Select Your Language

Notifications

webdunia
webdunia
webdunia
webdunia

ಭಾರತ-ಪಾಕಿಸ್ತಾನ ಕ್ರಿಕೆಟ್ ಪ್ರೇಮಿಗಳಿಗೊಂದು ಶುಭಸುದ್ದಿ?!

ಭಾರತ-ಪಾಕಿಸ್ತಾನ ಕ್ರಿಕೆಟ್ ಪ್ರೇಮಿಗಳಿಗೊಂದು ಶುಭಸುದ್ದಿ?!
NewDelhi , ಬುಧವಾರ, 29 ಮಾರ್ಚ್ 2017 (12:32 IST)
ನವದೆಹಲಿ: ಸಾಂಪ್ರದಾಯಿಕ ಬದ್ಧ ವೈರಿಗಳ ನಡುವೆ ಸಂಬಂಧ ಹಳಸಿದ ಹಿನ್ನಲೆಯಲ್ಲಿ ಭಾರತ-ಪಾಕಿಸ್ತಾನ ನಡುವೆ ಕ್ರಿಕೆಟ್ ಸರಣಿ ನಡೆಯದೇ ತುಂಬಾ ದಿನಗಳಾಗಿತ್ತು. ಈ ಜಿದ್ದಾ ಜಿದ್ದಿನ ಹೋರಾಟ ನಡೆಸಲು ಬಯಸುವವರ ಕನಸು ಸದ್ಯದಲ್ಲೇ ನನಸಾಗಲಿದೆಯೇ?

 

ಹಾಗೊಂದು ಅವಕಾಶವಿದೆ.  ಬಿಸಿಸಿಯ ತಟಸ್ಥ ಸ್ಥಳದಲ್ಲಿ ಭಾರತ-ಪಾಕಿಸ್ತಾನ ನಡುವೆ ಕ್ರಿಕೆಟ್ ಸರಣಿ ನಡೆಸಲು ಒಪ್ಪಿಗೆ ಕೊಡುವಂತೆ ಕೇಂದ್ರ ಗೃಹ ಸಚಿವಾಲಯಕ್ಕೆ ಮನವಿ ಮಾಡಿಕೊಂಡಿದೆ. ಇತ್ತೀಚಿಗೆ ಕ್ರಿಕೆಟ್ ಸರಣಿ ನಡೆಯದೇ ತಮಗೆ ನಷ್ಟವಾಗಿದೆ. ಹೀಗಾಗಿ ಬಿಸಿಸಿಐ ವಿರುದ್ಧ ಕಾನೂನು ಸಮರ ಮಾಡುವುದಾಗಿ ಪಾಕ್ ಕ್ರಿಕೆಟ್ ಮಂಡಳಿ ಬೆದರಿಕೆ ಹಾಕಿತ್ತು.

 
ಬಹುಶಃ ಇದೇ ಕಾರಣಕ್ಕೆ ಬಿಸಿಸಿಐ ಈಗ ಕೇಂದ್ರ ಸರ್ಕಾರದ ಒಪ್ಪಿಗೆ ಪಡೆಯಲು ಮುಂದಾಗಿದೆ.  ದುಬೈನಲ್ಲಿ ಈ ಸರಣಿ ನಡೆಸಲು ಬಿಸಿಸಿಐ ಚಿಂತನೆ ನಡೆಸಿದೆ.  ಆ ಮೂಲಕ ಸಂಭಾವ್ಯ ಕಾನೂನು ಸಮರ ತಡೆಯಲು ಭಾರತ ಮುಂದಾಗಿದೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾಕ್ಕೆ ಬೀರ್ ಪಾರ್ಟಿಗೆ ಆಹ್ವಾನವಿತ್ತ ಸ್ಟೀವ್ ಸ್ಮಿತ್