Publish Date: Tue, 10 Jan 2023 (08:20 IST)
Updated Date: Tue, 10 Jan 2023 (08:40 IST)
ಗುವಾಹಟಿ: ಭಾರತ ಮತ್ತು ಶ್ರೀಲಂಕಾ ನಡುವೆ ಟಿ20 ಸರಣಿ ಮುಕ್ತಾಯವಾಗಿದ್ದು, ಇದೀಗ ಏಕದಿನ ಕದನ ಶುರುವಾಗಲಿದೆ.
ಇಂದು ಮೊದಲ ಪಂದ್ಯದ ಗುವಾಹಟಿಯಲ್ಲಿ ನಡೆಯಲಿದೆ. ಟೀಂ ಇಂಡಿಯಾಕ್ಕೆ ನಾಯಕ ರೋಹಿತ್ ಶರ್ಮಾ ಕಮ್ ಬ್ಯಾಕ್ ಮಾಡುತ್ತಿದ್ದು, ಅವರ ಜೊತೆಗೆ ಹಿರಿಯ ಆಟಗಾರರಾದ ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ ತಂಡದಲ್ಲಿರಲಿದ್ದಾರೆ.
ಟಿ20 ಸರಣಿಯಲ್ಲಿ ಕಿರಿಯ ಆಟಗಾರರ ದರ್ಬಾರ್ ಆಗಿತ್ತು. ಇದೀಗ ಫಾರ್ಮ್ ಕೊರತೆ ಅನುಭವಿಸುತ್ತಿರುವ ಹಿರಿಯ ಆಟಗಾರರಿಗೆ ಕಮ್ ಬ್ಯಾಕ್ ಮಾಡಲು ವೇದಿಕೆ ಸಿಗಲಿದೆ. ರೋಹಿತ್ ಶರ್ಮಾಗೆ ಕಳೆದ ವರ್ಷ ದುಸ್ವಪ್ನವಾಗಿತ್ತು. ಕೊಹ್ಲಿ ಕಳೆದ ಬಾಂಗ್ಲಾದೇಶ ಸರಣಿಯಲ್ಲಿ ವಿಫಲರಾಗಿದ್ದರು. ಇಂದಿನ ಈ ಪಂದ್ಯ ಮಧ್ಯಾಹ್ನ 1.30 ಕ್ಕೆ ಆರಂಭವಾಗಲಿದೆ.