Select Your Language

Notifications

webdunia
webdunia
webdunia
webdunia

IPL 2025: ಆರ್ ಸಿಬಿ ಬಗ್ಗೆ ಹಿಂಗೆಲ್ಲಾ ಹೇಳಲು ನಿಮಗೆಷ್ಟು ಧೈರ್ಯ: ಸಿಡಿದೆದ್ದ ಎಬಿಡಿ ವಿಲಿಯರ್ಸ್

ABD Villiers

Krishnaveni K

ಮುಂಬೈ , ಗುರುವಾರ, 29 ಮೇ 2025 (13:48 IST)
ಮುಂಬೈ: ಐಪಿಎಲ್ ನಲ್ಲಿ ಆರ್ ಸಿಬಿ ಪರ ಆಡಿ ಕನ್ನಡಿಗರ ದತ್ತು ಪುತ್ರನೇ ಆಗಿರುವ ಎಬಿಡಿ ವಿಲಿಯರ್ಸ್ ಈಗ ತಮ್ಮ ತಂಡದ ಬಗ್ಗೆ ಇಲ್ಲದ ಕಾಮೆಂಟ್ ಮಾಡುತ್ತಿರುವ ಕಾಮೆಂಟೇಟರ್ ಗಳ ವಿರುದ್ಧ ಸಿಡಿದೆದಿದ್ದಾರೆ.

ಐಪಿಎಲ್ ನಲ್ಲಿ ಕಾಮೆಂಟರಿ ಮಾಡುವ ಬಹುತೇಕರು ಒಂದಲ್ಲಾ ಒಂದು ತಂಡವನ್ನು ಬೆಂಬಲಿಸುತ್ತಾರೆ. ಅವರ ಕಾಮೆಂಟರಿಗಳು ಪಕ್ಷಪಾತದಿಂದ ಕೂಡಿರುತ್ತದೆ ಎಂದು ಇತ್ತೀಚೆಗೆ ಅನೇಕ ಅಭಿಮಾನಿಗಳೇ ಹೇಳುತ್ತಾರೆ. ಇದೀಗ ಎಬಿಡಿ  ವಿಲಿಯರ್ಸ್ ಕೂಡಾ ಇದೇ ಕಾರಣಕ್ಕೆ ಸಿಡಿದೆದ್ದಿದ್ದಾರೆ.

ಮೊನ್ನೆಯಷ್ಟೇ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಆರ್ ಸಿಬಿ ನಡುವೆ ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ ಕಾಮೆಂಟೇಟರ್ ಗಳು ಆರ್ ಸಿಬಿ ಬೌಲರ್ ಗಳನ್ನು ಯೂಸ್ ಲೆಸ್ ಎಂದಿದ್ದು ಎಬಿಡಿ ಸಿಟ್ಟಿಗೆ ಕಾರಣವಾಗಿದೆ. ಲಕ್ನೋ ನಾಯಕ ರಿಷಭ್ ಪಂತ್ ಈ ಪಂದ್ಯದಲ್ಲಿ ಶತಕ ಸಿಡಿಸಿದ್ದರು.

ಇದೇ ಕಾರಣಕ್ಕೆ ಆರ್ ಸಿಬಿ ಬೌಲರ್ ಗಳ ಬಗ್ಗೆ ಹಗುರವಾದ ಮಾತನಾಡಿರುವ ಕಾಮೆಂಟೇಟರ್ ಗಳ ವಿರುದ್ಧ ಎಬಿಡಿ ವಾಗ್ದಾಳಿ ನಡೆಸಿದ್ದಾರೆ. ಆರ್ ಸಿಬಿ ಬಗ್ಗೆ ಕಾಮೆಂಟೇಟರ್ ಗಳು ನೆಗೆಟಿವ್ ಕಾಮೆಂಟ್ ಗಳನ್ನೇ ಮಾಡುತ್ತಾರೆ. ಇದು ನನಗೆ ತುಂಬಾ ಸಿಟ್ಟು ತರಿಸುತ್ತದೆ. ಅಲ್ಲಿದ್ದವರೆಲ್ಲರೂ ಬುದ್ಧಿವಂತರೇ ಆದರೆ ಆರ್ ಸಿಬಿ ಬೌಲಿಂಗ್ ಬಗ್ಗೆ ಅದೂ ಬ್ಯಾಟಿಂಗ್ ಟ್ರ್ಯಾಕ್ ನಲ್ಲಿ ತೀರಾ ನೆಗೆಟಿವ್ ಆಗಿ ಕಾಮೆಂಟ್ ಮಾಡುವುದು ಎಷ್ಟು ಸರಿ ಎಂದು ಎಬಿಡಿ ಪ್ರಶ್ನಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

RCB vs PBKS IPL 2025: ಪ್ಲೇ ಆಫ್ ಪಂದ್ಯಕ್ಕೆ ಮಳೆ ಬಂದರೆ ಆರ್ ಸಿಬಿಗೆ ಲಾಭನಾ, ನಷ್ಟನಾ ಇಲ್ಲಿ ನೋಡಿ