Webdunia - Bharat's app for daily news and videos

Install App

ಜಾರ್ಖಂಡ್ ಪರ ಕೊನೆಯ ರಣಜಿ ಪಂದ್ಯ ಆಡಲು ಇಶಾನ್ ಕಿಶನ್ ಗೆ ಸೂಚನೆ

Krishnaveni K
ಬುಧವಾರ, 14 ಫೆಬ್ರವರಿ 2024 (09:29 IST)
ಮುಂಬೈ: ರಾಷ್ಟ್ರೀಯ ತಂಡಕ್ಕೆ ಮರಳಲು ವಿಕೆಟ್ ಕೀಪರ್ ಬ್ಯಾಟಿಗ ಇಶಾನ್ ಕಿಶನ್ ಗೆ ಬಿಸಿಸಿಐ ಕೊನೆಯ ಅವಕಾಶ ನೀಡಿದೆ. ಜಾರ್ಖಂಡ್ ಪರ ಕೊನೆಯ ರಣಜಿ ಪಂದ್ಯವಾಡಲು ಸೂಚಿಸಿದೆ.

ಇತ್ತೀಚೆಗಷ್ಟೇ ಕೋಚ್ ದ್ರಾವಿಡ್ ಟೀಂ ಇಂಡಿಯಾಕ್ಕೆ ಮರಳಲು ಇಶಾನ್ ಸ್ವಲ್ಪ ಕ್ರಿಕೆಟ್ ಆಡಲೇಬೇಕು ಎಂದಿದ್ದರು. ಕೋಚ್ ಸಲಹೆಯನ್ನೂ ಪರಿಗಣಿಸದೇ ಇಶಾನ್ ರಣಜಿಯಲ್ಲಿ ಆಡುವುದನ್ನು ತಪ್ಪಿಸಿಕೊಂಡಿದ್ದರು. ಆದರೆ ಇದೀಗ ಸ್ವತಃ ಬಿಸಿಸಿಐ ಇಶಾನ್ ಗೆ ದೇಶೀಯ ಕ್ರಿಕೆಟ್ ಆಡಲು ಕಟ್ಟುನಿಟ್ಟಿನ ಆದೇಶ ನೀಡಿದೆ ಎನ್ನಲಾಗಿದೆ.

ಈ ವಾರಂತ್ಯಕ್ಕೆ ರಾಜಸ್ಥಾನ್ ಮತ್ತು ಜಾರ್ಖಂಡ್ ನಡುವೆ ರಣಜಿ ಟ್ರೋಫಿ ಕೊನೆಯ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ತವರು ಜಾರ್ಖಂಡ್ ಪರ ಆಡುವಂತೆ ಇಶಾನ್ ಗೆ ಸೂಚನೆ ನೀಡಲಾಗಿದೆ. ಕಳೆದ ನವಂಬರ್ ನಿಂದ ಇಶಾನ್ ಸ್ಪರ್ಧಾತ್ಮಕ ಕ್ರಿಕೆಟ್ ಆಡಿಲ್ಲ.

ರಾಜ್ ಕೋಟ್ ಗೆ ತೆರಳುವ ಮೊದಲು ಕೋಚ್ ದ್ರಾವಿಡ್ ಗೆ ಮತ್ತೆ ಇಶಾನ್ ಕುರಿತು ಪ್ರಶ್ನೆ ಎದುರಾಗಿತ್ತು. ಇದಕ್ಕೆ ಮತ್ತೆ ದ್ರಾವಿಡ್ ಎರಡನೇ ಬಾರಿಗೆ ಇಶಾನ್ ಮೊದಲು ಕ್ರಿಕೆಟ್ ಆಡಬೇಕು. ದೇಶೀಯ ಕ್ರಿಕೆಟ್ ಅಂತಲ್ಲ, ಕ್ರಿಕೆಟ್ ಆಡಿದರೂ ಸಾಕು. ಆದರೆ ನಾವು ಅವರನ್ನು ಒತ್ತಾಯಿಸಲ್ಲ. ಆಯ್ಕೆ ಅವರದ್ದು ಎಂದಿದ್ದರು. ಇದರ ಬೆನ್ನಲ್ಲೇ ಬಿಸಿಸಿಐ ಇಶಾನ್ ಗೆ ರಣಜಿ ಆಡಲು ಸೂಚಿಸಿದೆ. ಈಗಲಾದರೂ ಇಶಾನ್ ಸೂಚನೆ ಪಾಲಿಸುತ್ತಾರಾ ಎಂದು ಕಾದು ನೋಡಬೇಕಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಎಬಿಡಿ ವಿಲಿಯರ್ಸ್ ಗೆ ಒಂದೇ ತಿಂಗಳಲ್ಲಿ ಡಬಲ್ ಧಮಾಕ

ICC World Test Championship 2025: ಕೊನೆಗೂ ಚಾಂಪಿಯನ್ ಪಟ್ಟ ಅಲಂಕರಿಸಿದ ದಕ್ಷಿಣ ಆಫ್ರಿಕಾ

ಮುಂಬೈ ಇಂಡಿಯನ್ಸ್ ತಂಡದಿಂದ ಹೊರ ಇಡುತ್ತಿದ್ದ ಹಾಗೇ ಸಹೋದರಿ ಜತೆ ಫಾರಿನ್‌ಗೆ ಹೋದ ಅರ್ಜುನ್ ತೆಂಡೂಲ್ಕರ್‌

WTC Final: ಚೋಕರ್ಸ್‌ ಹಣೆಪಟ್ಟಿ ಕಳಚುವತ್ತ ದಕ್ಷಿಣ ಆಫ್ರಿಕಾ: ಹಿಡಿತ ಸಾಧಿಸಿದ ಹರಿಣ ಪಡೆ

ವಿರಾಟ್ ಕೊಹ್ಲಿ 7 ವರ್ಷದ ಹಳೆಯ ಟ್ವೀಟ್ ವೈರಲ್: ಅಂತಹದ್ದೇನಿದೆ ಅದರಲ್ಲಿ

ಮುಂದಿನ ಸುದ್ದಿ
Show comments