Select Your Language

Notifications

webdunia
webdunia
webdunia
webdunia

ತುಳುನಾಡಿನ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡ ಸುನಿಲ್ ಶೆಟ್ಟಿ, ಸಾಥ್ ನೀಡಿದ ಕೆಎಲ್ ರಾಹುಲ್

KL Rahul-Suniel Shetty

Krishnaveni K

ಮುಂಬೈ , ಶನಿವಾರ, 25 ಮೇ 2024 (15:14 IST)
ಮುಂಬೈ: ಬಾಲಿವುಡ್ ನಟ ಸುನಿಲ್ ಶೆಟ್ಟಿ ತಮ್ಮ ತವರು ತುಳುನಾಡಿನ ಬಗ್ಗೆ ಹೆಮ್ಮೆಯಿಂದ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದು, ವಿಶೇಷವೆಂದರೆ ಅದನ್ನು ಅಳಿಯ ಕೆಎಲ್ ರಾಹುಲ್ ಕೂಡಾ ಶೇರ್ ಮಾಡಿಕೊಂಡು ಅನುಮೋದಿಸಿದ್ದಾರೆ.

ಸುನಿಲ್ ಶೆಟ್ಟಿ ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ತುಳುನಾಡು ಎಷ್ಟು ಚಂದ ಎಂದು ಬರೆದುಕೊಂಡಿದ್ದಾರೆ. ‘ಎಷ್ಟು ಚಂದ ನನ್ನ ತುಳುನಾಡು. ನಾನು ಹೋಟೆಲ್ ಗೆ ಹೋಗಿ ವೈಟರ್ ನನ್ನು ದಣಿ ಎನ್ನುತ್ತೇನೆ, ಆತನೂ ನನ್ನನ್ನು ದಣಿ ಎನ್ನುತ್ತಾನೆ. ಹಾಗಂದ ಮಾತ್ರಕ್ಕೆ ನಾವಿಬ್ಬರೂ ಅಷ್ಟೊಂದು ಶ್ರೀಮಂತರು ಎಂದರ್ಥವಲ್ಲ. ನಾನು ಅಂಗಡಿಗೆ ಹೋಗಿ ಅಣ್ಣ ಎನ್ನುತ್ತೇನೆ, ಆತನೂ ಹೇಳಿ ಅಣ್ಣ ಎನ್ನುತ್ತಾನೆ. ಹಾಗಂದ ಮಾತ್ರಕ್ಕೆ ನಾವು ಸಹೋದರರಲ್ಲ. ನಾನು ಮೀನು ಮಾರುಕಟ್ಟೆಗೆ ಹೋಗಿ ಅಮ್ಮ ಎನ್ನುತ್ತೇನೆ, ಆಕೆಯೂ ಮಗ ಎನ್ನುತ್ತಾಳೆ. ಹಾಗಂದ ಮಾತ್ರಕ್ಕೆ ಆಕೆ ನನ್ನ ತಾಯಿಯಲ್ಲ. ನಮ್ಮ ತುಳುನಾಡ ಸಂಸ್ಕೃತಿ ಇದೆಲ್ಲದಕ್ಕಿಂತ ಭಿನ್ನ’ ಎಂದು ಸುನಿಲ್ ಶೆಟ್ಟಿ ಅಭಿಮಾನ ಮೆರೆದಿದ್ದಾರೆ.

ಇದನ್ನು ಅಳಿಯ, ಕ್ರಿಕೆಟಿಗ ಕೆಎಲ್ ರಾಹುಲ್ ಶೇರ್ ಮಾಡಿಕೊಂಡಿದ್ದಾರೆ. ರಾಹುಲ್ ಕೂಡಾ ಮೂಲತಃ ಮಂಗಳೂರಿನವರು. ಬಿಡುವು ಸಿಕ್ಕಾಗಲೆಲ್ಲಾ ಈಗಲೂ ಮಂಗಳೂರಿಗೆ ಭೇಟಿ ನೀಡುತ್ತಾರೆ. ತುಳು ಭಾಷೆಯನ್ನು ಸ್ಪಷ್ಟವಾಗಿ ಮಾತನಾಡುತ್ತಾರೆ. ಹೀಗಾಗಿ ಮಾವನ ತುಳುನಾಡಿನ ವೈಭವ ಮರೆಯುವ ಸಂದೇಶವನ್ನು ತಾವೂ ಶೇರ್ ಮಾಡಿಕೊಂಡು ಅಭಿಮಾನ ಮೆರೆದಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ವಿಚ್ಛೇದನದ ಬಳಿಕ ಹಾರ್ದಿಕ್ ಪಾಂಡ್ಯರ ಮುಕ್ಕಾಲು ಭಾಗ ಆಸ್ತಿ ನತಾಶಾಗೆ