Select Your Language

Notifications

webdunia
webdunia
webdunia
webdunia

ಭಾರತ-ಲಂಕಾ ಏಕದಿನ: ನಿಧಾನವೇ ಪ್ರಧಾನವೆಂದ ಕೆಎಲ್ ರಾಹುಲ್ ಗೆ ಬಹುಪರಾಕ್!

ಭಾರತ-ಲಂಕಾ ಏಕದಿನ: ನಿಧಾನವೇ ಪ್ರಧಾನವೆಂದ ಕೆಎಲ್ ರಾಹುಲ್ ಗೆ ಬಹುಪರಾಕ್!
ಕೋಲ್ಕೊತ್ತಾ , ಶುಕ್ರವಾರ, 13 ಜನವರಿ 2023 (08:40 IST)
ಕೋಲ್ಕೊತ್ತಾ: ಭಾರತ ಮತ್ತು ಶ್ರೀಲಂಕಾ ನಡುವಿನ ದ್ವಿತೀಯ ಏಕದಿನ ಪಂದ್ಯವನ್ನು 4 ವಿಕೆಟ್ ಗಳಿಂದ ಗೆದ್ದ ಟೀಂ ಇಂಡಿಯಾ ಸರಣಿ ಕೈವಶಮಾಡಿಕೊಂಡಿದೆ.

ಲಂಕಾ ನೀಡಿದ್ದ 216 ರನ್ ಗಳ ಗೆಲುವಿನ ಗುರಿ ಬೆನ್ನತ್ತಿದ ಟೀಂ ಇಂಡಿಯಾ ಗೆದ್ದಿದ್ದು ಕೆಎಲ್ ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯ ಅವರ ಜವಾಬ್ಧಾರಿಯುತ ಆಟದಿಂದ. ಕೊಹ್ಲಿ, ರೋಹಿತ್, ಶುಬ್ನಂ ಗಿಲ್ ಬೇಗನೇ ಔಟಾದಾಗ ಭಾರತ ಸಂಕಷ್ಟದಲ್ಲಿತ್ತು.

ಈ ವೇಳೆ ಭಾರತಕ್ಕೆ ಜೊತೆಯಾಟವೊಂದು ಬೇಕಿತ್ತು. ಈ ವೇಳೆ ಜೊತೆಯಾಗಿದ್ದ ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ. ರಾಹುಲ್ 103 ಎಸೆತ ಎದುರಿಸಿ 64 ರನ್ ಗಳಿಸಿದರು. ನಿಧಾನಗತಿಯ ಇನಿಂಗ್ಸ್ ಗೆ ಇಷ್ಟು ದಿನ ಟೀಕೆಗೊಳಗಾಗುತ್ತಿದ್ದ ರಾಹುಲ್ ಇಂದು ಹೊಗಳಿಸಿಕೊಂಡರು. ಪಾಂಡ್ಯ ಕೂಡಾ ತಮ್ಮ ನ್ಯಾಚುರಲ್ ಗೇಮ್ ಗೆ ವಿರುದ್ಧವಾಗಿ 53 ಎಸೆತ ಎದುರಿಸಿ 36 ರನ್ ಗಳಿಸಿದರು. ಅಂತಿಮವಾಗಿ 43.2 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 219 ರನ್ ಗಳಿಸಿ ಗೆಲುವಿನ ನಗೆ ಬೀರಿತು. 

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ಲಂಕಾ ಏಕದಿನ: ಟೀಂ ಇಂಡಿಯಾ ದಾಳಿಗೆ ಕುಸಿದ ಲಂಕಾ