Webdunia - Bharat's app for daily news and videos

Install App

ಏರ್ ಇಂಡಿಯಾ ವಿಮಾನ ಹತ್ತಲ್ಲ ಎಂದ ಡೇವಿಡ್ ವಾರ್ನರ್: ನಾವೂ ಹೋಗಲ್ಲ ಎಂದ ನೆಟ್ಟಿಗರು

Krishnaveni K
ಶನಿವಾರ, 14 ಜೂನ್ 2025 (10:00 IST)
Photo Credit: X
ಅಹಮದಾಬಾದ್: ಗುಜರಾತ್ ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ದುರಂತದ ಬಳಿಕ ಆಕ್ರೋಶದಿಂದ ಸಂದೇಶ ಬರೆದಿರುವ ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್ ವಾರ್ನರ್ ಇನ್ಮುಂದೆ ಏರ್ ಇಂಡಿಯಾ ವಿಮಾನ ಹತ್ತಲ್ಲ ಎಂದಿದ್ದಾರೆ. ಇದೀಗ ಸಾರ್ವಜನಿಕರೂ ಇದೇ ಮಾತನ್ನು ಹೇಳುತ್ತಿದ್ದಾರೆ.

ಗುಜರಾತ್ ನಲ್ಲಿ ನಡೆದ ದುರಂತದ ಬಳಿಕ ಏರ್ ಇಂಡಿಯಾ ವಿಮಾನದ ಸುರಕ್ಷತೆ ಬಗ್ಗೆಯೇ ಪ್ರಯಾಣಿಕರಿಗೆ ಅನುಮಾನ ಶುರುವಾಗಿದೆ. ಘಟನೆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಆಸೀಸ್ ಕ್ರಿಕೆಟಿಗ ಡೇವಿಡ್ ವಾರ್ನರ್ ನಾನು ಇನ್ನು ಮುಂದೆ ಯಾವತ್ತೂ ಏರ್ ಇಂಡಿಯಾದಲ್ಲಿ ಪ್ರಯಾಣ ಬೆಳೆಸಲ್ಲ. ಏರ್ ಇಂಡಿಯಾ ಜೊತೆ ಇದೇ ನನ್ನ ಕೊನೆಯ ಸಂಭಾಷಣೆ ಎಂದಿದ್ದಾರೆ.

ಈ ಘಟನೆಯಲ್ಲಿ ಸಿಬ್ಬಂದಿಗಳಲ್ಲ ಇಡೀ ಏರ್ ಇಂಡಿಯಾ ಕಂಪನಿಯದ್ದೇ ತಪ್ಪು. ಆದರೆ ಕಂಪನಿ ಯಾವತ್ತೂ ಇದರ ಜವಾಬ್ಧಾರಿ ಹೊತ್ತುಕೊಳ್ಳಲ್ಲ ಎಂದು ಏರ್ ಇಂಡಿಯಾದ ಮಾಜಿ ನೌಕರರೊಬ್ಬರ ಕಾಮೆಂಟ್ ಟ್ಯಾಗ್ ಮಾಡಿ ವಾರ್ನರ್ ಇದೇ ಕೊನೆ ಇನ್ನು ಮುಂದೆ ಏರ್ ಇಂಡಿಯಾದಲ್ಲಿ ಪ್ರಯಾಣ ಮಾಡಲ್ಲ ಎಂದಿದ್ದಾರೆ.

ಇನ್ನು ಡೇವಿಡ್ ವಾರ್ನರ್ ರಂತೆ ಅನೇಕರು ಈಗ ನಾವೂ ಏರ್ ಇಂಡಿಯಾ ಟಿಕೆಟ್ ಬುಕ್ ಮಾಡಿದ್ವಿ. ಇನ್ನೀಗ ನಮಗೆ ಈ ವಿಮಾನದಲ್ಲಿ ಪ್ರಯಾಣ ಮಾಡಲು ಭಯವಾಗುತ್ತದೆ. ನಮ್ಮ ಟಿಕೆಟ್ ಕ್ಯಾನ್ಸಲ್ ಮಾಡಿದ್ದೇವೆ ಎಂದು ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ. ಇದು ಟ್ರೆಂಡ್ ಆದರೆ ಏರ್ ಇಂಡಿಯಾಗೆ ಸಂಕಷ್ಟ ತಂದೊಡ್ಡಲಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs ENG: ಕೆಎಲ್ ರಾಹುಲ್ ಟೀಂ ಇಂಡಿಯಾಗೆ ನೀವೇ ಗತಿ

IND vs ENG: ದ್ವಿತೀಯ ಇನಿಂಗ್ಸ್ ನಲ್ಲಿ ಟೀಂ ಇಂಡಿಯಾಕ್ಕೆ ಇದೆಂಥಾ ಅವಸ್ಥೆ

ಶಮಿ ಡ್ರಾಪ್ ಮಾಡಿಸಿದ್ರು, ರೋಹಿತ್, ಕೊಹ್ಲಿ, ಅಶ್ವಿನ್ ನಿವೃತ್ತಿ ಮಾಡಿಸಿದ್ರು: ಗಂಭೀರ್ ವಿರುದ್ಧ ಆರೋಪ ಪಟ್ಟಿ

ಗೌತಮ್ ಗಂಭೀರ್ ತಾನಾಗಿಯೇ ಕೋಚ್ ಹುದ್ದೆ ಬಿಟ್ರೆ ಒಳ್ಳೇದು

ಮಹಿಳಾ ಚೆಸ್ ವಿಶ್ವಕಪ್ ಫೈನಲ್‌ಗೆ ದಿವ್ಯಾ ದೇಶಮುಖ್‌, ಕೋನೇರು ಹಂಪಿ: ಯಾರೇ ಗೆದ್ದರೂ ಭಾರತಕ್ಕೆ ಕಿರೀಟ

ಮುಂದಿನ ಸುದ್ದಿ
Show comments