ಗುರು ದ್ರಾವಿಡ್ ಕಾರ್ಯವೈಖರಿ ವಿವರಿಸಿದ ಕೆಎಲ್ ರಾಹುಲ್

Webdunia
ಮಂಗಳವಾರ, 16 ನವೆಂಬರ್ 2021 (10:06 IST)
ಮುಂಬೈ: ಟೀಂ ಇಂಡಿಯಾ ನೂತನ ಕೋಚ್ ಆಗಿ ಆಯ್ಕೆಯಾಗಿರುವ ರಾಹುಲ್ ದ್ರಾವಿಡ್ ಬಗ್ಗೆ ಕೆಎಲ್ ರಾಹುಲ್ ಮಾತನಾಡಿದ್ದಾರೆ.

ನ್ಯೂಜಿಲೆಂಡ್ ವಿರುದ್ಧ ನಾಳೆಯಿಂದ ಆರಂಭವಾಗಲಿರುವ ಟಿ20 ಸರಣಿಗೆ ಮುನ್ನ ರಾಹುಲ್ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ಈ ವೇಳೆ ಕೂಲ್ ಆಗಿರುವ ನಾಯಕ ರೋಹಿತ್ ಶರ್ಮಾ ಮತ್ತು ರಾಹುಲ್ ದ್ರಾವಿಡ್ ಜೊತೆ ಕೆಲಸ ಮಾಡುವುದೇ ಖುಷಿ ಎಂದಿದ್ದಾರೆ.

ದ್ರಾವಿಡ್ ಗರಡಿಯಲ್ಲಿ ಭಾರತ ಎ ತಂಡದಲ್ಲಿ ಆಡಿ ಅನುಭವವಿರುವ ಕೆಎಲ್ ರಾಹುಲ್ ಅವರನ್ನು ತಮ್ಮ ಗುರು ಎಂದೇ ಪರಿಗಣಿಸುತ್ತಾರೆ. ಹೀಗಾಗಿ ಈಗ ಮತ್ತೆ ದ್ರಾವಿಡ್ ಕೋಚ್‍ ಆಗಿ ಅವರ ಜೊತೆಗೆ ಕೆಲಸ ಮಾಡುವುದು ಅದೃಷ್ಟ ಎಂದಿದ್ದಾರೆ.

‘ದ್ರಾವಿಡ್ ಡ್ರೆಸ್ಸಿಂಗ್ ರೂಂ ವಾತಾವರಣವನ್ನು ಕೂಲ್ ಆಗಿಡುತ್ತಾರೆ. ಎಲ್ಲಾ ಆಟಗಾರರ ಆಟವನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ. ಅವರು ನಮಗೆ ಕರ್ನಾಟಕ ತಂಡದಲ್ಲಿದ್ದಾಗಲೇ ಸಾಕಷ್ಟು ಸಹಾಯ ಮಾಡಿದ್ದರು. ಯಾವಾಗಲೂ ತಂಡದ ಬಗ್ಗೆಯೇ ಯೋಚಿಸುತ್ತಾರೆ. ಅವರಿಂದ ಸಾಕಷ್ಟು ಕಲಿಯುವ ಅವಕಾಶವಿದೆ’ ಎಂದು ಹೊಗಳಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಮದುವೆ ಬೆನ್ನಲ್ಲೇ ಐಪಿಎಲ್‌ನಲ್ಲಿ ಹೊಸ ಇನಿಂಗ್ಸ್‌ಗೆ ಮುಂದಾದ ತೆಂಡೂಲ್ಕರ್‌ ಪುತ್ರ: ಪಂತ್‌ ಕೈಯಲ್ಲಿ ಅರ್ಜುನ್‌ ಭವಿಷ್ಯ

ಟಿ20 ವಿಶ್ವಕಪ್‌ ತಂಡದಿಂದ ಹೊರಬಿದ್ದಿದ್ದ ಶುಭಮನ್‌ ಗಿಲ್‌, ಶ್ರೇಯಸ್‌ಗೆ ಇಂದು ಕಠಿಣ ಅಗ್ನಿಪರೀಕ್ಷೆ

Video: ಚಿನ್ನಸ್ವಾಮಿಯಲ್ಲಿ ಪಂದ್ಯದ ವೇಳೆ 50 ಮೊಬೈಲ್‌ ಮಿಸ್ಸಿಂಗ್‌: ಫೋನ್‌ ಕಳೆದುಕೊಂಡ ಮಹಿಳೆಯಿಂದ ಎಚ್ಚರಿಕೆ

ಕೆಕೆಆರ್ ಅಭಿಮಾನಿಗೆ ಮುಂಬೈ ಫ್ಯಾನ್‌ನಿಂದ ಪ್ರೇಮ ನಿವೇದನೆ: ಮುಂದೇನಾಯ್ತು ಗೊತ್ತಾ, ಇಲ್ಲಿದೆ Video

ಟೀಂ ಮೀಟಿಂಗ್ ನಲ್ಲಿ ಪಾಲ್ಗೊಳ್ಳಲ್ಲ, ಆರಂಭಿಕ ಪಂದ್ಯಗಳನ್ನು ಆಡಲ್ಲ: ಧೋನಿ ಕತೆಯೇನು

ಮುಂದಿನ ಸುದ್ದಿ
Show comments