Webdunia - Bharat's app for daily news and videos

Install App

ದ್ರಾವಿಡ್ ಕಾಲದಲ್ಲಿ ಇದೆಲ್ಲಾ ನಡೆಯಲ್ಲ: ರವಿಶಾಸ್ತ್ರಿಗೆ ತಿರುಗೇಟು ಕೊಟ್ಟ ಹರ್ಭಜನ್ ಸಿಂಗ್

Webdunia
ಗುರುವಾರ, 27 ಜನವರಿ 2022 (08:45 IST)
ಮುಂಬೈ: ಟೀಂ ಇಂಡಿಯಾ ಮಾಜಿ ಕೋಚ್ ರವಿಶಾಸ್ತ್ರಿ ಹೇಳಿಕೆಯೊಂದಕ್ಕೆ ತಿರುಗೇಟು ಕೊಟ್ಟಿರುವ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಕೋಚ್ ದ್ರಾವಿಡ್ ರನ್ನು ಸಮರ್ಥಿಸಿಕೊಂಡಿದ್ದಾರೆ.

ಕೊಹ್ಲಿ ಇನ್ನಷ್ಟು ದಿನ ಟೀಂ ಇಂಡಿಯಾ ಟೆಸ್ಟ್ ನಾಯಕರಾಗಿ ಮುಂದುವರಿಯಬಹುದಿತ್ತು. ಆದರೆ ಕೆಲವರಿಗೆ ಅವರು ಗೆಲ್ಲುವುದೇ ಇಷ್ಟವಿರಲಿಲ್ಲ ಎಂದು ರವಿಶಾಸ್ತ್ರಿ ಟಾಂಗ್ ಕೊಟ್ಟಿದ್ದರು. ಇದಕ್ಕೆ ತಿರುಗೇಟು ನೀಡಿರುವ ಭಜಿ, ನಾವಂತೂ ಕೊಹ್ಲಿ ಇನ್ನೂ ನಾಯಕರಾಗಿ 40 ಟೆಸ್ಟ್ ಗೆಲುವು ಕಂಡು ಯಶಸ್ವೀ ನಾಯಕನಾಗಲಿ ಎಂದೇ ಬಯಸುತ್ತಿದ್ದೆವು. ರವಿಶಾಸ್ತ್ರಿ ಯಾರನ್ನು ಉದ್ದೇಶಿಸಿ ಹೀಗೆ ಹೇಳಿದರೋ ಗೊತ್ತಿಲ್ಲ ಎಂದಿದ್ದಾರೆ.

ಇನ್ನು, ರವಿಶಾಸ್ತ್ರಿಗೆ ಇನ್ನಷ್ಟು ಟಾಂಗ್ ಕೊಟ್ಟಿರುವ ಭಜಿ, ‘ರಾಹುಲ್ ದ್ರಾವಿಡ್ ಕೋಚ್ ಆಗಿರುವಾಗ ಟೀಂ ಇಂಡಿಯಾ ಮೊದಲ ಓವರ್ ನಿಂದಲೇ ಸ್ಪಿನ್ನರ್ ಗಳಿಗೆ ಸಹಾಯ ಮಾಡುವ ಪಿಚ್ ಗಳಲ್ಲಿ ಆಡಬಹುದು ಎಂದು ನನಗನಿಸುತ್ತಿಲ್ಲ. ಬ್ಯಾಟಿಗರಿಗೂ ನೆರವಾಗುವ ಪಿಚ್ ನಲ್ಲಿ ಆಡುತ್ತಾರೆ. ಕಳೆದ ಮೂರು ವರ್ಷಗಳಲ್ಲಿ ಬ್ಯಾಟಿಗರ ಸಾಧನೆ ಗಮನಿಸಿದರೆ, ನಮ್ಮ ಬ್ಯಾಟಿಗರಿಗೆ ರನ್ ಗಳಿಸುವುದೇ ಮರೆತು ಹೋಗಿದೆ ಎಂದು ಗೊತ್ತಾಗುತ್ತದೆ. ಯಾಕೆಂದರೆ ಕಳೆದ 2-3 ವರ್ಷಗಳಿಂದ ನಮ್ಮ ಬ್ಯಾಟಿಗರು ರನ್ ಮಾಡುತ್ತಲೇ ಇಲ್ಲ. ಬ್ಯಾಟಿಗರು ರನ್ ಗಳಿಸದೇ ಇದ್ದಾಗ ಆಟಗಾರರು ಒತ್ತಡಕ್ಕೆ ಸಿಲುಕುತ್ತಾರೆ. ನೀವು ತವರಿನಲ್ಲಿ ಗೆಲುವು ಕಾಣಬಹುದು ಆದರೆ ಆಟಗಾರರು ಬೆಳೆಯಲ್ಲ’ ಎಂದು ಭಜಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸಚಿನ್ ಪುತ್ರ ಅರ್ಜುನ್ ತೆಂಡುಲ್ಕರ್ ನಿಶ್ಚಿತಾರ್ಥ: ಸಚಿನ್ ಸೊಸೆಯಾಗುತ್ತಿರುವ ಸಾನಿಯಾ ಯಾರು

Rishabh Pant: ಕ್ರಿಕೆಟ್ ಆಡಲಾಗುತ್ತಿಲ್ಲ, ಅಸಹಾಯಕನಾದ ರಿಷಭ್ ಪಂತ್: ವಿಡಿಯೋ ನೋಡಿ

ನಿವೃತ್ತಿ ವದಂತಿಗಳಿಗೆ ಒಂದೇ ಕೆಲಸದಿಂದ ಉತ್ತರ ಕೊಟ್ಟ ರೋಹಿತ್ ಶರ್ಮಾ

ಇಂಗ್ಲೆಂಡ್‌ನಲ್ಲಿ ರನ್‌ಹೊಳೆ ಹರಿಸಿದ ಯುವರಾಜ ಶುಭಮಲ್‌ ಗಿಲ್‌ಗೆ ಮತ್ತೊಂದು ಜವಾಬ್ದಾರಿ ನೀಡಲು ಸಿದ್ಧತೆ

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾಗೆ ಒಂದು ವಿದಾಯ ಪಂದ್ಯವಾಡುವ ಹಕ್ಕೂ ಇಲ್ವೇ

ಮುಂದಿನ ಸುದ್ದಿ
Show comments