ಜಿಂಬಾಬ್ವೆ ವಿರುದ್ಧ ಮೊದಲ ಟಿ 20 ಪಂದ್ಯದಲ್ಲಿ ಕೇವಲ 2 ರನ್ ಅಂತರದಿಂದ ಸೋತಿದ್ದ ಭಾರತ ತಂಡ 2ನೇ ಟಿ ಟ್ವೆಂಟಿಯಲ್ಲಿ ಜಿಂಬಾಬ್ವೆ ತಂಡವನ್ನು 9 ವಿಕೆಟ್ಗೆ 99 ರನ್ ಅಲ್ಪ ಮೊತ್ತಕ್ಕೆ ಔಟ್ ಮಾಡುವ ಮೂಲಕ 1-1 ಸಮಮಾಡಿಕೊಂಡು ಸೇಡು ತೀರಿಸಿಕೊಳ್ಳುವ ಹಾದಿಯಲ್ಲಿದೆ.
ಬರೀಂದರ್ ಸ್ರಾನ್ ಮತ್ತು ಜಸ್ಪ್ರೀತ್ ಬುಮ್ರಾ ಅವರ ವೇಗದ ಬೌಲಿಂಗ್ ದಾಳಿಗೆ ತತ್ತರಿಸಿದ ಜಿಂಬಾಬ್ವೆ ತಂಡದ ಬ್ಯಾಟ್ಸ್ಮನ್ಗಳು ತರಗೆಲೆಗಳಂತೆ ಉದುರಿ ಪೆವಿಲಿಯನ್ ಮಾರ್ಚ್ಫಾಸ್ಟ್ ಮಾಡಿದರು. ಜಸ್ಪ್ರೀತ್ ಬುಮ್ರಾ 3 ವಿಕೆಟ್ ಕಬಳಿಸಿದರೆ, ಬರೀಂದರ್ ಸ್ರಾನ್ 4 ವಿಕೆಟ್ ಕಬಳಿಸಿದರು.
ಸ್ರಾನ್ ಮತ್ತು ಬುಮ್ರಾ ಅತ್ಯಂತ ಪರಿಣಾಮಕಾರಿ ಬೌಲಿಂಗ್ ಮಾಡಿದ್ದು, ಸ್ರಾನ್ ನಾಲ್ಕು ಓವರುಗಳಲ್ಲಿ ಕೇವಲ 10 ರನ್ ನೀಡಿದ್ದರೆ, ಬುಮ್ರಾ 4 ಓವರುಗಳಲ್ಲಿ 11 ರನ್ ಮಾತ್ರ ನೀಡಿದ್ದಾರೆ. ಬರೀಂದರ್ ಅವರ ಮಾರಕ ದಾಳಿಗೆ ಆರಂಭದಲ್ಲೇ ಚಿಬಾಬಾ, ಮಸಕಾಡ್ಜಾ, ಸಿಕಂದರ್ ರಾಜಾ, ಮುಂಟೋಂಬೋಡ್ಜಿ ಔಟಾದರು.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.