Webdunia - Bharat's app for daily news and videos

Install App

ಮೊಹಮ್ಮದ್ ಶಮಿ ರಂಜಾನ್ ಉಪವಾಸ ಮುರಿದಿದ್ದಕ್ಕೆ ಸಿಕ್ತು ಕಾಂಗ್ರೆಸ್ ನಾಯಕಿ ಶಮಾ ಮೊಹಮ್ಮದ್ ಬೆಂಬಲ

Krishnaveni K
ಶುಕ್ರವಾರ, 7 ಮಾರ್ಚ್ 2025 (11:47 IST)
ದುಬೈ: ಇತ್ತೀಚೆಗೆ ರೋಹಿತ್ ಶರ್ಮಾ ಡುಮ್ಮ ಎಂದು ತೆಗಳಿ ಕೆಂಗಣ್ಣಿಗೆ ಗುರಿಯಾಗಿದ್ದ ಕಾಂಗ್ರೆಸ್ ವಕ್ತಾರೆ ಶಮಾ ಮೊಹಮ್ಮದ್ ಈಗ ರಂಜಾನ್ ಉಪವಾಸ ಕೈ ಬಿಟ್ಟು ಮುಸ್ಲಿಮರ ಕೆಂಗಣ್ಣಿಗೆ ಗುರಿಯಾಗಿರುವ ಕ್ರಿಕೆಟಿಗ ಮೊಹಮ್ಮದ್ ಶಮಿ ಬೆಂಬಲಕ್ಕೆ ನಿಂತಿದ್ದಾರೆ.

ರೋಹಿತ್ ಶರ್ಮಾ ದಪ್ಪಗಿದ್ದಾರೆ, ಅವರು ನಾಯಕರು ಆಗಲು ಅನ್ ಫಿಟ್ ಎಂದು ಶಮಾ ನೀಡಿದ್ದ ಹೇಳಿಕೆ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಕೊನೆಗೆ ಸ್ವತಃ ಕಾಂಗ್ರೆಸ್ ಹೈಕಮಾಂಡ್ ಶಮಾಗೆ ಛೀಮಾರಿ ಹಾಕಿತ್ತು. ಇದಾದ ಬಳಿಕ ಅವರು ಸೈಲೆಂಟ್ ಆಗಿದ್ದರು.

ಇದೀಗ ಮೊಹಮ್ಮದ್ ಶಮಿ ರಂಜಾನ್ ಉಪವಾಸ ಕೈ ಬಿಟ್ಟಿರುವ ಬಗ್ಗೆ ಟೀಕೆಗೆ ಗುರಿಯಾಗಿದ್ದು ಅವರ ಬೆಂಬಲಕ್ಕೆ ನಿಂತಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಸೆಮಿಫೈನಲ್ ಪಂದ್ಯದಲ್ಲಿ ರಂಜಾನ್ ಉಪವಾಸವನ್ನೂ ಕೈ ಬಿಟ್ಟು ಹಣ್ಣಿನ ರಸ ಸೇವನೆ ಮಾಡುತ್ತಿರುವ ಶಮಿ ಫೋಟೋ ವೈರಲ್ ಆಗಿತ್ತು. ದೇಶಕ್ಕಾಗಿ ಉಪವಾಸ ಕೈ ಬಿಟ್ಟರು ಎಂದು ಹಲವರು ಕೊಂಡಾಡಿದ್ದರು. ಆದರೆ ಕೆಲವು ಮುಸ್ಲಿಂ ಧರ್ಮಗುರುಗುಳು ಶಮಿಯನ್ನು ಟೀಕಿಸಿದ್ದರು. ಎಂತಹದ್ದೇ ಕಷ್ಟವಿದ್ದರೂ ಧರ್ಮದ ಆಚರಣೆ ಬಿಡಬಾರದು ಎಂದಿದ್ದರು.


ಇದೀಗ ಶಮಿ ಬೆಂಬಲಕ್ಕೆ ಶಮಾ ನಿಂತಿದ್ದಾರೆ. ಮುಸ್ಲಿಮರು ಪ್ರಯಾಣ ಮಾಡುವಾಗ ಉಪವಾಸ ಕೈ ಬಿಟ್ಟರೆ ತೊಂದರೆಯಿಲ್ಲ. ಮೊಹಮ್ಮದ್ ಶಮಿ ಪ್ರಯಾಣ ಮಾಡುತ್ತಿದ್ದಾರೆ. ಹೀಗಾಗಿ ಉಪವಾಸ ಕೈ ಬಿಟ್ಟರೆ ತಪ್ಪಿಲ್ಲ. ಅಲ್ಲದೆ ಅವರು ಕ್ರೀಡಾಳು, ಹೀಗಾಗಿ ಬಾಯಾರುವುದು ಸಹಜ. ಕ್ರೀಡೆಯಲ್ಲಿ ಭಾಗಿಯಾಗಿರುವಾಗ ಉಪವಾಸವಿರಬೇಕು ಎಂದು ಯಾರೂ ಹೇಳಲ್ಲ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಜೂನ್ 14 ಆರ್ ಸಿಬಿ ಪಾಲಿಗೆ ಮಹತ್ವದ ದಿನ: ಅಭಿಮಾನಿಗಳ ಆತಂಕ ನಿಜ ಮಾಡುತ್ತಾ ಬಿಸಿಸಿಐ

KL Rahul: ಇಂಗ್ಲೆಂಡ್ ನಲ್ಲಿ ಕೆಎಲ್ ರಾಹುಲ್ ಗೆ ಜೀವದ ಗೆಳೆಯನಿಂದಲೇ ಕುತ್ತು

WTC Final: ರಬಾಡ ದಾಳಿಗೆ ತತ್ತರಿಸಿದ ಕಾಂಗರೂ ಪಡೆ: ದಕ್ಷಿಣ ಆಫ್ರಿಕಾ ತಂಡವೂ ಆರಂಭದಲ್ಲೇ ಕುಸಿತ

WTC Final: ಆಸ್ಟ್ರೇಲಿಯಾ, ಆಫ್ರಿಕಾ ನಡುವೆ ಫೈನಲ್, ಟೀಂ ಇಂಡಿಯಾಗೂ ಸಿಗಲಿದೆ ದುಡ್ಡು

RCB: ಆರ್ ಸಿಬಿ ತಂಡ ಮಾರಾಟಕ್ಕಿದೆ: ಕೊಳ್ಳಲು ದೊಡ್ಡ ಕುಳವೇ ಆಗಿರ್ಬೇಕು ಬಿಡಿ

ಮುಂದಿನ ಸುದ್ದಿ
Show comments