ಟೀಂ ಇಂಡಿಯಾ ಈಗ ಒಡೆದ ಮನೆ, ರೋಹಿತ್ ಸ್ಥಾನದ ಮೇಲೆ ಕಣ್ಣಿಟ್ಟಿರುವ ಹಿರಿಯ ಆಟಗಾರ

Krishnaveni K
ಬುಧವಾರ, 1 ಜನವರಿ 2025 (11:17 IST)
ಸಿಡ್ನಿ: ಸತತ ಸೋಲುಗಳಿಂದ ಕಂಗೆಟ್ಟಿರುವ ಟೀಂ ಇಂಡಿಯಾ ಈಗ ಒಡೆದ ಮನೆಯಂತಾಗಿದೆ ಎನ್ನಲಾಗಿದೆ. ರೋಹಿತ್ ಸ್ಥಾನದ ಮೇಲೆ ಓರ್ವ ಹಿರಿಯ ಆಟಗಾರ ಕಣ್ಣಿಟ್ಟಿದ್ದಾರೆ ಎಂದು ವರದಿಯಾಗಿದೆ.

ನ್ಯೂಜಿಲೆಂಡ್ ವಿರುದ್ಧ ಸರಣಿ ವೈಟ್ ವಾಶ್ ಅವಮಾನ, ಆಸ್ಟ್ರೇಲಿಯಾ ವಿರುದ್ಧ ಸತತ ಸೋಲು, ಬ್ಯಾಟಿಂಗ್ ವೈಫಲ್ಯ, ಡಬ್ಲ್ಯುಟಿಸಿ ಫೈನಲ್ ಅವಕಾಶ ಮಿಸ್ ಆಗಿರುವುದು ಟೀಂ ಇಂಡಿಯಾದಲ್ಲಿ ಒಡಕು ಮೂಡಿಸಿದೆ ಎನ್ನಲಾಗಿದೆ. ಜೊತೆಗೆ ತಂಡದ ಆಟಗಾರರ ಮೇಲೆ ಸ್ವತಃ ಕೋಚ್ ಗೌತಮ್ ಗಂಭೀರ್ ಆಕ್ರೋಶಗೊಂಡಿದ್ದಾರಂತೆ.

ರೋಹಿತ್ ಶರ್ಮಾ ನಾಯಕತ್ವಕ್ಕೆ ರಾಜೀನಾಮೆ ಕೊಡಲು ತಂಡದೊಳಗೇ ಒತ್ತಾಯವಿದೆ. ಇದೇ ಆಸ್ಟ್ರೇಲಿಯಾ ಸರಣಿಯ ನಡುವೆಯೇ ರೋಹಿತ್ ನಾಯಕತ್ವ ತ್ಯಜಿಸಿದರೂ ಅವರ ಸ್ಥಾನ ತುಂಬಲು ರೆಡಿ ಎಂದು ಓರ್ವ ಹಿರಿಯ ಆಟಗಾರನೇ ಹೇಳಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಆಟಗಾರ ಯಾರು ಎಂದು ಬಹಿರಂಗವಾಗಿಲ್ಲ.

ಎಲ್ಲಕ್ಕಿಂತ ಹೆಚ್ಚಾಗಿ ಕೋಚ್ ಗೌತಮ್ ಗಂಭೀರ್ ಚೇತೇಶ್ವರ ಪೂಜಾರರನ್ನು ಆಸೀಸ್ ಸರಣಿಗೆ ತಂಡಕ್ಕೆ ಸೇರಿಸಿಕೊಳ್ಳಬೇಕು ಎಂದು ಬಿಸಿಸಿಐ ಮುಂದೆ ಬೇಡಿಕೆಯಿಟ್ಟಿದ್ದರಂತೆ. ಪೂಜಾರ ಟೆಸ್ಟ್ ಕ್ರಿಕೆಟ್ ನ ಸ್ಪೆಷಲಿಸ್ಟ್ ಆಟಗಾರ. ಹಿರಿಯ ಆಟಗಾರನಿಗೆ ಆಸೀಸ್ ವಿರುದ್ಧ ಉತ್ತಮ ದಾಖಲೆಯಿದೆ. ಹೀಗಾಗಿ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಬೇಕೆಂದು ಗಂಭೀರ್ ತುಂಬಾ ಒತ್ತಾಯಿಸಿದ್ದರಂತೆ. ಆದರೆ ಬಿಸಿಸಿಐ ಇದಕ್ಕೆ ಒಪ್ಪಿಲ್ಲ ಎನ್ನಲಾಗುತ್ತಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IPL Auction 2026: ಕ್ಯಾಮರೂನ್ ಗ್ರೀನ್ ಗೆ 25 ಕೋಟಿ, ಮಹೇಶ್ ಪತಿರಾಣಗೆ 18 ಕೋಟಿ: ಐಪಿಎಲ್ ಭರ್ಜರಿ ಸೇಲ್

ಐಪಿಎಲ್‌ ಮಿನಿ ಹರಾಜಿಗೆ ಕ್ಷಣಗಣನೆ: ಯಾರಿಗೆ ಒಲಿಯಲಿದೆ ಜಾಕ್‌ಪಾಟ್‌, ನೇರಪ್ರಸಾರದ ಮಾಹಿತಿ ಇಲ್ಲಿದೆ

ಜಸ್ಪ್ರೀತ್ ಬುಮ್ರಾ ದಿಡೀರ್ ಮನೆಗೆ ಮರಳಿದ್ದೇಕೆ, ಕಾರಣ ಬಯಲು

ಫಾರ್ಮ್ ಕಳೆದುಕೊಂಡಿದ್ದೀರಾ ಎಂದರೆ ಅಳಿಯ ಅಲ್ಲ ಮಗಳ ಗಂಡ ಎಂದ ಸೂರ್ಯಕುಮಾರ್ ಯಾದವ್

ಹರ್ಷಿತ್ ರಾಣಾಗೆ ಮಾತ್ರ ಸ್ಪೆಷಲ್ ಅಭಿನಂದನೆ ಸಲ್ಲಿಸಿದ ಗಂಭೀರ್: ಇದು ಸರೀನಾ ಎಂದ ಫ್ಯಾನ್ಸ್ video

ಮುಂದಿನ ಸುದ್ದಿ
Show comments