು ಕೇರಳದ ಪ್ರವಾಹ ಸಂತ್ರಸ್ತರಿಗೆ ಅರ್ಪಿಸಿದ ಕೊಹ್ಲಿ ಬಳಗ..
ಬೆಂಗಳೂರು , ಬುಧವಾರ, 22 ಆಗಸ್ಟ್ 2018 (17:04 IST)
ಇಂಗ್ಲೆಂಡ್ ವಿರುದ್ಧ ಈಗ ನಡೆಯುತ್ತಿರುವ ಟೆಸ್ಟ್ ಸರಣಿಯ ಮೂರನೇ ಪಂದ್ಯವನ್ನು ಟ್ರೆಂಟ್ ಬ್ರಿಡ್ಜ್‌ನಲ್ಲಿ ಭಾರತ ಇಂದು ಗೆದ್ದು ಸರಣಿಯಲ್ಲಿ 2-1 ರ ಅಂತರದಲ್ಲಿದ್ದು ಗೆಲುವಿನ ಆಸೆಯನ್ನು ಉಳಿಸಿಕೊಂಡಿದೆ. ಪಂದ್ಯ ಶ್ರೇಷ್ಟರಾಗಿ ವಿರಾಟ್ ಕೊಹ್ಲಿ ಹೊರಹೊಮ್ಮಿದ್ದು ಕೇರಳದ ಪ್ರವಾಹದ ಕುರಿತ ಇಷ್ಟುದಿನದ ಮೌನವನ್ನು ಮುರಿದಿದ್ದಾರೆ.
'ತಂಡದ ಎಲ್ಲಾ ಸದಸ್ಯರ ವತಿಯಿಂದ ಈ ಪಂದ್ಯದ ಜಯವನ್ನು ಕೇರಳದ ಪ್ರವಾಹದ ಸಂತ್ರಸ್ತರಿಗೆ ಅರ್ಪಿಸುತ್ತೇವೆ' ಎಂದು ಕೊಹ್ಲಿ ಹೇಳಿದ್ದಾರೆ. ಹಾಗೆಯೇ ಈ ಪಂದ್ಯದ ಗೆಲುವಿನ ಮೊತ್ತವನ್ನೂ ಸಹ ಅವರಿಗೆ ನೀಡುವುದಾಗಿ ಹೇಳಿದ್ದಾರೆ. ವಿರಾಟ್ ಈ ವಿಷಯವನ್ನು ಕುರಿತಂತೆ ಮಾತೇ ಆಡದೆ ಮೌನವಾಗಿದ್ದಿದ್ದು ಬೇಸರವಾಗಿದ್ದ ಅಭಿಮಾನಿಗಳಿಗೆ ಇದರಿಂದ ಸಂತೋಷವಾಗಿದೆ.
 
ಇಂಗ್ಲೆಂಡ್‌ನಲ್ಲಿ ಪ್ರಸ್ತುತ ನಡೆಯುತ್ತಿರುವ ಈ ಟೆಸ್ಟ್ ಸರಣಿಯಲ್ಲಿ 2-1 ರ ಅಂತರದಲ್ಲಿದ್ದು ಗೆಲುವಿನ ಆಸೆಯನ್ನು ಉಳಿಸಿಕೊಂಡಿರುವ ಭಾರತ ಮುಂದಿನ 2 ಪಂದ್ಯಗಳಲ್ಲಿ ಉತ್ತಮ ಪ್ರದರ್ಶನವನ್ನು ನೀಡಿ ಸರಣಿಯನ್ನು ತನ್ನದಾಗಿಸಿಕೊಳ್ಳಲಿ ಎನ್ನುವುದು ಅಭಿಮಾನಿಗಳ ಆಶಯವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸೌರವ್ ಗಂಗೂಲಿಯನ್ನು ಹಿಂದಿಕ್ಕಿದ ವಿರಾಟ್..