ಲಂಡನ್: ಭಾರತ ಮತ್ತು ಇಂಗ್ಲೆಂಡ್ ನಡುವೆ ಜೂನ್ 20 ರಿಂದ ಆರಂಭವಾಗಲಿರುವ ಐದು ಟೆಸ್ಟ್ ಪಂದ್ಯಗಳ ಸರಣಿಗೆ ಸಚಿನ್ ತೆಂಡುಲ್ಕರ್-ಆಂಡರ್ಸನ್ ಹೆಸರಿಡಲು ಬಿಸಿಸಿಐ ಮತ್ತು ಇಸಿಬಿ ನಿರ್ಧರಿಸಿತ್ತು. ಇದರ ಬೆನ್ನಲ್ಲೇ ಸಚಿನ್ ತಮ್ಮ ಹೆಸರು ಇಡಬೇಡಿ ಎಂದು ಮನವಿ ಮಾಡಿದ್ದಾರೆ. ಇದಕ್ಕೆ ಕಾರಣ ಕೇಳಿದ್ರೆ ಹೆಮ್ಮೆ ಪಡ್ತೀರಿ.
ಭಾರತ ಮತ್ತು ಇಂಗ್ಲೆಂಡ್ ನಡುವಿನ ಸರಣಿಗೆ ಎರಡೂ ದೇಶಗಳ ದಿಗ್ಗಜ ಕ್ರಿಕೆಟಿಗರಾದ ಸಚಿನ್, ಆಂಡರ್ಸನ್ ಹೆಸರನ್ನು ಇಡಲು ತೀರ್ಮಾನಿಸಲಾಗಿತ್ತು. ಆದರೆ ಇದರ ಬೆನ್ನಲ್ಲೇ ಸಚಿನ್ ತಮ್ಮ ಹೆಸರು ಬಳಸದೇ ಈ ಮೊದಲಿನಂತೇ ಪಟೌಡಿ ಟ್ರೋಫಿ ಎಂದು ಕರೆಯುವಂತೆ ಮನವಿ ಮಾಡಿದ್ದಾರೆ.
ಭಾರತದ ಮಾಜಿ ಕ್ರಿಕೆಟ್ ದಿಗ್ಗಜ ಪಟೌಡಿ ಹೆಸರಿನಲ್ಲಿ ಇದುವರೆಗೂ ಭಾರತ-ಇಂಗ್ಲೆಂಡ್ ಸರಣಿ ನಡೆಸಲಾಗುತ್ತಿತ್ತು. ಆದರೆ ಈಗ ಆ ದಿಗ್ಗಜರ ಹೆಸರು ಕಿತ್ತು ಹಾಕಿ ತಮ್ಮ ಹೆಸರು ಇಡುವುದು ಬೇಡ ಎಂದು ತೆಂಡುಲ್ಕರ್ ಮನವಿ ಮಾಡಿದ್ದಾರೆ. ಜೂನ 14 ರಂದು ತೆಂಡುಲ್ಕರ್-ಆಂಡರ್ಸನ್ ಟ್ರೋಫಿ ಅನಾವರಣಗೊಳಿಸಲು ತಯಾರಿ ನಡೆದಿತ್ತು. ಆದರೆ ಅಹಮದಾಬಾದ್ ನಲ್ಲಿ ವಿಮಾನ ದುರಂತವಾಗಿ ನೂರಾರು ಮಂದಿ ಸಾವನ್ನಪ್ಪಿದ ಹಿನ್ನಲೆಯಲ್ಲಿ ಅದ್ಧೂರಿ ಟ್ರೋಫಿ ಅನಾವರಣ ಕಾರ್ಯಕ್ರಮ ರದ್ದುಗೊಳಿಸಲಾಗಿತ್ತು.