Select Your Language

Notifications

webdunia
webdunia
webdunia
webdunia

ಚೆನ್ನೈ ಸೂಪರ್ ಕಿಂಗ್ಸ್ ಪಾಳಯದಲ್ಲಿ ಆಗಲೇ ತಾಲೀಮು ಶುರು

ಚೆನ್ನೈ ಸೂಪರ್ ಕಿಂಗ್ಸ್ ಪಾಳಯದಲ್ಲಿ ಆಗಲೇ ತಾಲೀಮು ಶುರು
Chennai , ಭಾನುವಾರ, 25 ಜೂನ್ 2017 (08:24 IST)
ಚೆನ್ನೈ: ಮುಂದಿನ ಐಪಿಎಲ್ ಆವೃತ್ತಿಗೆ ಮರಳಲು ಹಾತೊರೆಯುತ್ತಿರುವ ಐಪಿಎಲ್ ಕ್ರಿಕೆಟ್ ನ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈಗಿಂದಲೇ ತಾಲೀಮು ಶುರುಮಾಡಿದೆ.

 
ಮ್ಯಾಚ್ ಫಿಕ್ಸಿಂಗ್ ಕಳಂಕದಿಂದಾಗಿ ಚೆನ್ನೈ ತಂಡ ಹಾಗೂ ಮಾಲಿಕ ಎನ್. ಶ್ರೀನಿವಾಸನ್ ಅಳಿಯ ಗುರುನಾಥ್ ಮೇಯಪ್ಪನ್ ಗೆ ಮೂರು ವರ್ಷ ಐಪಿಎಲ್ ನಿಂದ ನಿಷೇಧ ಹೇರಲಾಗಿತ್ತು. ಇದೀಗ ಮತ್ತೆ ಗುರುನಾಥ್ ಪ್ರತ್ಯಕ್ಷರಾಗಿದ್ದಾರೆ.

ಈ ವರ್ಷದ ಆವೃತ್ತಿಗೆ ಫುಲ್ ತಯಾರಿ ನಡೆಸುತ್ತಿರುವ ಗುರುನಾಥ್ ಟ್ವಿಟರ್ ಖಾತೆಯಲ್ಲಿ ಮತ್ತೆ ಸಕ್ರಿಯರಾಗಿದ್ದಾರೆ. ಇದರೊಂದಿಗೆ ಮತ್ತೆ ತಮ್ಮ ತಂಡ ಸಕ್ರಿಯವಾಗುತ್ತಿರುವ ಸೂಚನೆ ನೀಡಿದ್ದಾರೆ. ಚೆನ್ನೈ ಮತ್ತು ರಾಜಸ್ಥಾನ್ ತಂಡ ಕಣಕ್ಕಿಳಿಯುವುದರಿಂದ ಪುಣೆ ಮತ್ತು ಗುಜರಾತ್ ತಂಡಗಳು ಹೊಸದಾಗಿ ಈ ವರ್ಷದ ಆವೃತ್ತಿಗೆ ಬಿಡ್ಡಿಂಗ್ ನಡೆಸಬೇಕಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೊಮ್ಮೆ ಪಾಕಿಸ್ತಾನಕ್ಕೆ ಸೋಲಿನ ರುಚಿ ತೋರಿಸಿದ ಭಾರತ