Select Your Language

Notifications

webdunia
webdunia
webdunia
webdunia

IND vs NZ Test: ಚಿನ್ನಸ್ವಾಮಿ ಮೈದಾನ ಮಳೆಯಿಂದ ಒದ್ದೆ, ಇಂದಿನ ಪಂದ್ಯಕ್ಕೆ ಕಾರ್ಮೋಡ

Chinnaswamy Ground

Krishnaveni K

ಬೆಂಗಳೂರು , ಬುಧವಾರ, 16 ಅಕ್ಟೋಬರ್ 2024 (09:49 IST)
Photo Credit: X
ಬೆಂಗಳೂರು: ಚಿನ್ನಸ್ವಾಮಿ ಮೈದಾನದಲ್ಲಿ ಭಾರೀ ಮಳೆಯಿಂದಾಗಿ ಇಂದು ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಆರಂಭವಾಗಬೇಕಾಗಿದ್ದ ಟೆಸ್ಟ್ ಪಂದ್ಯ ಇನ್ನೂ ಆರಂಭವಾಗಿಲ್ಲ.

ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಕಡೆ ಭಾರೀ ಮಳೆಯಾಗುತ್ತಿದೆ. ಬೆಂಗಳೂರಿನಲ್ಲಿ ನಿನ್ನೆಯಷ್ಟು ಮಳೆ ಇಲ್ಲವಾದರೂ ಇಂದೂ ತುಂತುರು ಮಳೆ, ದಟ್ಟ ಮೋಡ ಕವಿದ ವಾತಾವರಣ ಮುಂದುವರಿದಿದೆ. ನಿನ್ನೆ ಭಾರೀ ಮಳೆ ಸುರಿದಿದ್ದರಿಂದ ಮೈದಾನ ಸಂಪೂರ್ಣವಾಗಿ ಒದ್ದೆಯಾಗಿದೆ.

ಮೈದಾನ ಒಣಗಿಸಲು ತುಂತುರು ಮಳೆ ಬಿಡುತ್ತಿಲ್ಲ.  ಇದರಿಂದಾಗಿ ಮೈದಾನಕ್ಕೆ ಹಾಕಿರುವ ಕವರ್ಸ್ ತೆಗೆಯಲಾಗಿಲ್ಲ. ಪಿಚ್ ನ್ನು ಮುಚ್ಚಲಾಗಿದ್ದರೂ ಹೊರಾವರಣ ಸಂಪೂರ್ಣವಾಗಿ ಒದ್ದೆಯಾಗಿದೆ. ಇಂದು ಪಂದ್ಯ ನಡೆಯುವ ಸಾಧ್ಯತೆಯಿಲ್ಲ ಎಂಬ ಮುನ್ಸೂಚನೆ ಮೊದಲೇ ಇದ್ದಿದ್ದರಿಂದ ಅಭಿಮಾನಿಗಳು ಮೈದಾನಕ್ಕೆ ಬರುವ ಆಸಕ್ತಿ ತೋರುತ್ತಿಲ್ಲ.

ಹವಾಮಾನ ಇಲಾಖೆ ವರದಿ ಪ್ರಕಾರ ಮುಂದಿನ ಮೂರು ದಿನಗಳ ಕಾಲ ಮತ್ತೆ ಮಳೆಯಾಗುವ ನಿರೀಕ್ಷೆಯಿದೆ. ಹೀಗಾಗಿ ಈ ಪಂದ್ಯ ನಡೆಯುವುದೇ ಅನುಮಾನ ಎಂಬ ಪರಿಸ್ಥಿತಿಯಿದೆ. ಹಲವು ದಿನಗಳ ಬಳಿಕ ಚಿನ್ನಸ್ವಾಮಿ ಮೈದಾನದಲ್ಲಿ ಟೆಸ್ಟ್ ಪಂದ್ಯವಾಗುತ್ತಿದೆ. ಆದರೆ ಪಂದ್ಯ ನಡೆಯದೇ ಇರುವುದು ಅಭಿಮಾನಿಗಳಿಗೆ ನಿರಾಸೆ ತಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಫಾರ್ಮ್ ನಲ್ಲಿಲ್ಲಾಂದ್ರೂ ವಿರಾಟ್ ಕೊಹ್ಲಿಯನ್ನು ಬೆಂಬಲಿಸಿದ ಹಾಗೆ ಬಾಬರ್ ಅಜಮ್ ರನ್ನು ಬೆಂಬಲಿಸಬೇಕು